ಮಂಗಳೂರು ಅಭಿವೃದ್ಧಿಗೆ ಶ್ರಮಿಸಿ: ಐವನ್ ಡಿಸೋಜ
![ಮಂಗಳೂರು ಅಭಿವೃದ್ಧಿಗೆ ಶ್ರಮಿಸಿ: ಐವನ್ ಡಿಸೋಜ ಮಂಗಳೂರು ಅಭಿವೃದ್ಧಿಗೆ ಶ್ರಮಿಸಿ: ಐವನ್ ಡಿಸೋಜ](https://www.varthabharati.in/sites/default/files/images/articles/2019/11/16/219597-1573919271.jpg)
ಮಂಗಳೂರು, ನ.16: ಕಳೆದ ಸಾಲಿನಲ್ಲಿದ್ದ ಆಶೋತ್ತರಗಳನ್ನು ಈಡೇರಿಸಿದ್ದು, ಮುಂದಿನ ಐದು ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ನೂತನವಾಗಿ ಚುನಾಯಿತರಾದ ಕಾರ್ಪೊರೇಟರ್ಗಳಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕರೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ 14 ಕಾರ್ಪೊರೇಟರ್ಗಳನ್ನು ತಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಕೂಟದಲ್ಲಿ ಅಭಿನಂದಿಸಿ ಮಾತನಾಡಿ, ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಾರದೇ ಇದ್ದರೂ ಕಳೆದ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚುನಾಯಿತರಾದ ಮನಪಾ ಸದಸ್ಯರಾದ ಶಶಿಧರ್ ಹೆಗ್ಡೆ, ಲ್ಯಾನ್ಸ್ ಲೋಟ್ ಪಿಂಟೋ, ಭಾಸ್ಕರ್ ಕೆ., ಜೆಸಿಂತಾ ವಿಜಯ ಆಲ್ಫ್ರೆಡ್, ಪ್ರವೀಣ್ ಚಂದ್ರ ಆಳ್ವ, ಅಶ್ರಫ್ ಬಜಾಲ್, ಅನಿಲ್ ಕುಮಾರ್ ಕೇಶವ ಮರೋಳಿ, ಅಬ್ದುಲ್ ರವೂಫ್, ಲತೀಫ್ ಕಂದಕ್, ಜೀನತ್ ಶಂಶುದ್ದೀನ್, ಶಂಶುದ್ದೀನ್ ಕುದ್ರೋಳಿ, ನವೀನ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
Next Story