Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜೀವನದಲ್ಲಿ ಹಿನ್ನಡೆ ತಾತ್ಕಾಲಿಕ;...

ಜೀವನದಲ್ಲಿ ಹಿನ್ನಡೆ ತಾತ್ಕಾಲಿಕ; ಎದೆಗುಂದಬೇಡಿ: ಮಹೇಶ್ ಎಸ್.

ವಾರ್ತಾಭಾರತಿವಾರ್ತಾಭಾರತಿ17 Nov 2019 9:17 PM IST
share
ಜೀವನದಲ್ಲಿ ಹಿನ್ನಡೆ ತಾತ್ಕಾಲಿಕ; ಎದೆಗುಂದಬೇಡಿ: ಮಹೇಶ್ ಎಸ್.

ಮಣಿಪಾಲ, ನ.17: ಜೀವನದಲ್ಲಿ ಹಿನ್ನಡೆ ಎಂಬುದು ತಾತ್ಕಾಲಿಕ. ಇದರಿಂದ ಎಂದಿಗೂ ಎದೆಗುಂದಬೇಡಿ, ಪ್ರಯತ್ನವನ್ನು ನಿಲ್ಲಿಸಬೇಡಿ. ಹಿನ್ನಡೆಯೊಂದಿಗೆ ಯಶಸ್ಸಿನ ಬೀಜವೂ ಜೊತೆಯಲ್ಲೇ ಇರುತ್ತದೆ ಎಂದು ಯುಎಇಯ ಟಿಎಎಸ್‌ಸಿ ಔಟ್‌ಸೋರ್ಸಿಂಗ್‌ನ ಸ್ಥಾಪಕ ಹಾಗೂ ಸಿಇಓ ಮಹೇಶ್ ಶಹದಾದಪುರಿ ಪದವೀಧರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ರವಿವಾರನಡೆದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ (ಮಾಹೆ)ನ 27ನೇ ಘಟಿಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡುತಿದ್ದರು. ಘಟಿಕೋತ್ಸವದ ಕೊನೆಯ ದಿನದಂದು ಒಟ್ಟು 1387 ಮಂದಿ ವಿದ್ಯಾರ್ಥಿಗಳು ವಿವಿಧ ಪದವಿ, ಡಾಕ್ಟರೇಟ್ ಪದವಿ ಹಾಗೂ ಚಿನ್ನದ ಪದಕಗಳನ್ನು ಪಡೆದರು.

ಉದ್ಯಮಿಯಾಗಿ ತನ್ನ ಬದುಕಿನ ಏಳು-ಬೀಳುಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಮಾಹೆಯ ಹಳೆ ವಿದ್ಯಾರ್ಥಿಯಾಗಿರುವ ಮಹೇಶ್, ಮಣಿಪಾಲದ ಎಂಐಟಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದು ಹೊರಬಂದ ಬಳಿಕ ಉದ್ಯೋಗವೊಂದನ್ನು ಪಡೆಯಲು ತಾನು ನಡೆಸಿದ ಹೋರಾಟವನ್ನು ಸವಿಸ್ತಾರವಾಗಿ ವಿವರಿಸಿದರು.

ತನಗೆ ಭಾರತದಲ್ಲಾಗಲಿ, ಮುಂದೆ ಕೆಲಸ ಹುಡುಕಿ ತೆರಳಿದ ದುಬೈಯಲ್ಲಾಗಲೀ ಯಾರೂ ಸಂದರ್ಶನಕ್ಕೆ ಕರೆಯಲಿಲ್ಲ. ಉತ್ತಮ ವಿದ್ಯಾರ್ಥಿಯಾಗಿದ್ದ ತಾನು ಉದ್ಯೋಗಕ್ಕಾಗಿ ಸುದೀರ್ಘಕಾಲ ಆತಂಕದಿಂದ ಕಾಯಬೇಕಾಯಿತು ಎಂದರು.

ಬಹಳಷ್ಟು ಕಂಪೆನಿಗಳು ತನ್ನ ಅರ್ಜಿಯನ್ನು ತಿರಸ್ಕರಿಸಿದಾಗ ನನ್ನ ನಿಲುವು ಗಟ್ಟಿಯಾಯಿತು. ದುಬೈಯಲ್ಲಿ ಒಂದೆರಡು ಉದ್ಯೋಗ ಸಿಕ್ಕಿತಾದರೂ, ಮೂರು ತಿಂಗಳಿಗೇ ಅವುಗಳಿಂದ ಹೊರಬಂದೆ. ಕೊನೆಗೆ ಬೋಸ್ಟನ್‌ನಲ್ಲಿ ಎಂಬಿಎ ಮುಗಿಸಿ ಮತ್ತೆ ಉದ್ಯೋಗದ ಬೇಟೆಗಿಳಿದೆ ಎಂದವರು ತನ್ನ ಹೋರಾಟದ ಬದುಕನ್ನು ಮೆಲುಕು ಹಾಕಿದರು.

ಸುಮಾರು 12 ಸಂದರ್ಶನ ಗಳನ್ನು ಮುಗಿಸಿದ ಬಳಿಕ ನನಗೆ ಜಾಕ್‌ಪಾಟ್ ಹೊಡೆಯಿತು. ಇಂಟೆಲ್‌ನಲ್ಲಿ ನಾನು ಉದ್ಯೋಗ ಪಡೆದೆ. ಆದರೆ ಅಷ್ಟರಲ್ಲಿ ಸ್ವಉದ್ಯೋಗದ ನಿಲುವು ಗಟ್ಟಿಗೊಂಡು 1999ರಲ್ಲಿ ನನ್ನದೇ ಆದ ಕಂಪೆನಿ ಆರಂಭಿಸಿದೆ. ನನ್ನಲ್ಲಿದ್ದ, ನನ್ನ ಕುಟುಂಬದವರಿಂದ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಕಂಪೆನಿ ಆರಂಭಿಸಿದೆ. ದುರಾದೃಷ್ಟ ಅಲ್ಲೂ ನನ್ನ ಬೆನ್ನು ಬಿಡದೇ ನನ್ನದೆಲ್ಲವನ್ನೂ ಕಳೆದುಕೊಂಡು ಮತ್ತೆ ಹಿಂದಿನ ಸ್ಥಿತಿಗೆ ಬಂದೆ.

ಹಲವು ತಿಂಗಳ ಬಳಿಕ ನಾನು ಮತ್ತೊಂದು ಕಂಪೆನಿಯನ್ನು ಪ್ರಾರಂಭಿಸಿದೆ. ಈ ಬಾರಿ ಹೆಚ್ಚು ಎಚ್ಚರಿಕೆಯಿಂದ ಹಾಗೂ ಆಕ್ರಮಣಕಾರಿಯಾಗಿ ವಿಭಿನ್ನವಾಗಿ ಪ್ರಾರಂಭಿಸಿದೆ. ಯಶಸ್ಸು ನನ್ನ ಕೈಹಿಡಿಯಿತು. ಇಂದು ನನ್ನ ಕಂಪೆನಿ ವಿಶ್ವದ 20 ದೇಶಗಳಲ್ಲಿ 77 ದೇಶಗಳ ಪೌರತ್ವ ಹೊಂದಿದ 5000 ಮಂದಿ ಉದ್ಯೋಗಿ ಗಳಿದ್ದಾರೆ. ವಿಶ್ವದಲ್ಲಿ 80 ಮಿಲಿಯ ಗ್ರಾಹಕರೂ ನಮಗಿದ್ದು, ವಿಶ್ವದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ ಎಂದು ಹೆಮ್ಮೆಯಿಂದ ನುಡಿದರು.

ಕೆಲವೊಮ್ಮೆ ನೀವು ಒಮ್ಮಿಂದೊಮ್ಮೆಗೆ ಯಶಸ್ಸನ್ನು ಪಡೆಯದಿರಬಹುದು. ವೈಫಲ್ಯತೆ ಹಾಗೂ ಕಲಿಯುವಿಕೆಗೂ ಗೌರವ ಕೊಡಿ. ಕಲಿಯುವಿಕೆಯನ್ನು ನಿಲ್ಲಿಸಬೇಡಿ. ಪ್ರಕೃತಿಯೂ ಸೇರಿದಂತೆ ಪ್ರತಿಯೊಬ್ಬರಿಂದ, ಎಲ್ಲಾ ಕಡೆ ಗಳಿಂದಲೂ ಬದುಕಿನಲ್ಲಿ ಕಲಿಯುವುದನ್ನು ನಿಲ್ಲಿಸಬೇಡಿ ಎಂದು ಕಿವಿಮಾತು ಹೇಳಿದರು.

ಕೊನೆಯ ದಿನವಾದ ಇಂದು ಎಂಐಟಿಯ ದಿಗಂತ್, ಮಣಿಪಾಲ ಬಿಡಿಎಸ್‌ನ ಸೋಹಮ್ ಮಿತ್ರ, ಮಣಿಪಾಲದ ಎಂಕಾನ್ಸ್‌ನ ನೈಮಾ ಲ್ಹೇಮೊ ಬಿಎಸ್ಸಿ ನರ್ಸಿಂಗ್‌ನಲ್ಲಿ, ಮಣಿಪಾಲ ಪಿಎಸ್‌ಪಿಎಚ್‌ನ ರೆಹನಾ ಅಬ್ದುಲ್ ಜಬ್ಬಾರ್ ಎಂಪಿಎಚ್‌ನಲ್ಲಿ ಚಿನ್ನದ ಪದಕಗಳನ್ನು ಪಡೆದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X