ಮತ್ತೆ ಬಿಎಸ್ಪಿಗೆ ವಾಪಸ್ಸಾಗುವ ಮಾತೇ ಇಲ್ಲ; ಶಾಸಕ ಎನ್.ಮಹೇಶ್
![ಮತ್ತೆ ಬಿಎಸ್ಪಿಗೆ ವಾಪಸ್ಸಾಗುವ ಮಾತೇ ಇಲ್ಲ; ಶಾಸಕ ಎನ್.ಮಹೇಶ್ ಮತ್ತೆ ಬಿಎಸ್ಪಿಗೆ ವಾಪಸ್ಸಾಗುವ ಮಾತೇ ಇಲ್ಲ; ಶಾಸಕ ಎನ್.ಮಹೇಶ್](https://www.varthabharati.in/sites/default/files/images/articles/2019/11/6/218097-1573051410.jpg)
ಚಾಮರಾಜನಗರ: ಮಾಜಿ ಸಚಿವ, ಬಿಎಸ್ಪಿ ಶಾಸಕ ಎನ್.ಮಹೇಶ್ ಬಿಎಸ್ಪಿ ಪಕ್ಷದಿಂದ ದೂರ ಉಳಿಯುತ್ತಿರವ ಸಂಗತಿಯನ್ನು ಸ್ವತಃ ಶಾಸಕ ಎನ್ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ತಾನು ಬಹುಜನ ಸಮಾಜ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಸ್ವತಂತ್ರವಾಗಿದ್ದು, ತಾನು ಮೂರು ವರ್ಷಗಳ ಕಾಲ ಸ್ವತಂತ್ರವಾಗಿರುತ್ತೇನೆ. ತಾನು ಪ್ರತಿನಿಧಿಸುವ ಕ್ಷೇತ್ರದ ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕಿದೆ, ತನ್ನನ್ನು ಬಿಎಸ್ಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು, ಮತ್ತೆ ಪಕ್ಷಕ್ಕೆ ತೆರಳುವ ಮಾತೇ ಇಲ್ಲ ಎಂದರು.
ನನ್ನನ್ನು ಪಕ್ಷಕ್ಕೆ ಮತ್ತೆ ಬಿಎಸ್ಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯಾರೊಬ್ಬರು ಸಂಪರ್ಕ ಮಾಡಿಲ್ಲ, ನಾನು ಸಹ ಯಾರನ್ನು ಬೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಎನ್ ಮಹೇಶ್, ಸದ್ಯ ಬಿಜೆಪಿ ಸರ್ಕಾರ ಇದೆ ಹೀಗಾಗಿ ಕ್ಷೇತ್ರದ ಅಭಿವೃದ್ದಿ ಕೆಲಸ ಕಾರ್ಯವಾಗಬೇಕಾಗಿರುವುದರಿಂದ ಬಿಜೆಪಿ ಸರ್ಕಾರದ ಸಂಪರ್ಕದಲ್ಲಿದ್ದೇನೆ ಎಂದು ಶಾಸಕ ಎನ್.ಮಹೇಶ್ ಹೇಳುವ ಮೂಲಕ ತಮ್ಮ ನಡೆ ನಿಗೂಡತೆಯನ್ನು ಮತ್ತೊಮ್ಮೆ ತೋರ್ಪಡಿಸಿದರು.
Next Story