ಎನ್ಎಂಪಿಟಿ ಹಾರ್ಬರ್ನಲ್ಲಿ ಕಂಟೈನರ್ ಪಲ್ಟಿ: ಕಾರ್ಮಿಕ ಸ್ಥಳದಲ್ಲೇ ಮೃತ್ಯು
ಮಂಗಳೂರು: ನಗರದ ಹೊರವಲಯದಲ್ಲಿನ ಎನ್ಎಂಪಿಟಿ ಹಾರ್ಬರ್ನಲ್ಲಿ ಶಿಪ್ವೊಂದಕ್ಕೆ ರಫ್ತು ಮಾಡುತ್ತಿದ್ದ ಕಂಟೈನರ್ ಪಲ್ಟಿಯಾಗಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ವಾಮಂಜೂರು ನಿವಾಸಿ ವಿನೋದ್ ಪೂಜಾರಿ ಮೃತರು ಎಂದು ಗುರುತಿಸಲಾಗಿದೆ.
ಬುಧವಾರ ತಡರಾತ್ರಿ ಶಿಪ್ವೊಂದಕ್ಕೆ ರಫ್ತು ಮಾಡಲು ಕಂಟೈನರ್ನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಟರ್ನಿಂಗ್ನಲ್ಲಿ ಕಂಟೈನರ್ ಗಾಡಿಯಿಂದ ಜಾರಿ ಲಾರಿ ಕ್ಯಾಬೀನ್ ಮೇಲೆ ಬಿದ್ದಿದೆ. ಪರಿಣಾಮ ವಿನೋದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಡಿಯ ಟ್ರೇಲರ್ಗಳಿಗೆ ಸೆಫ್ಟೀ ಲಾಕ್ ಹಾಕಿದ್ದರೆ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ. ಈ ಸೆಫ್ಟಿ ಲಾಕರ್ ಹಾಕಲು ಕನಿಷ್ಠ 10-15 ನಿಮಿಷ ಬೇಕಾಗುತ್ತದೆ. ಶಿಪ್ ಲೋಡಿಂಗ್ ಮತ್ತು ಅನ್ಲೋಡಿಂಗ್ ಸಮಯ ಲಾಕರ್ ಹಾಕಿದರೆ ತಡವಾಗುತ್ತದೆ ಎನ್ನುವ ಕಾರಣಕ್ಕೆ ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story