Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದಲಿತರ ಬದುಕನ್ನು ತೆರೆದಿಡುವ-ಜಾನಪದ

ದಲಿತರ ಬದುಕನ್ನು ತೆರೆದಿಡುವ-ಜಾನಪದ

ಈ ಹೊತ್ತಿನ ಹೊತ್ತಿಗೆ

ವಾರ್ತಾಭಾರತಿವಾರ್ತಾಭಾರತಿ5 Nov 2019 12:00 AM IST
share
ದಲಿತರ ಬದುಕನ್ನು ತೆರೆದಿಡುವ-ಜಾನಪದ

ಕನ್ನಡ ಸಾಹಿತ್ಯ ಪರಿಷತ್ತು ಹೊರತರುತ್ತಿರುವ ದಲಿತ ಸಾಹಿತ್ಯ ಸಂಪುಟ ಮಾಲೆಯ ಪ್ರಮುಖ ಕೃತಿಯಾಗಿದೆ ‘ದಲಿತ ಜಾನಪದ’. ಸ್ವಾತಂತ್ರಾನಂತರ ಅಕ್ಷರ ಲೋಕಕ್ಕೆ ಪಾದಾರ್ಪಣೆ ಮಾಡಿದ ದಲಿತ ಶೋಷಿತ ಸಮುದಾಯ ಎಪ್ಪತ್ತರ ದಶಕ ಸ್ನಾತಕ-ಸ್ನಾತಕೋತ್ತರ ಪದವಿಯೊಂದಿಗೆ ಅಂಬೆಗಾಲು ಇಡುವ ಹೊತ್ತು. ಜಾನಪದ ಬದುಕನ್ನು ಬದುಕಿದರೂ ಅದನ್ನು ದಾಖಲಿಸುವ, ಸಂಶೋಧಿಸಿ ಅದಕ್ಕೆ ಶಿಷ್ಟ ರೂಪಕೊಡುವ ಪ್ರಯತ್ನ ನಡೆಯಲೇ ಇಲ್ಲ. ಆರಂಭದಲ್ಲಿ ದಲಿತ-ಬಂಡಾಯದ ಹೋರಾಟ ಮತ್ತು ಚಳವಳಿಯ ಭಾಗವಾಗಿ ಸೃಷ್ಟಿಯಾದ ಸಾಹಿತ್ಯದ ಜನಕರಾಗಿ ಕೆಲಸ ಮಾಡತೊಡಗಿದರು. ದಲಿತ ಸಾಹಿತ್ಯವನ್ನು ಗುರುತಿಸಿ ಅವುಗಳಲ್ಲಿ ಸಂಶೋಧನೆಗೆ ತೊಡಗಿಕೊಂಡಿರುವುದು ಕೂಡ ಮೇಲ್‌ಜಾತಿಯ ಬರಹಗಾರರು ಎನ್ನುವುದು ಗಮನಾರ್ಹ. ಅವರಲ್ಲಿಯ ಕೆಲ ಸುಧಾರಣಾವಾದಿಗಳ ಸಹಕಾರದಿಂದ ಡಾ. ಸಿದ್ದಲಿಂಗಯ್ಯ, ಪಿ. ಕೆ. ಖಂಡೋಬಾ, ಎಂ. ಬಿ. ನೇಗಿನಹಾಳ ಮೊದಲಾದವರು ಎಂಎ ಸಾಹಿತ್ಯ ಓದುತ್ತಾ, ಸಂಶೋಧನೆಗೆ ಜಾನಪದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಈ ಕೃತಿ ಅಂದಿನಿಂದ ಇಂದಿನವರೆಗೆ ದಲಿತ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬರಹಗಳನ್ನು ಒಟ್ಟಾಗಿಸಿದೆ.

ಮುಖ್ಯವಾಗಿ ದಲಿತರ ಜಾನಪದ ಬದುಕೆಂದರೆ ಅವರ ಆರಾಧನೆ ಮತ್ತು ಆಚರಣೆಗಳು. ದಲಿತರ ಬದುಕನ್ನು ಹೊರತು ಪಡಿಸಿ ದಲಿತ ಜಾನಪದವನ್ನು ಗುರುತಿಸಲು ಸಾಧ್ಯವಿಲ್ಲ. ಇಲ್ಲಿ, ಜಾನಪದ ಸಂಶೋಧನೆಯ ಜೊತೆ ಜೊತೆಗೆ ದಲಿತರ ಬದುಕಿನ ವಿವಿಧ ಮಗ್ಗುಲುಗಳನ್ನು ಶೋಧಿಸಲಾಗಿದೆ. ಡಾ. ಸಿದ್ದಲಿಂಗಯ್ಯ ಅವರು ‘ಕೆಲವು ಆರಾಧನೆಗಳು ಮತ್ತು ಆಚರಣೆಗಳು’, ಡಾ. ಪಿ.ಕೆ. ಖಂಡೋಬಾ ಅವರು ‘ಕನ್ನಡ ಸಾಂಸ್ಕೃತಿಕ ಅಧ್ಯಯನ’ದ ಬಗ್ಗೆ ಬರೆದಿದಾರೆ. ಉಳಿದಂತೆ, ಡಾ. ಎಂ. ಬಿ. ನೇಗಿನಹಾಳರ ‘ಮೈಲಾರಲಿಂಗ ಮತ್ತು ಪರಿವಾರ ದೇವತೆಗಳು’, ಡಾ. ಕೆ. ಆರ್. ದುರ್ಗಾದಾಸ್ ಅವರ ‘ಪ್ರಾಚೀನ ಸಾಹಿತ್ಯದಲ್ಲಿ ಜಾನಪದ ಅಂತರ್ ಸಂಬಂಧ’, ಡಾ. ಸಣ್ಣರಾಮ ಅವರ ‘ಜಾಗತೀಕರಣ ಮತ್ತು ಜಾನಪದ ಲೋಕ’, ಡಾ. ಅರವಿಂದ ಮಾಲಗತ್ತಿ ಅವರ ‘ದೇಶೀಯವಾದ ಮತ್ತು ಜನಪದ ಆಟಗಳು’, ಡಾ. ಡಿ. ಬಿ. ನಾಯಕ ಅವರ ‘ಬುಡಕಟ್ಟು ಅನನ್ಯತೆ-ಜಾಗತೀಕರಣ’, ಡಾ. ಕೆ. ಎಂ. ಮೇತ್ರಿ ಅವರ ‘ಜಾನಪದಶ್ರೀ ನಾಡೋಜ ಬುರ್ರಕಥಾ ದರೋಜಿ ಈರಮ್ಮ’, ಡಾ. ಎಚ್. ಟಿ. ಪೋತೆ ಅವರ ‘ಜಾನಪದ ಜ್ಞಾನ-ವಿಜ್ಞಾನ’, ಡಾ. ಅರ್ಜುನ ಗೋಳಸಂಗಿ ಅವರ ‘ಕುರ್ರುಮಾಮಗಳು’, ಡಾ. ಹೆಬ್ಬಾಲೆ ಕೆ. ನಾಗೇಶ್ ಅವರ ‘ಜಾತ್ರೆಗಳು ಮತ್ತು ದೇವದಾಸಿಯವರು’ ಇಲ್ಲಿರುವ ಪ್ರಮುಖ ಬರಹಗಳಾಗಿವೆ. ದಲಿತರ ಸ್ಥಿತಿಗತಿಗಳನ್ನು ಅರಿಯುವುದಕ್ಕೂ ಈ ಬರಹಗಳು ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ಹಿರಿಯ ತಲೆಮಾರಿನಿಂದ ಹಿಡಿದು, ಈಗಿನ ಹೊಸ ತಲೆಮಾರಿನ ಯುವ ವಿದ್ವಾಂಸರು ಜಾನಪದಕ್ಕೆ ಸಂಬಂಧಿಸಿದ ಜನಪದ ಸಂಸ್ಕೃತಿ, ಕ್ರೀಡೆ, ನಂಬಿಕೆ, ಕಲೆ, ಸಾಹಿತ್ಯ ವಿವಿಧ ಬುಡಕಟ್ಟು ನೆಲೆಗಳ ಅಧ್ಯಯನ, ಜಾನಪದ ಮತ್ತು ಜಾಗತೀಕರಣ, ಕೃಷಿಗೆ ಸಂಬಂಧಿಸಿದ ಮಹತ್ವದ ಲೇಖನಗಳನ್ನು ಸಂಕಲಿಸಲಾಗಿದೆ. ಡಾ. ಎಚ್. ಟಿ. ಪೋತೆ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. 352 ಪುಟಗಳ ಈ ಕೃತಿಯ ಮುಖಬೆಲೆ 360 ರೂಪಾಯಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X