Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದಿನ ನೂರು, ಮಾತು ಜೋರು, ಸಾಧನೆ ಶೂನ್ಯ:...

ದಿನ ನೂರು, ಮಾತು ಜೋರು, ಸಾಧನೆ ಶೂನ್ಯ: ಸಿದ್ದರಾಮಯ್ಯ

ವಾರ್ತಾಭಾರತಿವಾರ್ತಾಭಾರತಿ5 Nov 2019 12:54 PM IST
share
ದಿನ ನೂರು, ಮಾತು ಜೋರು, ಸಾಧನೆ ಶೂನ್ಯ: ಸಿದ್ದರಾಮಯ್ಯ

ಕ್ರಿಕೆಟ್ ಮೈದಾನದಲ್ಲಿ ಅಂಪೈರ್ ಔಟ್ ಎಂದು ಮತ್ತೆ ಮತ್ತೆ ತೀರ್ಪು ನೀಡಿದರೂ ಒಪ್ಪಿಕೊಳ್ಳದ ಬ್ಯಾಟ್ಸ್ ಮ್ಯಾನ್ ಶತಕ ಪೂರೈಸಿದಂತಿದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರದ ನೂರು ದಿನಗಳ ಸಾಧನೆ.

ಅಪರೇಷನ್ ಕಮಲ ಎಂಬ ಅನೈತಿಕ ಕಸರತ್ತಿನ ಕೂಸಾಗಿ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರ್ಕಾರದಲ್ಲಿ ಮೊದಲ ಒಂದು ತಿಂಗಳು ಅಕ್ಷರಶ: ಮುಖ್ಯಮಂತ್ರಿಯೊಬ್ಬರದ್ದೇ ಏಕಚಕ್ರಾಧಿಪತ್ಯ. ಆ ಅವಧಿಯೇ ರಾಜ್ಯ ಎದುರಿಸಿದ ಅತ್ಯಂತ ಕಷ್ಟದ ಕಾಲ. ಆಗಸ್ಟ್ ಮೊದಲ ಹತ್ತು ದಿನ ಸುರಿದ 224 ಮಿ.ಮೀ. ಮಳೆ ಇತ್ತೀಚಿನ ವರ್ಷಗಳ ದಾಖಲೆ. ನೆರೆ ಹಾವಳಿಯಿಂದ ಜನ ತತ್ತರಿಸುತ್ತಿರುವಾಗ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಅನಾಥ ಸ್ಥಿತಿ. ಜನತೆ ನೆರೆ ನೀರಲ್ಲಿ ಮುಳುಗುತ್ತಿದ್ದರೆ ಮುಖ್ಯಮಂತ್ರಿಯವರು ಆಪರೇಷನ್ ಕಮಲದಲ್ಲಿ ಮುಳುಗಿದ್ದರು. ಸಚಿವರಂತೂ ಇರಲೇ ಇಲ್ಲ, ಬಿಜೆಪಿಯ ಶಾಸಕರು ಮತ್ತು ಸಂಸದರೂ ಕೂಡಾ ನೆರೆ ಸಂತ್ರಸ್ತರ ಕಡೆ ತಲೆ ಹಾಕಲಿಲ್ಲ.

ಈ ಪ್ರಮಾಣದ ಪ್ರಕೃತಿ ವಿಕೋಪ ಸಂಭವಿಸಿದಾಗ ಪ್ರಧಾನ ಮಂತ್ರಿಗಳೇ ಆಗಮಿಸಿ ಸಮೀಕ್ಷೆ ನಡೆಸಿ ತುರ್ತು ಪರಿಹಾರ ಘೋಷಿಸುವುದು ರೂಢಿ. ಪ್ರಧಾನಿ ನರೇಂದ್ರ ಮೋದಿ ಭೇಟಿನೂ ನೀಡಲಿಲ್ಲ, ಪರಿಹಾರವನ್ನೂ ಘೋಷಿಸಿಲ್ಲ, ಕನಿಷ್ಠ ಸಾಂತ್ವನದ ಮಾತುಗಳನ್ನಾಡಲೂ ಇಲ್ಲ. ಗೃಹಸಚಿವರು ಮತ್ತು ಹಣಕಾಸು ಸಚಿವರು ಭೇಟಿ ನೀಡಿದರೂ ಪರಿಹಾರದ ಬಗ್ಗೆ ಸ್ಪಂದಿಸಲೇ ಇಲ್ಲ. ಪ್ರಧಾನಿ ಮೋದಿ ಅವರು ಕನಿಷ್ಠ ನೆರೆ ಸಂತ್ರಸ್ತರ ಮೊರೆಯನ್ನು ಆಲಿಸಲು ಮುಖ್ಯಮಂತ್ರಿಗೂ ಒಂದು ಭೇಟಿಯನ್ನೂ ನೀಡದೆ ತಾತ್ಸಾರ ಮಾಡಿದರು. ಅಷ್ಟರಲ್ಲಿ ನೂರು ದಿನಗಳಲ್ಲಿ 60 ದಿನ ಕಳೆದೇ ಹೋಗಿತ್ತು.

ನೆರೆ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ರಾಜ್ಯದ ಜನತೆ ಬಂಡೇಳುತ್ತಿರುವ ಸೂಚನೆ ಗೊತ್ತಾಗುತ್ತಿದ್ದಂತೆಯೇ ಪ್ರಧಾನಿಯವರು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ 1,200 ಕೋಟಿ ರೂ.ಗಳ ಪರಿಹಾರ ನೀಡಿ ಕೈತೊಳೆದುಕೊಂಡು ಬಿಟ್ಟರು. ಮುಖ್ಯಮಂತ್ರಿಗಳೇ ಅಲ್ಲಲ್ಲಿ ಹೇಳಿಕೊಂಡು ಬಂದಂತೆ ಅಂದಾಜು ನಷ್ಟ 50 ಸಾವಿರ ಕೋಟಿ ರೂಪಾಯಿ. ರಾಜ್ಯ ಸರ್ಕಾರ ಅಧಿಕೃತವಾಗಿ ಸಲ್ಲಿಸಿದ ಮನವಿಯಲ್ಲಿ ಕೇಳಿದ್ದು ರೂ. 35 ಸಾವಿರ ಕೋಟಿ, ಕೊನೆಗೆ ಸಿಕ್ಕಿದ್ದು 1,200 ಕೋಟಿ. ಇದು ರಾಜ್ಯ ಬಿಜೆಪಿ ಸರ್ಕಾರದ ನೂರು ದಿನಗಳ ಪ್ರಮುಖ ಸಾಧನೆ.

ನನ್ನ ಪ್ರವಾಸದ ವೇಳೆ ನೆರೆಬಾಧಿತ ಪ್ರದೇಶಗಳಲ್ಲಿ ಕಣ್ಣಾರೆ ಕಂಡದ್ದನ್ನು ಆಧರಿಸಿ ಪರಿಹಾರ ಕಾರ್ಯದ ಲೋಪ-ದೋಷಗಳ ಬಗ್ಗೆ ಮಾತನಾಡಲು ತೊಡಗಿದ ಕೂಡಲೇ ಕಸಿವಿಸಿಗೀಡಾದ ಮುಖ್ಯಮಂತ್ರಿಗಳು ತರಾತುರಿಯಲ್ಲಿ ಪತ್ರಿಕೆಗಳಿಗೆ ಜಾಹೀರಾತು ನೀಡಿ ನೆರೆ ಪರಿಹಾರದ ಸಾಧನೆಯನ್ನು ಹೇಳಿಕೊಂಡರು. ಅದರಲ್ಲಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಸಾಲುಸಾಲು ಸುಳ್ಳುಗಳನ್ನು ಹೇಳಿ ತಾನು ಹೆಣೆದ ಬಲೆಯಲ್ಲಿ ತಾನೇ ಸಿಲುಕಿಕೊಂಡಿದ್ದಾರೆ.

ಕಳೆದ ಸೆಪ್ಟೆಂಬರ್ ನಲ್ಲಿ ನೆರೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರ ಮತ್ತು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತನ್ನು ಯಾರಾದರೂ ಜೊತೆಯಲ್ಲಿಟ್ಟು ಓದಿದರೆ ಸರ್ಕಾರ ಎಂತಹ ಹಸಿಸುಳ್ಳುಗಳನ್ನು ಹೇಳುತ್ತಿದೆ ಎನ್ನುವುದು ತಿಳಿಯುತ್ತದೆ..

1. ಆಗಸ್ಟ್ ಕೊನೆಯವರೆಗೆ 2,47,628 ಮನೆಗಳು ಹಾನಿಗೀಡಾಗಿವೆ ಎಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿರುವ ರಾಜ್ಯ ಸರ್ಕಾರ, ಹಾನಿಗೀಡಾದ ಮನೆಗಳ ಒಟ್ಟು ಸಂಖ್ಯೆ 97,920 ಎಂದು ಜಾಹೀರಾತಿನಲ್ಲಿ ಹೇಳಿದೆ. ಇದರಲ್ಲಿ ಯಾವುದು ನಿಜ?.

2. ಒಟ್ಟು 4.30 ಲಕ್ಷ ರೈತ ಕುಟುಂಬಗಳಿಗೆ ಬೆಳೆ ಹಾನಿ ಸಂಭವಿಸಿವೆ ಎಂದು ಜಾಹೀರಾತಿನಲ್ಲಿ ಒಂದೆಡೆ ಹೇಳಿರುವ  ಸರ್ಕಾರ, ಇನ್ನೊಂದೆಡೆ ಬೆಳೆ ನಷ್ಟ ಅನುಭವಿಸಿರುವ 1,38,726 ಕುಟುಂಬಗಳಿಗೆ 282.53 ಕೋಟಿ ರೂ. ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಿದ್ದೇವೆ ಎಂದು ಹೇಳಿದೆ. ಹಾಗಿದ್ದರೆ ಬೆಳೆ ನಷ್ಟಕ್ಕೀಡಾಗಿರುವ ಉಳಿದ ರೈತ ಕುಟುಂಬಗಳ ಗತಿ ಏನು?

3. ಕೇಂದ್ರಕ್ಕೆ ಕಳಿಸಿರುವ ವರದಿಯಲ್ಲಿ ರೈತ ಕುಟುಂಬಗಳ ಸಂಖ್ಯೆಯನ್ನು ಹೇಳದೆ 9,70,352 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಎಷ್ಟು ರೈತ ಕುಟುಂಬಗಳಿಗೆ ಮತ್ತು ಎಷ್ಟು ಬೆಳೆ ಪ್ರದೇಶಕ್ಕೆ ಪರಿಹಾರ ನೀಡಲಾಗಿದೆ?

4. ಅಸುನೀಗಿದ ಜಾನುವಾರುಗಳ ಸಂಖ್ಯೆಯನ್ನು ಹೇಳದೆ ಅವುಗಳಿಗೆ 16ರಿಂದ 30 ಸಾವಿರ ರೂಪಾಯಿ ಪರಿಹಾರ ನೀಡಿದೆ ಎಂದು ಜಾಹೀರಾತಿನಲ್ಲಿ ಹೇಳಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ 3,400 ಜಾನುವಾರುಗಳು ಸತ್ತಿವೆ ಎಂದು ತಿಳಿಸಿದೆ. ಈ ಎಲ್ಲ ಜಾನುವಾರುಗಳ ಮಾಲಕರಿಗೆ ಪರಿಹಾರ ನೀಡಲಾಗಿದೆಯೇ?

5. ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ 21,818 ಕಿ.ಮೀ. ರಸ್ತೆ  ಮತ್ತು  2,913 ಸೇತುವೆ ಹಾನಿಗೀಡಾಗಿದೆ ಎಂದು ಹೇಳಿರುವ ರಾಜ್ಯ ಸರ್ಕಾರ, ಜಾಹೀರಾತಿನಲ್ಲಿ ಹಾನಿಗೀಡಾಗಿರುವ ರಸ್ತೆಯ ಉದ್ದವನ್ನು ತಿಳಿಸದೆ 178 ರಸ್ತೆ-ಸೇತುವೆಯ ದುರಸ್ತಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದಷ್ಟೇ ಹೇಳಿದೆ.

6. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಸಂಭವಿಸಿದಾಗ ಕುಸಿದುಬಿದ್ದ ಮನೆಗಳನ್ನು ತಲಾ 9.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಈ ಬಾರಿಯ ಅತಿವೃಷ್ಟಿಯಲ್ಲಿ ಕುಸಿದುಬಿದ್ದ ಮನೆಗಳನ್ನು ಹೊಸದಾಗಿ ಕಟ್ಟಲು ಕೇವಲ ರೂ.5 ಲಕ್ಷ ಮಾತ್ರ ನಿಗದಿಪಡಿಸಿರುವುದು ತಾರತಮ್ಯ ನೀತಿ ಅಲ್ಲವೇ? ಇದೇನಾ ನಿಮ್ಮ ಉತ್ತರ ಕರ್ನಾಟಕದ ಮೇಲಿನ ಪ್ರೀತಿ?

ಕಳೆದ ಆಗಸ್ಟ್ ತಿಂಗಳಿನಲ್ಲಿ ಶುರುವಾದ ಅತಿವೃಷ್ಟಿ ಎರಡು ತಿಂಗಳ ಕಾಲ ಮುಂದುವರಿದಿತ್ತು. ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿರುವದು ಆಗಸ್ಟ್ ಕೊನೆವಾರದ ವರೆಗಿನ ಹಾನಿ ಬಗ್ಗೆ ಮಾತ್ರ. ಅಕ್ಟೋಬರ್ ತಿಂಗಳಲ್ಲಿ ಬಹುತೇಕ ಬೆಳೆಗಳು ಕಟಾವಿಗೆ ಬಂದಿರುವ ಕಾರಣ ಅರೆಬರೆ ಹಾನಿಗೀಡಾದ ಬೆಳೆಗಳು ಸಂಪೂರ್ಣ ನಾಶವಾಗಿವೆ, ಭಾಗಶ: ಹಾನಿಗೀಡಾದ ಮನೆಗಳು ಪೂರ್ಣವಾಗಿ ಬಿದ್ದು ಹೋಗಿವೆ. ರಸ್ತೆ-ಸೇತುವೆಗಳು, ಶಾಲಾ ಕೊಠಡಿಗಳು ಇನ್ನಷ್ಟು ಹಾನಿಗೀಡಾಗಿವೆ.

ಆಗಸ್ಟ್ ತಿಂಗಳ ವರೆಗಿನ ಹಾನಿರೂ.35,000 ಕೋಟಿ ರೂಪಾಯಿ ಎಂದ ರಾಜ್ಯ ಸರ್ಕಾರವೇ ಅಂದಾಜು ಮಾಡಿದೆ. ಎರಡು ತಿಂಗಳ ನಂತರದ ಹಾನಿ ದುಪ್ಪಟ್ಟು ಆಗಿರಬಹುದು. ಈ ನಡುವೆ ನಿಯಮಾವಳಿಗಳ ಪ್ರಕಾರ ಸಂತ್ರಸ್ತರ ಶಿಬಿರಗಳಲ್ಲಿ ಕೇವಲ 60 ದಿನಗಳ ಕಾಲ ಮಾತ್ರ ಉಳಿಯಲು ಸಾಧ್ಯ. ಈ ಕಾರಣಕ್ಕಾಗಿ ಬಹಳಷ್ಟು ಸಂತ್ರಸ್ತರನ್ನು ಹೊರಹಾಕಲಾಗುತ್ತಿದೆ

ನೆರೆ ಪರಿಹಾರಕ್ಕೆ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು, ಪಕ್ಷಾಂತರಿ ಶಾಸಕರ ಕ್ಷೇತ್ರಕ್ಕೆ ಬೇಕಾಬಿಟ್ಟಿ ಹಣ ಬಿಡುಗಡೆಮಾಡುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಕಾರ್ಯಕ್ರಮಗಳಿಗೆ ಅಗತ್ಯ ಹಣ ನೀಡದೆ ನಿರ್ಲಕ್ಷಿಸುತ್ತಿದ್ದಾರೆ. ಕ್ಷೀರಧಾರೆ ಯೋಜನೆಯಡಿ ಪ್ರತಿ ಲೀಟರ್ ಹಾಲಿಗೆ ರೂ.5ರಂತೆ ರೈತರಿಗೆ ನೀಡಬೇಕಾದ ಪ್ರೊತ್ಸಾಹ ಧನ 650 ಕೋಟಿ ರೂ.ಗಳನ್ನು ಬಾಕಿ ಇರಿಸಿಕೊಂಡಿದೆ. ಕುರಿ, ಮೇಕೆ ಸತ್ತರೆ ರೂ.5000 ದಂತೆ ನೀಡಬೇಕಾದ 14.12 ಕೋಟಿ, ವಿಮಾ ಸೌಲಭ್ಯ ಇಲ್ಲದ ರಾಸುಗಳು ಆಕಸ್ಮಿಕವಾಗಿ ಸತ್ತರೆ ಗರಿಷ್ಠ 10 ಸಾವಿರದಂತೆ ನೀಡಬೇಕಾದ 3.91 ಕೋಟಿ ಇನ್ನೂ ಪಾವತಿಯಾಗಿಲ್ಲ. ನೇಕಾರರಿಗೆ ಮೀನುಗಾರರ ಸಾಲಮನ್ನಾದ ಆದೇಶವೇ ಹೊರಬಿದ್ದಿಲ್ಲ.

ಆಯ್ದ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ತಮ್ಮ ನೂರು ದಿನಗಳ ಪ್ರಮುಖ ಸಾಧನೆಯೆಂದು ಮುಖ್ಯಮಂತ್ರಿಗಳು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿರುವ 86 ಲಕ್ಷ ರೈತರಲ್ಲಿ ಈ ಯೋಜನೆಯ ಅರ್ಹ ಫಲಾನುಭವಿಗಳು 53 ಲಕ್ಷ. ಇವರಲ್ಲಿ ಮೊದಲ ಕಂತಿನಲ್ಲಿ 41 ಸಾವಿರ ರೈತರಿಗೆ ರೂ.820 ಕೋಟಿ, ಎರಡನೇ ಕಂತಿನಲ್ಲಿ 34 ಲಕ್ಷ ರೈತರಿಗೆ 66 ಕೋಟಿ ಮತ್ತು ಮೂರನೇ ಕಂತಿನಲ್ಲಿ 3 ಲಕ್ಷ ರೈತರಿಗೆ 73 ಲಕ್ಷ ನೀಡಲಾಗಿದೆ. ಮೊದಲ ಕಂತು ಪಾವತಿಯಾಗಿದ್ದು ಲೋಕಸಭಾ ಚುನಾವಣಾ ಕಾಲದಲ್ಲಿ. ಅದರ ನಂತರ ಫಲಾನುಭವಿಗಳು ಮತ್ತು ಹಣದ ಮೊತ್ತ ಕಡಿಮೆಯಾಗುತ್ತಾ ಬಂದಿರುವುದು ಗಮನಾರ್ಹವಾಗಿದೆ.

ನನ್ನ ಕೊನೆಯ ಬಜೆಟ್ ನಲ್ಲಿ ಮಳೆಯಾಶ್ರಿತ ರೈತರಿಗೆ ಗರಿಷ್ಠ 10 ಸಾವಿರ ರೂಪಾಯಿಗೆ ಒಳಪಟ್ಟು ಪ್ರತಿ ಹೆಕ್ಟೇರ್ ಗೆ ರೂ.5000 ನೀಡುವ ‘ರೈತ ಬೆಳಕು’ ಎಂಬ ಯೋಜನೆಯನ್ನು ಘೋಷಿಸಿದ್ದೆ. 70 ಲಕ್ಷ ರೈತರಿಗೆ ಪ್ರಯೋಜನವಾಗುವ ಈ ಯೋಜನೆಗೆ 3500 ಕೋಟಿ ನಿಗದಿಪಡಿಸಲಾಗಿತ್ತು. ಆ ಯೋಜನೆಯನ್ನು ಸ್ಥಗಿತಗೊಳಿಸಿರುವ ಬಿಜೆಪಿ ಸರ್ಕಾರ ಕಡಿಮೆ ವೆಚ್ಚದ ಯೋಜನೆಯನ್ನು ಹೊಸ ಹೆಸರಿನೊಂದಿಗೆ ಘೋಷಿಸಿದೆ.

ಸರ್ಕಾರದ ಈ ಸಾಧನೆಗಳಿಗೆ ಶೂನ್ಯ ಎನ್ನದೆ ಬೇರೇನು ಹೇಳಲು ಸಾಧ್ಯ.

-ಸಿದ್ದರಾಮಯ್ಯ,ವಿರೋಧ ಪಕ್ಷದ ನಾಯಕರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X