ಉಳ್ಳಾಲ ದರ್ಗಾ ಸಮಿತಿಯಿಂದ ಮೀಲಾದುನ್ನಬಿ ಸ್ವಲಾತ್ ಮೆರವಣಿಗೆ
![ಉಳ್ಳಾಲ ದರ್ಗಾ ಸಮಿತಿಯಿಂದ ಮೀಲಾದುನ್ನಬಿ ಸ್ವಲಾತ್ ಮೆರವಣಿಗೆ ಉಳ್ಳಾಲ ದರ್ಗಾ ಸಮಿತಿಯಿಂದ ಮೀಲಾದುನ್ನಬಿ ಸ್ವಲಾತ್ ಮೆರವಣಿಗೆ](https://www.varthabharati.in/sites/default/files/images/articles/2019/11/10/218645-1573367339.gif)
ಉಳ್ಳಾಲ, ನ.10: ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.)ರ ಜನ್ಮದಿನದ ಪ್ರಯುಕ್ತ ಉಳ್ಳಾಲ ದರ್ಗಾ ಸಮಿತಿಯ ವತಿಯಿಂದ ಸೈಯದ್ ಮದನಿ ಅರಬಿಕ್ ಟ್ರಸ್ಟ್ ಅಧೀನದಲ್ಲಿರುವ ಮೊಹಲ್ಲಾ ಮದ್ರಸ ಮಕ್ಕಳ ಮತ್ತು ಊರ ನಾಗರಿಕರಿಂದ ಕೋಟೆಪುರ ಜುಮಾ ಮಸೀದಿಯಿಂದ ಉಳ್ಳಾಲ ದರ್ಗಾವರೆಗೆ ರವಿವಾರ ಸ್ವಲಾತ್ ಮೆರವಣಿಗೆಯು ಜರುಗಿತು.
ಈ ಸಂದರ್ಭ ಮಾತನಾಡಿದ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಸ್ವಲಾತ್ ಮೆರವಣಿಗೆಯಿಂದ ಪ್ರವಾದಿಯವರ ತತ್ವಾದರ್ಶ ಮತ್ತು ಅವರ ಧಾರ್ಮಿಕ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀರ್ ಬಾಖವಿ ದುಆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್, ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಅಡಿಟರ್ ಯು.ಟಿ.ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಆಝಾದ್ ಇಸ್ಮಾಯೀಲ್, ಸದಸ್ಯರಾದ ಎ.ಕೆ.ಮುಹಿಯುದ್ದೀನ್ ಹಾಜಿ, ಇಬ್ರಾಹೀಂ ಹಾಜಿ ಉಳ್ಳಾಲಬೈಲು, ಹಸನಬ್ಬ ಕೈಕೊ, ಆಸಿಫ್ ಅಬ್ದುಲ್ಲ, ಫಾರೂಕ್ ಉಳ್ಳಾಲ್, ಯು.ಕೆ.ಮುಹಮ್ಮದ್ ಮುಸ್ತಫ ಮಂಚಿಲ, ಅಲಿಮೋನು, ಕೆ.ಪಿ.ನಝೀರ್, ಅಬೂಬಕರ್ ಅಲಿ ನಗರ, ಅಶ್ರಫ್ ಮುಕ್ಕಚ್ಚೇರಿ, ಹಮೀದ್ ಕೋಡಿ, ಮುಹಮ್ಮದ್ ಎಚ್.ಕೆ.ಹನೀಫ್ ಸೋಲಾರ್, ಮಾಜಿ ಸದಸ್ಯರಾದ ಖಾದರ್ ಹಾಜಿ ಮುಕ್ಕಚ್ಚೇರಿ, ಕಬೀರ್ ಚಯಬ್ಬ, ನಗರಸಭೆ ಸದಸ್ಯರಾದ ಮುಹಮ್ಮದ್ ಮುಕ್ಕಚ್ಚೇರಿ, ರವೂಫ್ ಹಳೆಕೋಟೆ ಮತ್ತಿತ್ತರು ಉಪಸ್ಥಿತರಿದ್ದರು.