ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಅಗತ್ಯ : ಎಸ್.ಐ. ಚೆಲುವಯ್ಯ
ಎಸ್ಕೆಎಸ್ಸೆಸ್ಸೆಫ್ನಿಂದ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನ
![ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಅಗತ್ಯ : ಎಸ್.ಐ. ಚೆಲುವಯ್ಯ ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಅಗತ್ಯ : ಎಸ್.ಐ. ಚೆಲುವಯ್ಯ](https://www.varthabharati.in/sites/default/files/images/articles/2019/11/3/217705-1572801521.jpg)
ಪುತ್ತೂರು: ಯಾವುದೇ ಅಪರಾಧಗಳು ಸಂಭವಿಸಿದ ಬಳಿಕ ಪಶ್ಚಾತ್ತಾಪ ಪಡುವುದಕ್ಕಿಂತ ಅಪರಾಧಗಳು ನಡೆಯುವ ಮೊದಲೇ ಎಚ್ಚೆತ್ತುಕೊಂಡಲ್ಲಿ ಅಪರಾಧಗಳಿಂದ ಮುಕ್ತರಾಗಲು ಸಾಧ್ಯ. ಅಮಲು ಪದಾರ್ಥಕ್ಕೆ ಜೋತು ಬಿದ್ದವರನ್ನು ಅಪರಾಧಿಯಂತೆ ಕಂಡು ಅವರನ್ನು ಬಹಿಷ್ಕರಿಸುವ ಬದಲು ಅವರ ಮನಪರಿವರ್ತನೆ ಮಾಡುವ ಕೆಲಸವಾಗಬೇಕು. ಮಾದಕ ವ್ಯಸನಗಳ ವಿರುದ್ಧ ಎಲ್ಲೆಡೆ ಜನಜಾಗೃತಿಯಾಗಬೇಕು ಎಂದು ಪುತ್ತೂರು ನಗರ ಠಾಣೆಯ ಎಸ್ಐ ಎಂ.ವಿ. ಚೆಲುವಯ್ಯ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಮುಕ್ವೆ ಕ್ಲಸ್ಟರ್ ವತಿಯಿಂದ ಶುಕ್ರವಾರ ಕೂರ್ನಡ್ಕ ಜಂಕ್ಷನ್ ಬಳಿ ನಡೆದ ಮಾದಕ ವ್ಯವಸನದ ವಿರುದ್ಧ ನಡೆದ `ಜನಸಂಚಲನ ಅಭಿಯಾನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೂರ್ನಡ್ಕ ಮುರ್ರಿಸ್ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಅವರು ಮಾತನಾಡಿ, ಮಾದಕ ದ್ರವ್ಯ ಇಂದು ವ್ಯಾಪಕವಾಗಿ ಹಬ್ಬಿದ್ದು, ಶಾಲಾ ಮಕ್ಕಳವರೆಗೂ ಅದರ ಕದಂಬ ಬಾಹು ವಿಸ್ತರಿಸಿದೆ. ಮಾದಕ ವ್ಯಸನವನ್ನು ಸಮಾಜದಿಂದ ಬೇರು ಸಮೇತ ಕಿತ್ತೊಗೆಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕೂರ್ನಡ್ಕ ಖತೀಬ್ ಉನೈಸ್ ಫೈಝಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಮುಕ್ವೆ ಖತೀಬ್ ಹಬೀಬರ್ರಹ್ಮಾನ್ ತಂಙಳ್ ದುವಾ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಮುಕ್ವೆ ಕ್ಲಸ್ಟರ್ ಅಧ್ಯಕ್ಷ ಜಾಬಿರ್ ಫೈಝಿ ಬನಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಬಪ್ಪಳಿಗೆ ಖತೀಬ್ ಅಹ್ಮದ್ ನಹೀಂ ಫೈಝಿ, ಚಾಪಳ್ಳ ದರ್ಸ್ ವಿದ್ಯಾರ್ಥಿ ಮುಝಮ್ಮಿಲ್ ತುಂಬೆ ಅವರು ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ಮುಕ್ವೆ ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ಅಶ್ರಫ್ ರಹ್ಮಾನಿ ವೀರಮಂಗಲ ಅವರು ಜಾಗೃತಿ ಕರಪತ್ರ ಬಿಡುಗಡೆಗೊಳಿಸಿದರು. ವಿಖಾಯ ಆಕ್ಟೀವ್ ವಿಂಗ್ ಸದಸ್ಯರಾಗಿ ಆಯ್ಕೆಗೊಂಡ ಅಶ್ರಫ್ ಮುಕ್ವೆ ಹಾಗೂ ಹನೀಫ್ ಮುಕ್ವೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಡಕ್ಕೋಡಿ ಖತೀಬ್ ಅಬ್ದರ್ರಹ್ಮಾನ್ ಫೈಝಿ, ಪರಣೆ ಖತೀಬ್ ಬಶೀರ್ ದಾರಿಮಿ, ವೀರಮಂಗಲ ಖತೀಬ್ ಉಮರ್ ದಾರಿಮಿ, ಪಾಪೆತ್ತಡ್ಕ ಖತೀಬ್ ಜಲೀಲ್ ದಾರಿಮಿ, ನಗರಸಭೆ ಸದಸ್ಯ ಯೂಸುಫ್ ಕೂರ್ನಡ್ಕ, ಕೂರ್ನಡ್ಕ ಮಸೀದಿ ಅಧ್ಯಕ್ಷ ಕೆ.ಎಚ್ ಖಾಸಿಂ ಹಾಜಿ, ಮುಕ್ವೆ ಮಸೀದಿ ಅಧ್ಯಕ್ಷ ಅಬ್ದುಲ್ಲ ಹಾಜಿ ಮೈಸೂರು, ಚಾಪಳ್ಳ ಮಸೀದಿ ಅಧ್ಯಕ್ಷ ಪುತ್ತುಬಾವ ಹಾಜಿ, ಪಾಪೆತ್ತಡ್ಕ ಮಸೀದಿ ಅಧ್ಯಕ್ಷ ಅಬ್ಬಾಸ್, ವೀರಮಂಗಲ ಮಸೀದಿ ಅಧ್ಯಕ್ಷ ಖಾಸಿಂ ಹಾಜಿ, ಪರಣೆ ಮಸೀದಿ ಅಧ್ಯಕ್ಷ ಇಬ್ರಾಹಿಂ ಕುಂಬಮೂಲೆ, ಕೂರ್ನಡ್ಕ ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷ ಅಬೂಬಕ್ಕರ್ ಮುಲಾರ್, ಎಸ್ಕೆಎಸ್ಬಿವಿ ಜಿಲ್ಲಾಧ್ಯಕ್ಷ ಶಹೀರ್ ಕೂರ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.
ಎಸ್ಕೆಸ್ಸೆಸ್ಸೆಫ್ ಮುಕ್ವೆ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಪಿ.ಎಂ ಅಶ್ರಫ್ ಮುಕ್ವೆ ಸ್ವಾಗತಿಸಿದರು. ಕೋಶಾಧಿಕಾರಿ ಶಾಫಿ ಪಾಪೆತ್ತಡ್ಕ ವಂದಿಸಿದರು. ಕೂರ್ನಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಖಾದರ್ ಕೂರ್ನಡ್ಕ ಕಾರ್ಯಕ್ರಮ ನಿರೂಪಿಸಿದರು.