ವಂಚನೆ ಪ್ರಕರಣ: ದೂರು ದಾಖಲು
ಮಂಗಳೂರು, ಅ.29: ಸುರತ್ಕಲ್ ಸುತ್ತಮುತ್ತ ಕಾರುಗಳನ್ನು ಕಂಪೆನಿ ಹಾಗೂ ವ್ಯಕ್ತಿಗಳಿಗೆ ಲೀಸ್ಗೆ ಕೊಡುವ ವ್ಯವಹಾರ ಮಾಡುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದ ಮೇಲೆ ಪುತ್ತೂರು ಮರಿಲ್ ನಿವಾಸಿ ಎನ್.ಇಬ್ರಾಹೀಂ ಖಲೀಲ್ (28) ಎಂಬಾತನ ವಿರುದ್ದ ಉಡುಪಿ ಕೊಕ್ಕರ್ಣೆಯ ರಮೇಶ್ ಕುಮಾರ್ ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಸೆರೆ ವಿಧಿಸಲಾಗಿದೆ. ಆರೋಪಿಯು ಕಾರನ್ನು ಕಂಪೆನಿಗೆ ಲೀಸ್ ಕೊಡುವುದಾಗಿ ಹೇಳಿ ದಿನಕ್ಕೆ ಸಾವಿರ ರೂ.ನಂತೆ ಕೊಡುವುದಾಗಿ ನಂಬಿಸಿ, ವಂಚಿಸಿದ್ದ ಎಂದು ಆರೋಪಿಸಲಾಗಿದೆ.
Next Story