ಬಂಟ್ವಾಳ: ಹೆರಿಗೆಯ ಸಂದರ್ಭ ಬಾಣಂತಿ ಮೃತ್ಯು
![ಬಂಟ್ವಾಳ: ಹೆರಿಗೆಯ ಸಂದರ್ಭ ಬಾಣಂತಿ ಮೃತ್ಯು ಬಂಟ್ವಾಳ: ಹೆರಿಗೆಯ ಸಂದರ್ಭ ಬಾಣಂತಿ ಮೃತ್ಯು](https://www.varthabharati.in/sites/default/files/images/articles/2019/11/3/217610-1572754069.gif)
ಬಂಟ್ವಾಳ, ನ.3: ಅಜೆಕಲದ ಮಹಿಳೆಯೊಬ್ಬರು ಹೆರಿಗೆಯ ಸಂದರ್ಭ ಮೃತಪಟ್ಟ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ.
ಬಂಟ್ವಾಳ ಅಜೆಕಲ ನಿವಾಸಿ, ಉದಯ ಕುಲಾಲ್ ಎಂಬವರ ಪತ್ನಿ ಉಷಾ(29) ಮೃತಪಟ್ಟ ಗರ್ಭಿಣಿ.
ಉಷಾ ಎರಡನೇ ಹೆರಿಗೆಗಾಗಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ಶನಿವಾರ ಬೆಳಗ್ಗೆ ದಾಖಲಾಗಿದ್ದರು. ಸಂಜೆಯ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ, ರಾತ್ರಿ 8 ಗಂಟೆಯ ಸುಮಾರಿಗೆ ಇಲ್ಲಿನ ವೈದ್ಯರು ಯಾವುದೋ ಕಾರಣ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಉಷಾ ಅವರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಈ ಸಂದರ್ಭ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ ಎಂದು ಉಷಾ ಕುಟುಂಬಸ್ಥರು ತಿಳಿಸಿದ್ದಾರೆ.
Next Story