ವಿದ್ಯಾರ್ಥಿ ತುಳು ಸಮ್ಮೇಳನ : ಲಾಂಛನ ಬಿಡುಗಡೆ
![ವಿದ್ಯಾರ್ಥಿ ತುಳು ಸಮ್ಮೇಳನ : ಲಾಂಛನ ಬಿಡುಗಡೆ ವಿದ್ಯಾರ್ಥಿ ತುಳು ಸಮ್ಮೇಳನ : ಲಾಂಛನ ಬಿಡುಗಡೆ](https://www.varthabharati.in/sites/default/files/images/articles/2019/11/7/218277-1573140637.jpeg)
ಮಂಗಳೂರು : ವಿದ್ಯಾರ್ಥಿಗಳ ವಿಕಸನಕ್ಕೆ ಮತ್ತು ತುಳುಭಾಷೆಯ ಬಗ್ಗೆ ಜಾಗ್ರತಿ ಮೂಡಿಸಲು ಪ್ರಥಮ ತುಳು ಸಮ್ಮೇಳನ ಶ್ಲಾಘನೀಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ. ಎಸ್.ಎಡಪಡಿತ್ತಾಯ ತಿಳಿಸಿದ್ದಾರೆ.
ತುಳು ಪರಿಷತ್ ವತಿಯಿಂದ ಮಂಗಳೂರು ವಿಶ್ವ ವಿದ್ಯಾನಿಲಯದ ಸಹಭಾಗಿತ್ವದಲ್ಲಿ ನಡೆಯಲಿರುವ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನ ವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಡಾ.ಕೆ. ಶಿವರಾಮ ಕಾರಂತ ಸಭಾಂಗಣದಲ್ಲಿ ಅವರು ಲಾಂಛನ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಮಂಗಳೂರು ವಿಶ್ವ ಕುದ್ಮುಲ್ ರಂಗರಾವ್ ಸ್ಮಾರಕ ಪುರಭವನದಲ್ಲಿ ಜನವರಿ 16ರಂದು ನಡೆಯಲಿದೆ. ಅದಕ್ಕೆ ಪೂರ್ವ ಭಾವಿಯಾಗಿ ವಿದ್ಯಾರ್ಥಿ ಗಳಿಗೆ ಹಲವು ಸ್ಪರ್ಧೆಗಳು ನಡೆಯಲಿದೆ ಎಂದು ಸಂಘಟಕರಾದ ತಾರಾನಾಥ ಕಾಪಿಕಾಡ್ ತಿಳಿಸಿದ್ದಾರೆ.
ವಿದ್ಯಾನಿಲಯ ಸ್ಥಾಪನೆಯಾಗಿ 40 ವರುಷಗಳಾದ ಬಳಿಕ ನಡೆಯುತ್ತಿರುವ ಪ್ರಥಮ ತುಳು ಸಮ್ಮೇಳನ ಚಾರಿತ್ರಿಕ ಸಮ್ಮೇಳನ ವಾಗಲಿ ಎಂದು ಹಾರೈಸಿದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಪ್ರಭಾಕರ್ ನೀರ್ ಮಾರ್ಗ ,ಗೌರವಾಧ್ಯಕ್ಷ ಸ್ವರ್ಣ ಸುಂದರ್, ಪದಾಧಿಕಾರಿಗಳಾದ ಡಾ.ಉದಯ ಕುಮಾರ್ ಇರ್ವತ್ತೂರು, ಶುಭೋದಯ ಆಳ್ವಾ, ಮಮತಾ ಗಟ್ಟಿ,ಕಸ್ತೂರಿ ಪಂಜ, ಶಿವಾನಂದ ಕರ್ಕೇರಾ,ಡಾ.ಮಾದವ ಉಪಸ್ಥಿತರಿದ್ದರು. ತಾರಾನಾಥ ಕಾಪಿಕಾಡ್ ಸ್ವಾಗತಿಸಿದರು. ಡಾ.ವಾಸುದೇವ ಬೆಳ್ಳೆ ವಂದಿಸಿದರು.