ಬೊಬ್ಬೆಕೇರಿ ಮದ್ರಸದಲ್ಲಿ ಮೀಲಾದ್ ಫೆಸ್ಟ್
ವಿಟ್ಲ, ನ.17: ಇಲ್ಲಿನ ಬೊಬ್ಬೆಕ್ಕೇರಿ ಖದೀಜತುಲ್ ಖುಬ್ರಾ ಮಸೀದಿ ಮತ್ತು ಮುನೀರುಲ್ ಇಸ್ಲಾಂ ಮದ್ರಸದ ‘ಮೀಲಾದ್ ಫೆಸ್ಟ್’ ಕಾರ್ಯಕ್ರಮವು ಅಧ್ಯಕ್ಷ ಬಶೀರ್ ಬೊಬ್ಬೆಕ್ಕೇರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಅಲ್ಲಿಂ ಹನೀಫ್ ಲತೀಫಿ ಕಾರ್ಯಕ್ರಮ ಉದ್ಘಾಟಿಸಿದರು.
ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಅಲಿ ಫೈಝಿ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ಮದ್ರಸದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಲಾಗಿತ್ತು.
ಮಸೀದಿಯ ಪ್ರ. ಕಾರ್ಯದರ್ಶಿ ಶಮೀರ್ ಪಳಿಕೆ, ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ, ಹಕೀಂ ಅರ್ಶದಿ, ಅಬ್ದುಲ್ ಖಾದರ್ ಬೊಬ್ಬೆಕ್ಕೇರಿ, ಅಬ್ದುಲ್ ಖಾದರ್ , ಶೈನ್ ಮೇಗಿನಪೇಟೆ ಮುಖ್ಯ ಅತಿಥಿಗಳಾಗಿದ್ದರು.
ಝುಬೈರ್ ಪಳಿಕೆ ಸ್ವಾಗತಿಸಿದರು. ಮುನೀರ್ ಬೊಬ್ಬೆಕ್ಕೇರಿ ವಂದಿಸಿದರು. ರಹೀಂ ಪಳಿಕೆ ಕಾರ್ಯಕ್ರಮ ನಿರೂಪಿಸಿದರು. ಇಕ್ಬಾಲ್ ಕೋಡಿ ಸಹಕರಿಸಿದರು.
Next Story