ಬಿ.ಜಿ. ಮೋಹನದಾಸ್ ಗೆ ಬೆಂಗಳೂರು ದೇವಾಡಿಗ ಸಂಘದಿಂದ ಸನ್ಮಾನ
![ಬಿ.ಜಿ. ಮೋಹನದಾಸ್ ಗೆ ಬೆಂಗಳೂರು ದೇವಾಡಿಗ ಸಂಘದಿಂದ ಸನ್ಮಾನ ಬಿ.ಜಿ. ಮೋಹನದಾಸ್ ಗೆ ಬೆಂಗಳೂರು ದೇವಾಡಿಗ ಸಂಘದಿಂದ ಸನ್ಮಾನ](https://www.varthabharati.in/sites/default/files/images/articles/2019/11/2/217485-1572697901.jpeg)
ಮಂಗಳೂರು: ಈ ಭಾರಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ.ಜಿ. ಮೋಹನದಾಸ್ ಅವರಿಗೆ ಬೆಂಗಳೂರಿನ ದೇವಾಡಿಗ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಂದ್ರ ಶೇಖರ್ ದೇವಾಡಿಗ ಅವರು ವಹಿಸಿ ಬಿ.ಜಿ.ಮೋಹನದಾಸ್ ಅವರು ಕೊಲ್ಲಿ ರಾಷ್ಟ್ರದಲ್ಲಿ ನಡೆಸಿದ ಕನ್ನಡ ಸಮಾಜ ಸೇವೆ ಮತ್ತು ಅವರು ನಡೆದು ಬಂದ ದಾರಿಯನ್ನು ವಿವರಿಸಿ, ಅಭಿನಂದಿಸಿದರು.
ಬೆಂಗಳೂರು ನಗರ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ರಮೇಶ್ ಕೆ. ಎನ್. ಮುಖ್ಯ ಅತಿಥಿ ಗಳಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಘದ ಪೂರ್ವಾಧ್ಯಕ್ಷ ರಘು ಶೇರಿಗಾರ್ ಮತ್ತು ಎಚ್.ಎಸ್. ದೇವಾಡಿಗ ಬಿ.ಜಿ.ಮೋಹನ್ ದಾಸ್ ವಿಷಯ ಮಂಡಿಸಿದರು. ಸನ್ಮಾನ ಸ್ವೀಕರಿಸಿದ ಬಿ.ಜಿ.ಮೋಹನದಾಸ್ ಅವರು ಮೂರುವರೆ ದಶಕಗಳ ನಿರಂತರ ಸಾಮಾಜಿಕ ಜೀವನ ಸಾರ್ಥಕ ಮೂಡಿಸಿದೆ. ಗುರುತಿಸಿ ಗೌರವಿಸಿದ ಸರ್ವರಿಗೂ ವಂಸಿದರು.
ಯಶೋಧ ಮೋಹನ್ ದಾಸ್, ಆರ್.ಗಣೇಶ್, ಎಸ್.ಎನ್ ಚಂದ್ರಶೇಖರ್ ದೇವಾಡಿಗ, ಶಿವಶಂಕರ ದೇವಾಡಿಗ, ಕೇಶವ ಎನ್, ರೇಖಾ ಸುರೇಶ್, ವಿಶು ದೇವಾಡಿಗ, ಬಿ.ಜಿ.ಮೀನಾಕ್ಷಿ ದೇವದಾಸ್, ಬಿ.ಜಿ. ಲಕ್ಷ್ಮೀಕಾಂತ್ ಬೆಸ್ಕೂರ್, ಬಿ.ಜಿ. ಕಮಲೇಶ್ ಬೆಸ್ಕೂರ್, ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.