ಆರೋಗ್ಯವಂತ ಸಮಾಜ ಪತ್ರಿಕೋದ್ಯಮದ ಸಂಕೇತ: ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು, ನ.16: ಇಂದು ರಾಷ್ಟ್ರೀಯ ಪತ್ರಿಕಾ ದಿನ. ಪತ್ರಕರ್ತ ಮಿತ್ರರಿಗೆ ನನ್ನ ಶುಭಾಶಯ. ನಿಷ್ಪಕ್ಷಪಾತ, ನಿಷ್ಕಲ್ಮಷ, ನಿರ್ಲಿಪ್ತ, ಸಾಮಾಜಿಕ ಕಾಳಜಿಯೇ ಪತ್ರಿಕಾ ಧರ್ಮ. ಅದೇ ಪತ್ರಿಕಾರಂಗದ ಜೀವಾಳ. ಇದೇ ಕಾರಣಕ್ಕೆ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಆಧಾರಸ್ತಂಭಗಳಲ್ಲೊಂದು ಎನಿಸಿದೆ. ಆರೋಗ್ಯವಂತ ಸಮಾಜವು ನಿಜ ಪತ್ರಿಕೋದ್ಯಮದ ಸಂಕೇತ. ಸಮಾಜದ ಆರೋಗ್ಯ ಕೆಡದಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
Next Story