'ಟಿಆರ್ಎಫ್' ವತಿಯಿಂದ ಅಬುಲ್ ಕಲಾಂ ಅಝಾದ್ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ
![ಟಿಆರ್ಎಫ್ ವತಿಯಿಂದ ಅಬುಲ್ ಕಲಾಂ ಅಝಾದ್ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ ಟಿಆರ್ಎಫ್ ವತಿಯಿಂದ ಅಬುಲ್ ಕಲಾಂ ಅಝಾದ್ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ](https://www.varthabharati.in/sites/default/files/images/articles/2019/10/29/216941-1572368474.jpg)
ಮಂಗಳೂರು, ಅ.29: ಟ್ಯಾಲೆಂಟ್ ರಿಸರ್ಚ ಫೌಂಡೇಶನ್ ವತಿಯಿಂದ ಭಾರತ ರತ್ನ ಅಬುಲ್ ಕಲಾಂ ಅಝಾದ್ ಜನ್ಮದಿನಾಚರಣೆಯ ಅಂಗವಾಗಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾಥಿಗಳಿಗೆ ಭಾಷಣ, ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ ಮತ್ತು ಕವನ ರಚನೆ ಸ್ಪರ್ಧೆಯು ಮಂಗಳವಾರ ನಗರದ ಬದ್ರಿಯಾ ಕಾಲೇಜಿನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆಎಂಕೆ ಮಂಜನಾಡಿ ಸ್ವತಂತ್ರ ಭಾರತದ ಪ್ರಪ್ರಥಮ ಶಿಕ್ಷಣ ಮಂತ್ರಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಪ್ರತಿಮ ಸ್ವಾತಂತ್ರ ಸೇನಾನಿ ಅಬುಲ್ ಕಲಾಂ ಅಝಾದರು ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದರು.
ಟಿಆರ್ಎಫ್ ಸಂಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ, ವಿದ್ಯಾರ್ಥಿಗಳು ಸಣ್ಣ ಸಣ್ಣ ಕನಸುಗಳನ್ನು ಕಾಣುವ ಬದಲು ಎಪಿಜೆ ಅಬ್ದುಲ್ ಕಲಾಂ ಕಂಡಂತೆ ದೊಡ್ಡ ದೊಡ್ಡ ಕನಸುಗಳನ್ನು ಕಂಡು ಅವುಗಳ ಸಾಕಾರಕ್ಕೆ ಪ್ರಯತ್ನಿಸಬೇಕು ಎಂದರು.
ಟಿಆರ್ಎಫ್ ಗೌರವ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹನೀಫ್ ಖಾನ್ ಕೊಡಾಜೆ, ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಮಾಜಿ ಪ್ರಧಾನ ಕಾರ್ಯದರ್ಶಿ ಸಮೀವುಲ್ಲಾ ವಗ್ಗ, ಉಪನ್ಯಾಸಕ ಅಬ್ದುಲ್ ಮಜೀದ್, ಶಿಕ್ಷಕ ಹಾರಿಸ್ ಬಾಂಬಿಲ, ಶಿಕ್ಷಕಿ ಅಸ್ಮಾ ಮತ್ತಿತರರರು ಉಪಸ್ಥಿತರಿದ್ದರು. ಸದಸ್ಯರಾದ ನಕಾಶ್ ಬಾಂಬಿಲ, ಹುಸೈನ್ ಬಡಿಲ, ಅಬ್ದುಲ್ ಸಲಾಂ ಪೆರ್ನೆ, ಅಬ್ದುಲ್ ಮಜೀದ್ ತುಂಬೆ ಸಹಕರಿಸಿದರು.
ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಸದಸ್ಯ ಅಬ್ದುಲ್ ಜಸೀಮ್ ಸಜಿಪ ವಂದಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.