ಪ್ರವಾದಿ ಜನ್ಮ ದಿನಾಚರಣೆ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್ ವಿಖಾಯ ವತಿಯಿಂದ ಶ್ರಮದಾನ ಕಾರ್ಯಕ್ರಮ
![ಪ್ರವಾದಿ ಜನ್ಮ ದಿನಾಚರಣೆ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್ ವಿಖಾಯ ವತಿಯಿಂದ ಶ್ರಮದಾನ ಕಾರ್ಯಕ್ರಮ ಪ್ರವಾದಿ ಜನ್ಮ ದಿನಾಚರಣೆ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್ ವಿಖಾಯ ವತಿಯಿಂದ ಶ್ರಮದಾನ ಕಾರ್ಯಕ್ರಮ](https://www.varthabharati.in/sites/default/files/images/articles/2019/11/10/218674-1573385215.jpg)
ಮಂಗಳೂರು : ಪ್ರವಾದಿ ಜನ್ಮ ದಿನಾಚರಣೆಯ ಪ್ರಯುಕ್ತ ಹದಗೆಟ್ಟ ಇಂದಿರಾನಗರ - ಹಳೆಯಂಗಡಿ ಮುಖ್ಯ ರಸ್ತೆಯನ್ನು ಎಸ್ಕೆಎಸ್ಸೆಸ್ಸೆಫ್ ವಿಖಾಯ ಹಳೆಯಂಗಡಿ ಮತ್ತು ಬೊಳ್ಳೂರು ಹಾಗೂ ಇನ್ನಿತರ ಸದಸ್ಯರ ಸಹಾಯದಿಂದ ಶನಿವಾರ ರಾತ್ರಿ ತಾತ್ಕಾಲಿಕವಾಗಿ ಕಲ್ಲು ಮಣ್ಣುಗಳಿಂದ ಮುಚ್ಚಿ ದುರಸ್ತಿ ಗೊಳಿಸಲಾಯಿತು.
ಇದರ ನೇತೃತ್ವವನ್ನು ವಿಖಾಯ ಚೇರ್ಮಾನ್ ಹುಸೈನಬ್ಬ ಬೊಳ್ಳೂರು ಹಾಗೂ ಅಹಮದ್ ಬಾವ ಮದನಿ ವಹಿಸಿದ್ದರು. ವಿಖಾಯ ಕಾರ್ಯಕರ್ತರೊಂದಿಗೆ ಬೊಳ್ಳೂರು ದಪ್ಪ್ ಟೀಮ್ ಸದಸ್ಯರು ಹಾಗೂ ಇನ್ನಿತರ ಸದಸ್ಯರು ಶ್ರಮದಾನಗೈದರು