ಡಾ.ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
![ಡಾ.ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಡಾ.ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ](https://www.varthabharati.in/sites/default/files/images/articles/2019/11/2/217554-1572713924.jpg)
ಕುಂದಾಪುರ, ನ.2:ಡಾ.ರಾಜ್ ಸಂಘಟನೆ ಕನ್ನಡಾಭಿಮಾನದ ಆಶ್ರಯದಲ್ಲಿ ಹಲವಾರು ವರ್ಷಗಳಿಂದ ಕನ್ನಡ ಪರ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಂಘಟನೆ ಶುಕ್ರವಾರ ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಕನ್ನಡ ರಾಜ್ಯೋತ್ಸವ ವೇದಿಕೆಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ಮಾತನಾಡಿ, ಭಾರತವು ಅತೀ ದೊಡ್ಡ ನಾಗರಿಕತೆ ಹೊಂದಿದ್ದು ಅದರಲ್ಲಿ ಎರಡೂವರೆ ಸಾವಿರ ವರ್ಷ ಇತಿಹಾಸವುಳ್ಳ ಕರ್ನಾಟಕವನ್ನು ಹಲವು ರಾಜವಂಶಗಳು ಆಳ್ವಿಕೆ ನಡೆಸಿವೆ. ಈ ಅವಧಿಯಲ್ಲಿ ಕಲೆ-ಸಾಹಿತ್ಯ ಮೊದಲಾದ ಕೊಡುಗೆಗಳನ್ನು ನಾಡಿಗೆ ನೀಡಿರುುದನ್ನು ಸ್ಮರಿಸಬಹುದು ಎಂದರು.
ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ ದರು. ಈ ಸಂದರ್ಭದಲ್ಲಿ ಡಾ. ರಾಜ್ ಸಂಘಟನೆ ಅಧ್ಯಕ್ಷ ರತ್ನಾಕರ ಪೂಜಾರಿ, ಉದ್ಯಮಿಗಳಾದ ಅಜೇಂದ್ರ ಶೆಟ್ಟಿ, ಮುಸ್ತಾಫ, ಸಂಘಟನೆಯ ಪ್ರಮುಖರಾದ ಸುನೀಲ್ ಖಾರ್ವಿ, ಸಚಿನ್, ಪ್ರಭಾಕರ ಖಾರ್ವಿ, ಅಗಸ್ಟಿನ್ ಡಿಸೋಜ, ರಾಯ್ಸನ್ ಡಿಸೋಜಾ, ಗಣೇಶ್, ನವೀನ್, ರಾಮಚಂದ್ರ ಪೂಜಾರಿ, ರಾಘು ಕೋಡಿ ಮುಂತಾದವು ಉಪಸ್ಥಿತರಿದ್ದರು.
ಡಾ. ರಾಜ್ ಸಂಘಟನೆಯ ಸುನೀಲ್ ಖಾರ್ವಿ ತಲ್ಲೂರು ಸ್ವಾಗತಿಸಿ, ಗೋಪಾಲ ಮಡಿವಾಳ ಪ್ರಾಸ್ತಾವನೆಗೈದರು. ಪ್ರಣಮ್ಯ ಪೂಜಾರಿ ಪ್ರಾರ್ಥಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತ ವುಝರ್ ಕುಂದಾಪುರ ವಂದಿಸಿದರು.