ಮದರಂಗಿ ಮಾಸಿಕದಿಂದ ಮೀಲಾದುನ್ನಬಿ ಪ್ರಯುಕ್ತ ರಾಜ್ಯ ಮಟ್ಟದ ಪ್ರಬಂಧ, ಕವನ ಸ್ಪರ್ಧೆ
ವಿಟ್ಲ, ನ.6: ಮದರಂಗಿ ಮಾಸಿಕ ಕನ್ನಡ ಪತ್ರಿಕೆಯು ಮೀಲಾದುನ್ನಬಿ ಪ್ರಯುಕ್ತ ರಾಜ್ಯ ಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆ ಏರ್ಪಡಿಸಿದೆ. ‘ನಾನು ಅರಿತಂತೆ ಮುಹಮ್ಮದ್(ಸ.) ಪೈಗಂಬರ್’ ಎಂಬ ವಿಷಯದಲ್ಲಿ ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ ಮತ್ತು ‘ಸ್ನೇಹದ ಒರತೆ’ ಎಂಬ ವಿಷಯದಲ್ಲಿ ಕವನ ಸ್ಪರ್ಧೆ ನಡೆಯಲಿದೆ.
ಆಸಕ್ತರು ಸ್ವರಚಿತ ಪ್ರಬಂಧ ಮತ್ತು ಕವನಗಳನ್ನು ನ.15ರೊಳಗೆ ಮೊ.ಸಂ.: 9449389112, 9448625980 ಅಥವಾ 9535441912ಗೆ ವಾಟ್ಸ್ ಆ್ಯಪ್ ಮೂಲಕ ಅಥವಾ madarangi786@gmail.comಗೆ ಕಳುಹಿಸಬಹುದು.
ಪ್ರಬಂಧವು ಗರಿಷ್ಠ 750 ಪದಗಳಿಗಿಂತ ಹಾಗೂ ಕವನ 16 ಪಂಕ್ತಿಗಳಿಗಿಂತ ಹೆಚ್ಚಾಗಬಾರದು. ಕೈಬರಹ ಮತ್ತು ಕೈಬರಹದಲ್ಲಿ ಬರೆದು ಫೋಟೋ ತೆಗೆದು ಕಳುಹಿಸುವ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಸ್ಪರ್ಧಾ ವಿಜೇತರಿಗೆ ಡಿಸೆಂಬರ್ನಲ್ಲಿ ಮಂಗಳೂರಿನಲ್ಲಿ ನಡೆಯುವ ಮದರಂಗಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಮೆಚ್ಚುಗೆ ಪಡೆದ ಬರಹಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಮದರಂಗಿ ಪತ್ರಿಕೆ ಸಂಪಾದಕ ಮಂಡಳಿ ಯ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.