ಕೊಡಗಿನ ಖಾಝಿ, ಹಿರಿಯ ವಿದ್ವಾಂಸ ಪೂಕಳಂ ಉಸ್ತಾದ್ ಇನ್ನಿಲ್ಲ
![ಕೊಡಗಿನ ಖಾಝಿ, ಹಿರಿಯ ವಿದ್ವಾಂಸ ಪೂಕಳಂ ಉಸ್ತಾದ್ ಇನ್ನಿಲ್ಲ ಕೊಡಗಿನ ಖಾಝಿ, ಹಿರಿಯ ವಿದ್ವಾಂಸ ಪೂಕಳಂ ಉಸ್ತಾದ್ ಇನ್ನಿಲ್ಲ](https://www.varthabharati.in/sites/default/files/images/articles/2019/10/31/217201-1572530296.jpg)
ಮಡಿಕೇರಿ, ಅ.31: ಮಡಿಕೇರಿಯ ಭಟ್ಕಳ್ ಹಾಗೂ ಎಂಎಂ ಮಸೀದಿ ಸೇರಿದಂತೆ ಜಿಲ್ಲೆಯ 45ಕ್ಕೂ ಅಧಿಕ ಜಮಾಅತ್ ಗಳ ಖಾಝಿಯಾಗಿದ್ದ ಹಿರಿಯ ವಿದ್ವಾಂಸ, ಪೂಕಳಂ ಅಬ್ದುಲ್ಲ ಮುಸ್ಲಿಯಾರ್ (85) ಅವರು ಇಂದು ವಿಧಿವಶರಾದರು.
ಪತ್ನಿ, 6 ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ. ತಾ.1 ರಂದು (ನಾಳೆ) ಬೆಳಗ್ಗೆ 9ಗಂಟೆಗೆ ಕೇರಳದ ಕಾಞಂಗಾಡಿನ ನರಙಂಡಿಯಲ್ಲಿ ನಡೆಯಲಿದೆ.
ಮೃತರ ಸ್ಮರಣಾರ್ಥ ಶುಕ್ರವಾರ ಜುಮಾ ನಮಾಝಿನ ಬಳಿಕ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸುವಂತೆ ನಗರದ ಎಂ ಎಂ ಮಸೀದಿಯ ಧರ್ಮಗುರು ಹಮೀದ್ ಮದನಿ ಕರೆ ನೀಡಿದ್ದಾರೆ.
Next Story