ಮೀಲಾದುನ್ನಬಿ: ಮಾರಿಪಳ್ಳದಲ್ಲಿ ಮೀಲಾದ್ ಜಾಥಾ
![ಮೀಲಾದುನ್ನಬಿ: ಮಾರಿಪಳ್ಳದಲ್ಲಿ ಮೀಲಾದ್ ಜಾಥಾ ಮೀಲಾದುನ್ನಬಿ: ಮಾರಿಪಳ್ಳದಲ್ಲಿ ಮೀಲಾದ್ ಜಾಥಾ](https://www.varthabharati.in/sites/default/files/images/articles/2019/11/10/218662-1573379209.gif)
ಬಂಟ್ವಾಳ, ನ.10: ಮೀಲಾದುನ್ನಬಿ ಪ್ರಯುಕ್ತ ಮಾರಿಪಳ್ಳ ಬದ್ರಿಯಾ ಜುಮಾ ಮಸೀದಿ ವತಿಯಿಂದ ಧ್ವಜಾರೋಹಣ, ಸ್ವಲಾತ್ ಹಾಗೂ ಮೀಲಾದ್ ಜಾಥಾ ನಡೆಯಿತು.
ಮಸೀದಿಯ ಖತೀಬ್ ಖಲೀಲ್ ರಹ್ಮಾನ್ ದಾರಿಮಿ ದುಆ ನೆರವೇರಿಸಿ ರ್ಯಾಲಿಗೆ ಚಾಲನೆ ನೀಡಿದರು. ಪುದು ಗ್ರಾಪಂ ಅಧ್ಯಕ್ಷ, ಮಸೀದಿಯ ಉಪಾಧ್ಯಕ್ಷ ರಮ್ಲಾನ್ ಮಾರಿಪಳ್ಳ ಧ್ವಜಾರೋಹಣ ನೆರವೇರಿಸಿದರು. ಮಸೀದಿಯಿಂದ ಹೊರಟ ರ್ಯಾಲಿ ಸುಜೀರ್ ಮದ್ರಸ ಮೂಲಕ ಕಡೆಗೋಳಿಯವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಮಸೀದಿಯ ಪದಾಧಿಕಾರಿಗಳಾದ ಅಬೂಬಕರ್ ಪಿ., ಮುಹಮ್ಮದ್ ಹಾಜಿ, ಹುಸೈನ್ ಎಂ., ಸಲಾಂ ಸುಜೀರ್, ಇಬ್ರಾಹೀಂ, ಹುಸೈನಬ್ಬ ಮಾರಿಪಳ್ಳ, ಕರೀಂ ಕಣ್ಣೂರು, ಅಬೂಬಕರ್ ಪಾಡಿ, ಅಬೂಬಕರ್ ಮಾರಿಪಳ್ಳ, ಇಮ್ರಾನ್, ಇಕ್ಬಾಲ್ ಸುಜೀರ್, ಜಲೀಲ್ ರೊಟ್ಟಿಗುಡ್ಡೆ, ಅಬ್ಬುಲ್ಲ ರೊಟ್ಟಿಗುಡ್ಡೆ, ಬಶೀರ್ ಮಾರಿಪಳ್ಳ, ಫಯಾಝ್ ಮಾರಿಪಳ್ಳ, ಕೆ. ಬಾವ ದೇವಸ್ಯ, ರಝಾಕ್ ದೇವಸ್ಯ, ಮುಹಮ್ಮದ್ ಕೋಯ, ಲತೀಫ್ ಮಲಾರ್, ಇನ್ಸಾದ್, ಅಬ್ದುಲ್ ಘನಿ, ಹುಸೈನ್, ಖಾಸಿಂ ಉಸ್ತಾದ್, ಇಬ್ರಾಹೀಂ ಉಸ್ತಾದ್, ಹಮೀದ್ ಉಸ್ತಾದ್ ಹಾಜರಿದ್ದರು.
Next Story