Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು: ರೌಡಿಶೀಟರ್ ಮೆಲ್ರಿಕ್ ಡಿಸೋಜ...

ಮಂಗಳೂರು: ರೌಡಿಶೀಟರ್ ಮೆಲ್ರಿಕ್ ಡಿಸೋಜ ಹತ್ಯೆ ಪ್ರಕರಣ: ಆರು ಮಂದಿಗೆ ಜೀವಾವಧಿ

ವಾರ್ತಾಭಾರತಿವಾರ್ತಾಭಾರತಿ4 Nov 2019 7:17 PM IST
share
ಮಂಗಳೂರು: ರೌಡಿಶೀಟರ್ ಮೆಲ್ರಿಕ್ ಡಿಸೋಜ ಹತ್ಯೆ ಪ್ರಕರಣ: ಆರು ಮಂದಿಗೆ ಜೀವಾವಧಿ

ಮಂಗಳೂರು, ನ.4: ಗೋರಿಗುಡ್ಡೆ ಮೆಲ್ರಿಕ್ ಡಿಸೋಜ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

ಗೋರಿಗುಡ್ಡೆ ವೆಲೆನ್ಸಿಯಾ ನಿವಾಸಿ ನಿಶಾಕ್ ಪೂಜಾರಿ (30), ಗೋರಿಗುಡ್ಡೆ ಬೇಕಲ ಕಂಪೌಂಡ್ ನಿವಾಸಿ ವಿನೇಶ್ ಕುಮಾರ್ (32), ಮುಳಿಹಿತ್ಲು ಅರೆಕೆರೆಬೈಲ್ ಸುಬ್ಬಣ್ಣ ಶೆಟ್ಟಿ ಕಂಪೌಂಡ್ ನಿವಾಸಿ ಸಚಿನ್ ಶೆಟ್ಟಿ (23), ಜಪ್ಪಿನಮೊಗರು ತಂದೊಳಿಗೆ ಸಾಯಿ ನಿಲಯ ನಿವಾಸಿ ಗಣೇಶ್ ಕುಲಾಲ್ (27), ಗೋರಿಗುಡ್ಡೆ ಜನಾರ್ದನ ಕಂಪೌಂಡ್ ನಿವಾಸಿ ಪ್ರವೀಣ್ ಪೂಜಾರಿ (43), ಜೆಪ್ಪು ಕುಡುಪಾಡಿ ಮೋಹಿನಿ ಕಂಪೌಂಡ್ ನಿವಾಸಿ ಸಂದೀಪ್ ಶೆಟ್ಟಿ (34) ಶಿಕ್ಷೆಗೊಳಗಾದ ಅಪರಾಧಿಗಳು.

ಗೋರಿಗುಡ್ಡೆ ನಿವಾಸಿ ರೌಡಿಶೀಟರ್ ಮೆಲ್ರಿಕ್ ಡಿಸೋಜ(26) ಕೊಲೆಯಾದಾತ.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಲಿಂಗೇಗೌಡ 20 ಸಾಕ್ಷಿ ಹಾಗೂ 54 ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಂಡು ಅಪರಾಧಿಗಳಿಗೆ ಐಪಿಸಿ 302 (ಕೊಲೆ) ರಡಿ ಜೀವಾವಧಿ ಹಾಗೂ ತಲಾ ಮೂರು ಸಾವಿರ ರೂ. ದಂಡ, 109 (ಪ್ರೇರೇಪಣೆ)ರಡಿ ತಲಾ ಮೂರು ಸಾವಿರ ರೂ. ದಂಡ, 120 ಬಿ (ಸಂಚು)ರಡಿ ತಲಾ ಮೂರು ಸಾವಿರ ರೂ., 144 (ಅಕ್ರಮ ಕೂಟ)ರಡಿ ನಾಲ್ಕು ತಿಂಗಳು ಸಜೆ, 147ರಡಿ ಒಂದು ವರ್ಷ ಸಜೆ, 148ರಡಿ ಎರಡು ವರ್ಷ, 448 (ಅಕ್ರಮ ಪ್ರವೇಶ) ರಡಿ, 506 (ಬೆದರಿಕೆ)ರಡಿ ಒಂದು ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತದಲ್ಲಿ 40 ಸಾವಿರ ರೂ. ಕೊಲೆಯಾದ ಮೆಲ್ರಿಕ್ ಅವರ ತಾಯಿಗೆ ಪರಿಹಾರ ರೂಪದಲ್ಲಿ ನೀಡಲು ನ್ಯಾಯಾಲಯ ಆದೇಶಿಸಿದೆ.

ಪ್ರಕರಣ ವಿವರ

2016ರ ಮೇ ತಿಂಗಳಿನಲ್ಲಿ ಮಾರ್ನಮಿಕಟ್ಟೆ ಸಂದೀಪ್ ಶೆಟ್ಟಿಯನ್ನು ಮೆಲ್ರಿಕ್ ಡಿಸೋಜ ಹಾಗೂ ಆತನ ಸಹಚರರು ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದರು ಎಂದು ದೂರಲಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಲು ಸಂದೀಪ್ ಶೆಟ್ಟಿಯು 1ನೇ ಆರೋಪಿ ನಿಶಾಕ್ ಪೂಜಾರಿ ಬಳಿ ಹೇಳಿದ್ದು, ಆತ ಉಳಿದ ಆರೋಪಿಗಳನ್ನು ಒಟ್ಟು ಸೇರಿಸಿ ಮೆಲ್ರಿಕ್ ಕೊಲೆ ಕೃತ್ಯವೆಸಗಿದ್ದಾನೆ.

ಬಿಡುಗಡೆಯಾದ ಮರುದಿನ ಕೊಲೆ

2016ರಲ್ಲಿ ಮಾರ್ನಮಿಕಟ್ಟೆಯಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಮೆಲ್ರಿಕ್ ಜೈಲುಪಾಲಾಗಿ ಡಿಸೆಂಬರ್ 24ರಂದು ಬಿಡುಗಡೆಯಾಗಿದ್ದ. ಡಿ.25ರಂದು ಸಹಚರರ ಜತೆ ಮೆಲ್ರಿಕ್ ಹೊನಲು ಬೆಳಕಿನ ಕ್ರಿಕೆಟ್ ನೋಡಲು ಹೋಗಿದ್ದು, ಆತನನ್ನು ಸಹಪಾಠಿ ಸುಶೀಲ್ ಮನೆಗೆ ತಂದು ಬಿಟ್ಟಿದ್ದ.

ಇದೇ ಸಮಯಕ್ಕೆ ಹೊಂಚು ಹಾಕಿದ್ದ ಆರೋಪಿಗಳಾದ ನಿಶಾಕ್ ಪೂಜಾರಿ, ವಿನೇಶ್ ಕುಮಾರ್, ಸಚಿನ್ ಶೆಟ್ಟಿ, ಗಣೇಶ್ ಕುಲಾಲ್, ಪ್ರವೀಣ್ ಪೂಜಾರಿ ಮಧ್ಯರಾತ್ರಿ 1:15ರ ಸುಮಾರಿಗೆ ಮೆಲ್ರಿಕ್‌ನ ವೆಲೆನ್ಸಿಯಾ ಮನೆಗೆ ದಾಳಿ ಮಾಡಿ ಬಾಗಿಲನ್ನು ಕಾಲಿನಿಂದ ತುಳಿದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಸಂದರ್ಭ ಮೆಲ್ರಿಕ್ ಮತ್ತು ಆತನ ಅಜ್ಜಿ ಮಾತ್ರ ಮನೆಯಲ್ಲಿದ್ದರು. ಆರೋಪಿಗಳು ಏಕಾಏಕಿ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ವಿಷಯ ತಿಳಿದ ಮೆಲ್ರಿಕ್‌ನ ಸಹಪಾಠಿ ಸುಶೀಲ್ ಕೂಡಲೇ ಮೆಲ್ರಿಕ್‌ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೆಲ್ರಿಕ್‌ನನ್ನು ಆಸ್ಪತ್ರೆಗೆ ಸೇರಿಸಿದ ಸ್ನೇಹಿತ ಸುಶೀಲ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿ ಪಾಂಡೇಶ್ವರ ಠಾಣೆ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಕೆ. ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.

ಸಾಕ್ಷಿ ಹೇಳಿದ ಬಳಿಕ ಅಜ್ಜಿ ಸಾವು

ರೌಡಿಶೀಟರ್ ಮೆಲ್ರಿಕ್ ಕೊಲೆ ಘಟನೆ ವೇಳೆ ಪ್ರತ್ಯಕ್ಷ ಸಾಕ್ಷಿ ಇದ್ದದ್ದು ಆತನ ಅಜ್ಜಿ ರೋಝಿ (75). ಕೋರ್ಟ್ ವಿಚಾರಣೆ ವೇಳೆ ಇವರು ಘಟನೆಯ ಬಗ್ಗೆ ಸವಿವರವಾಗಿ ಸಾಕ್ಷಿ ಹೇಳಿದ್ದು, ವಿಚಾರಣೆ ಮುಗಿದ ಕೆಲವೇ ದಿನಗಳ ಬಳಿಕ ಇವರು ಮೃತಪಟ್ಟಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X