ಅಕ್ರಮ ಮದ್ಯ ಮಾರಾಟ: ನಾಲ್ವರ ಬಂಧನ
ಕುಂದಾಪುರ, ನ.10: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ವಿಧಿಸಲಾದ ನಿಷೇಧದ ಮಧ್ಯೆಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನ.9ರಂದು ರಾತ್ರಿ ವೇಳೆ ಕುಂದಾಪುರ ಶಾಸ್ತ್ರಿ ವೃತ್ತದ ಬಳಿಯ ಶಾಲೂಮ್ ಹೋಟೆಲ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರವಿ ಮೊಗವೀರ (47), ಶಿವಯ್ಯ ಹಿರೇಮಠ್(26), ವಿಕ್ರಮ್ ಶೆಟ್ಟಿ ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿ, 6,822 ರೂ. ಮೌಲ್ಯದ ಒಟ್ಟು 9 ಲೀಟರ್ 120 ಎಂ.ಎಲ್. ಮದ್ಯ ಹಾಗೂ 4540 ನಗದು ಮತ್ತು ಮೂರು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಗಿಳಿಯಾರು ಗ್ರಾಮದ ಕೋಟ ಪಂಚಾಯತ್ ಕಚೇರಿ ಹಿಂಬದಿ ಮಹಿಳಾ ಮಂಡಳಿಯ ಕಟ್ಟಡದ ಬಳಿಯ ಅಮೃತ್ ಬಾರ್ ಆ್ಯಂಡ್ ರೆಸ್ಟೊರೆಂಟ್ನಲ್ಲಿ ನ.9ರಂದು ಮಧ್ಯಾಹ್ನ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರವಿ ಎಂಬಾತನನ್ನು ಬಂಧಿಸಿ, 1190.14 ರೂ. ಮೌಲ್ಯದ ಒಟ್ಟು ಪ್ರಮಾಣ 1.8 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.