ನಕಲಿ ಕೀ ಬಳಸಿ ಬೈಕ್ ಕಳವು: ಮೂವರು ಆರೋಪಿಗಳ ಬಂಧನ
![ನಕಲಿ ಕೀ ಬಳಸಿ ಬೈಕ್ ಕಳವು: ಮೂವರು ಆರೋಪಿಗಳ ಬಂಧನ ನಕಲಿ ಕೀ ಬಳಸಿ ಬೈಕ್ ಕಳವು: ಮೂವರು ಆರೋಪಿಗಳ ಬಂಧನ](https://www.varthabharati.in/sites/default/files/images/articles/2019/10/29/216910-1572362122.jpg)
ದಾವಣಗೆರೆ, ಅ.29: ನಕಲಿ ಕೀ ಬಳಸಿ ಬೈಕ್ಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ನಿಟುವಳ್ಳಿಯ ಸತೀಶ ಕೆ, ನಾಗರಾಜ ಅಲಿಯಾಸ್ ಕೆಪ್ಪನಾಗ, ಗಣೇಶ ಬಂಧಿತ ಆರೋಪಿಗಳು.
ಪೊಲೀಸರು ಗಸ್ತು ತಿರುಗುತ್ತಿದ್ದಾಗ ಈ ಮೂವರು ಮೋಟರ್ ಸೈಕಲ್ನಲ್ಲಿ ಬರುತ್ತಿದ್ದು, ಪೊಲೀಸರ ಜೀಪ್ ನೋಡಿ ಗಾಬರಿಯಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಕಾವೇರಿ ಬೇಕರಿ ಮುಂಭಾಗ ನಿಲ್ಲಿಸಿದ್ದ ಬೈಕ್ಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡಿರುವ ವಿಷಯವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
Next Story