ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಪುತ್ರಿಯ ಆರತಕ್ಷತೆ: ಚಂದ್ರಶೇಖರ ಸ್ವಾಮೀಜಿ ಭಾಗಿ
![ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಪುತ್ರಿಯ ಆರತಕ್ಷತೆ: ಚಂದ್ರಶೇಖರ ಸ್ವಾಮೀಜಿ ಭಾಗಿ ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಪುತ್ರಿಯ ಆರತಕ್ಷತೆ: ಚಂದ್ರಶೇಖರ ಸ್ವಾಮೀಜಿ ಭಾಗಿ](https://www.varthabharati.in/sites/default/files/images/articles/2019/11/3/217616-1572760408.gif)
ಬೆಂಗಳೂರು, ನ.3: ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಎಲ್.ನಾರಾಯಣಸ್ವಾಮಿಯವರ ಪುತ್ರಿ ಚಂದನಾ ಅವರ ಆರತಕ್ಷತೆ ಕಾರ್ಯಕ್ರಮವು ಅರಮನೆಯ ಆವರಣದ ವೃಕ್ಷ ಕಲ್ಯಾಣ ಮಂಟಪದಲ್ಲಿ ಜರುಗಿತು.
ಅಂತಾರಾಷ್ಟ್ರೀಯ ವಾಸ್ತುತಜ್ಞ, ಧಾರ್ಮಿಕ ಗುರು ಚಂದ್ರಶೇಖರ ಸ್ವಾಮೀಜಿ ದಂಪತಿಯು ವಧೂವರರನ್ನು ಆಶೀರ್ವದಿಸಿದರು.
ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಹಿಮಾಚಲ ಪ್ರದೇಶ ರಾಜ್ಯಪಾಲ ಬಂಗಾರು ಲಕ್ಷ್ಮಣ್, ಕರ್ನಾಟಕ ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ ಸಹಿತ ಹಲವು ಗಣ್ಯರು ಪಾಲ್ಗೊಂಡಿದ್ದರು.
Next Story