ಮುರಿದ ಉಚ್ಚಿಲ - ಕೆ.ಸಿರೋಡ್ ಮಧ್ಯದಲ್ಲಿರುವ ಸೇತುವೆಯ ತಡೆಗೋಡೆ: ಅಪಾಯ ತಪ್ಪಿಸುವಂತೆ ಮನವಿ
![ಮುರಿದ ಉಚ್ಚಿಲ - ಕೆ.ಸಿರೋಡ್ ಮಧ್ಯದಲ್ಲಿರುವ ಸೇತುವೆಯ ತಡೆಗೋಡೆ: ಅಪಾಯ ತಪ್ಪಿಸುವಂತೆ ಮನವಿ ಮುರಿದ ಉಚ್ಚಿಲ - ಕೆ.ಸಿರೋಡ್ ಮಧ್ಯದಲ್ಲಿರುವ ಸೇತುವೆಯ ತಡೆಗೋಡೆ: ಅಪಾಯ ತಪ್ಪಿಸುವಂತೆ ಮನವಿ](https://www.varthabharati.in/sites/default/files/images/articles/2019/11/6/218169-1573060964.jpeg)
ಮಂಗಳೂರು: ರಾಷ್ಟೀಯ ಹೆದ್ದಾರಿ ಸೋಮೇಶ್ವರ ಉಚ್ಚಿಲ ಹಾಗೂ ಕೆ.ಸಿರೋಡ್ ಮಧ್ಯದಲ್ಲಿರುವ ಸೇತುವೆಯ ತಡೆಗೋಡೆಯು ಮುರಿತ ಗೊಂಡಿದ್ದು ಆ ಸೇತುವೆಯ ಬಳಸುವ ನಿತ್ಯ ವಾಹನ ಸವಾರರು ಹಾಗೂ ಶಾಲಾ ಮತ್ತು ಪರಿಸರದ ಜನರು ಹೋಗುವುದರಿಂದಾಗುವ ಅಪಾಯದಿಂದ ತಪ್ಪಿಸುವಂತೆ ಮನವಿ.
ರಾಷ್ಟೀಯ ಹೆದ್ದಾರಿ ಎನ್ ಎಚ್ 66 ಉಚ್ಚಿಲದಿಂದ ಕೆ ಸಿ ರೋಡ್ ಸಂಚರಿಸುವಾಗ ಮಧ್ಯದಲ್ಲಿ ಈ ಸೇತುವೆಯ ತಡೆಗೋಡೆ ಅಪಘಾತದಿಂದ ಮುರಿದು ಹೋಗಿ ತಿಂಗಳುಗಾದರೂ ದುರಸ್ಥಿ ಹೊಂದದೆ ಇರುವುದರಿಂದ ಪಾದಚಾರಿಗಳು, ವಾಹನ ಸವಾರರು, ಪ್ರಾಣ ಭೀತಿಯಿಂದಲೇ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಾಷ್ಟೀಯ ಹೆದ್ದಾರಿಯ ಮೇಲೆ ಹೋಗುವುದರಿಂದಾಗುವ ಅಪಾಯವನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಲು ತಡೆಗೋಡೆಯ ದುರಸ್ಥಿ ಕಾರ್ಯವನ್ನು ಅದಷ್ಟು ಬೇಗ ಕೈಗೊಳ್ಳಬೇಕು ಅಲ್ಲದೆ ಈ ಸೇತುವೆಯು ಕಿರಿದಾಗಿದ್ದು ಮುರಿದು ಹೋದ ತಡೆಗೋಡಯ ಬದಿಯಲ್ಲಿ ಅಡ್ಡಲಾಗಿಟ್ಟ ಸಿಮೆಂಟು ಗೋಡೆಯು ಮತ್ತಷ್ಟು ಅನಾಹುತಕ್ಕೆ ಎಡೆ ಮಾಡಿಕೊಟ್ಟದೆ. ರಾತ್ರಿ ಪ್ರಯಾಣಿಕರಿಗೆ ಸೇತುವೆ ಬಳಿ ಕತ್ತಲು ಇರುವುದರಿಂದ ಅಡ್ಡಲಾಗಿಟ್ಟ ಸಿಮೆಂಟ್ ಬ್ಯಾರಿಕೇಟ್ ಅವಗಡಕ್ಕೆ ಕಾರಣವಾದೀತು ಸ್ಥಳೀಯರು ತಿಳಿಸಿದ್ದಾರೆ.