ರೆಡ್ಕ್ರಾಸ್ನಿಂದ ಸರ್ ಜೀನ್ ಹೆನ್ರಿ ಡ್ಯುನಾಂಟ್ ಸಂಸ್ಮರಣೆ
![ರೆಡ್ಕ್ರಾಸ್ನಿಂದ ಸರ್ ಜೀನ್ ಹೆನ್ರಿ ಡ್ಯುನಾಂಟ್ ಸಂಸ್ಮರಣೆ ರೆಡ್ಕ್ರಾಸ್ನಿಂದ ಸರ್ ಜೀನ್ ಹೆನ್ರಿ ಡ್ಯುನಾಂಟ್ ಸಂಸ್ಮರಣೆ](https://www.varthabharati.in/sites/default/files/images/articles/2019/11/1/217383-1572624955.jpg)
ಉಡುಪಿ, ನ.1: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ರೆಡ್ಕ್ರಾಸ್ ಸಂಸ್ಥಾಪಕ ಸರ್ ಜೀನ್ ಹೆನ್ರಿ ಡ್ಯುನಾಂಟ್ ಅವರ 109ನೇ ವರ್ಷದ ಪುಣ್ಯತಿಥಿಯನ್ನು ಅಜ್ಜರಕಾಡಿನ ರೆಡ್ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್ನಲ್ಲಿ ಆಚರಿಸಲಾಯಿತು.
ರೆಡ್ಕ್ರಾಸ್ನ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಸರ್ ಜೀನ್ ಹೆನ್ರಿ ಡ್ಯುನಾಂಟ್ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರೆಡ್ಕ್ರಾಸ್ ಸಂಸ್ಥೆಯಲ್ಲಿ ದುರ್ಬಲರ, ದೀನದಲಿತರ ಸೇವೆಗೆ ದುಡಿದ ನಾಯಕರಲ್ಲಿ ಇವರು ಅಗ್ರಗಣ್ಯರು. ಅವರ ಮಾನವೀಯ ಸೇವೆ, ಕಾಯಕ ನಿಷ್ಠೆ, ಶಾಂತಿ ಹಾಗೂ ಸಾಮರಸ್ಯವನ್ನು ನಾವೆಲ್ಲ ನಿತ್ಯ ಜೀವನದಲಿ್ಲ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಘಟಕದ ಗೌರವ ಖಜಾಂಚಿ ಟಿ.ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೆ.ಜಯರಾಮ ಆಚಾರ್ಯ, ಯುವರೆಡ್ ಕ್ರಾಸ್ ಡೈರೆಕ್ಟರ್ ಪದ್ಮಾ ಕಿಣಿ ಉಪಸ್ಥಿತರಿದ್ದರು.
Next Story