ಮನಪಾ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಮಧುಸೂದನ ಕೆ.ಟಿ ನಾಮಪತ್ರ ಸಲ್ಲಿಕೆ
![ಮನಪಾ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಮಧುಸೂದನ ಕೆ.ಟಿ ನಾಮಪತ್ರ ಸಲ್ಲಿಕೆ ಮನಪಾ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಮಧುಸೂದನ ಕೆ.ಟಿ ನಾಮಪತ್ರ ಸಲ್ಲಿಕೆ](https://www.varthabharati.in/sites/default/files/images/articles/2019/10/31/217180-1572522531.jpg)
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 22ನೇ ಕದ್ರಿ ಪದವು ವಾರ್ಡ್ ನಿಂದ ಇಂದು ಜಾತ್ಯತೀತ ಜನತಾ ದಳದ (ಜೆಡಿಎಸ್)ಪಕ್ಷದ ಅಭ್ಯರ್ಥಿಯಾಗಿ ಮಧುಸೂದನ ಕೆ.ಟಿ ಅವರು ಮಂಗಳೂರು ನಗರದ ಜಿಲ್ಲಾ ಸಣ್ಣ ಕೈಗಾರಿಕಾ ಕಚೇರಿ ಯೆಯ್ಯಾಡಿಯಲ್ಲಿ ಚುನಾವಣಾಧಿಕಾರಿ ಗೋಕುಲ್ ದಾಸ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮಧುಸೂದನ ಕೆ.ಟಿ, ಪಕ್ಷ ನಿಷ್ಠೆ-ಯುವ ನಾಯಕತ್ವವನ್ನು ಗುರುತಿಸಿ 22ನೇ ಕದ್ರಿ ಪದವು ವಾರ್ಡಿನಿಂದ ಟಿಕೆಟ್ ನೀಡಿದ್ದಾರೆ. ಇದಕ್ಕೆ ಶ್ರಮಿಸಿದ ಜಿಲ್ಲಾ ನಾಯಕರುಗಳಿಗೆ ಕ್ಷೇತ್ರ ಅಧ್ಯಕ್ಷರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಇಲ್ಲಿನ ಜನತೆಯ ಮೂಲಭೂತ ಕುಂದು-ಕೂರತೆಗಳಿಗೆ ಸ್ಪಂದಿಸದೇ ಇರುವ ಸಂದರ್ಭದಲ್ಲಿ ಈ ವಾರ್ಡಿನ ಸಮಗ್ರ ಅಭಿವೃದ್ಧಿ ಹಾಗೂ ವಾರ್ಡಿನ ಮತದಾರ ಬಂಧುಗಳ ಧ್ವನಿಯಾಗಿ ಇರಲು ಸ್ಪರ್ಧೆ ಮಾಡುತ್ತಿದ್ದೇನೆ. ಅದೇ ರೀತಿ ವಾರ್ಡಿನ ಮತದಾರರಿಗೆ ಸಿಗಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ನಿಷ್ಠೆಯಿಂದ ತಮಗೆ ತಲುಪಿಸಿ ವಾರ್ಡಿನ ಜನತೆಯ ಸೇವೆ ಮಾಡಲು ನನಗೆ ತಾವೆಲ್ಲರೂ ಸಹಕರಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ, ಮಂಗಳೂರು ನಗರ ದಕ್ಷಿಣ ಅಧ್ಯಕ್ಷರಾದ ವಸಂತ ಪೂಜಾರಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ರಾಮ್ ಗಣೇಶ್,ವಾರ್ಡಿನ ನಿವಾಸಿ ಹಾಗೂ ಸಮಾಜ ಮುಖಿ ಚಿಂತಕರಾದ ರಾಮಕೃಷ್ಣ ಮಯ್ಯ ಬಾರೆಬೈಲು, ಜಿಲ್ಲಾ ಯುವ ಜನತಾದಳದ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಫೈಸಲ್, ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಆಸಿಫ್, ಸೋನಲ್ ನಾಯಕ್ ಯೆಯ್ಯಾಡಿ, ಚಂದ್ರಹಾಸ ಉದಯನಗರ, ರೀಚಮ್ ಸಲ್ದಾನ ಬಾರೆಬೈಲು ವಾರ್ಡಿನ ಇತರೆ ನಾಗರಿಕರಿರು ಉಪಸ್ಥಿತರಿದ್ದರು