ಮೀಲಾದ್ ಸಂಭ್ರಮಾಚರಣೆಗೆ ತುಳುನಾಡ ಸಂಜೀವಿನಿ, ಯುವಶಕ್ತಿ ಫ್ರೆಂಡ್ಸ್ನಿಂದ ಸಿಹಿತಿಂಡಿ, ಪಾನೀಯ ವಿತರಣೆ
![ಮೀಲಾದ್ ಸಂಭ್ರಮಾಚರಣೆಗೆ ತುಳುನಾಡ ಸಂಜೀವಿನಿ, ಯುವಶಕ್ತಿ ಫ್ರೆಂಡ್ಸ್ನಿಂದ ಸಿಹಿತಿಂಡಿ, ಪಾನೀಯ ವಿತರಣೆ ಮೀಲಾದ್ ಸಂಭ್ರಮಾಚರಣೆಗೆ ತುಳುನಾಡ ಸಂಜೀವಿನಿ, ಯುವಶಕ್ತಿ ಫ್ರೆಂಡ್ಸ್ನಿಂದ ಸಿಹಿತಿಂಡಿ, ಪಾನೀಯ ವಿತರಣೆ](https://www.varthabharati.in/sites/default/files/images/articles/2019/11/10/218643-1573365957.gif)
ಮಂಗಳೂರು, ನ.10: ಮೀಲಾದುನ್ನಬಿ ಪ್ರಯುಕ್ತ ನಗರದ ಬಂದರ್ ಕಂದುಕ ಪ್ರದೇಶದಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಮೆರವಣಿಗೆಯ ಸಂದರ್ಭ ತುಳುನಾಡ ಸಂಜೀವಿನಿ ಸಂಸ್ಥೆ ಹಾಗೂ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಿ ಸೌಹಾರ್ದ ಮೆರೆದರು.
ಈ ಸಂದರ್ಭ ಸಂಸ್ಥೆಗಳ ಪದಾಧಿಕಾರಿಗಳಾದ ರೋಹಿತ್ ಕುಮಾರ್, ಸದಾಶಿವ ಶೆಟ್ಟಿ, ಮಹೇಂದ್ರ ಕಾಶಿಪಟ್ನ, ರಾಹುಲ್ ದೇವಿಪ್ರಸಾದ್, ಮಹೇಶ್ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.