Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ಪಿ.ಎ.ರೈಪಿ.ಎ.ರೈ17 Nov 2019 11:44 PM IST
share
ಓ ಮೆಣಸೇ ...

ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಲ್ಲನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ಗೆಲ್ಲುತ್ತೆ - ಸುರೇಶ್ ಅಂಗಡಿ, ಕೇಂದ್ರ ಸಚಿವ
ಸದ್ಯಕ್ಕೆ ಕಲ್ಲುಗಳ ಬದಲು ಅನರ್ಹ ಕತ್ತೆಗಳನ್ನು ನಿಲ್ಲಿಸಲಾಗಿದೆ.

---------------------

ಯಡಿಯೂರಪ್ಪ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ಮತ್ತೆ ಬಿಜೆಪಿಗೆ ಹೋಗೊಲ್ಲ - ರಾಜುಕಾಗೆ, ಮಾಜಿ ಸಚಿವ
   ಚುನಾವಣೆಗೆ ನಿಲ್ಲಲು ಟಿಕೆಟ್ ಕೊಡದವರು ಮುಖ್ಯಮಂತ್ರಿ ಸ್ಥಾನ ಕೊಡುತ್ತಾರೆಯೇ?
---------------------
 ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆಗೆ 56 ಸ್ಥಾನ ದೊರೆಯಲು ಪ್ರಧಾನಿ ಮೋದಿಯೂ ಕಾರಣ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ

   ಬಹುಶಃ ಪ್ರಧಾನಿ ಮೋದಿಯಲ್ಲದೇ ಇದ್ದರೆ ಅದಕ್ಕಿಂತಜಾಸ್ತಿ ಸಿಗುತ್ತಿತ್ತು ಎಂಬ ಅಭಿಪ್ರಾಯ ಇರಬೇಕು.

---------------------

ಮುಖ್ಯಮಂತ್ರಿ ಯಡಿಯೂರಪ್ಪ ಹಸುವಲ್ಲ, ಹೋರಿ - ಆಯನೂರು ಮಂಜುನಾಥ್, ವಿ.ಪ. ಸದಸ್ಯ
  ರೇಣುಕಾಚಾರ್ಯರಿಗೆ ಗುದ್ದಿದ ಹೋರಿಯಲ್ಲ ತಾನೇ?

---------------------
ನಮ್ಮದು ಸಿದ್ಧ್ದಾಂತ ಇಟ್ಟುಕೊಂಡಿರುವ ಪಕ್ಷ - ಸಿ.ಟಿ.ರವಿ, ಸಚಿವ
ಸಿದ್ಧಾಂತ ಇಟ್ಟುಕೊಂಡ ಕಾರಣಕ್ಕೆ, ಫುಟ್‌ಪಾತ್‌ನಲ್ಲಿರುವ ಅಮಾಯಕರ ಮೇಲೆ ಕಾರು ಹರಿಸಬಹುದೇ?

---------------------

ಹಣೆಗೆ ಹಚ್ಚುವ ಕುಂಕುಮ ರಾಸಾಯನಿಕ ಮಿಶ್ರಣವಾಗಿದ್ದರೆ ಅಂಥದ್ದನ್ನು ನಿಷೇಧ ಮಾಡಲಾಗುವುದು - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಕುಡಿಯುವ ನೀರಿನಲ್ಲಿ ರಾಸಾಯನಿಕ ಮಿಶ್ರಣವಾಗಿರುವುದರ ಬಗ್ಗೆ ಯಾವಾಗ ಮಾತನಾಡುತ್ತೀರಿ?

---------------------
 

ನನ್ನ ಶಕ್ತಿ ಕುಂದಿಲ್ಲ, ಆದರೆ ನಮ್ಮ ಪಕ್ಷದ ಶಕ್ತಿ ಕುಂದಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಿಜೆಪಿಯಿಂದ ಶಕ್ತಿ ಮದ್ದು ಕುಡಿಯಿರಿ, ಶಕ್ತಿ ಹೆಚ್ಚಿಸಿಕೊಳ್ಳಿ.

---------------------
 ನನ್ನನ್ನು ಕಂಡಾಗಲೆಲ್ಲಾ ‘ಜನುಮ ನೀಡುತ್ತಾಳೆ ನಮ್ಮ ತಾಯಿ’ ಎಂದು ದಿ.ಅನಂತ ಕುಮಾರ್ ಹಾಡುತ್ತಿದ್ದರು - ಜಗ್ಗೇಶ್, ನಟ

ಬಹುಶಃ ನೀವು ಕಳ್ಳೆಕಾಯಿ ಮಾರ್ತಾ ಇದ್ದ ಕಾಲದಲ್ಲಿರಬೇಕು.

---------------------
  
ಶಿವಸೇನೆಯನ್ನು ಹುಟ್ಟು ಹಾಕಿದ್ದ ಬಾಳಾ ಠಾಕ್ರೆಯ ಆಶಯವೇ ಈಗ ಮಣ್ಣು ಪಾಲಾಗುತ್ತಿದೆ - ಶೋಭಾ ಕರಂದ್ಲಾಜೆ, ಸಂಸದೆ
   ಬಿಜೆಪಿಯ ನಾಯಕರನ್ನು ಮುಖ್ಯಮಂತ್ರಿ ಮಾಡುವುದು ಅವರ ಆಶಯವಾಗಿತ್ತೇ?

---------------------
  
ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ - ಡಾ.ಸುಧಾಕರ್, ಅನರ್ಹ ಶಾಸಕ
   ಅನರ್ಹರಲ್ಲದವರಿಗೆ ಸಚಿವ ಸ್ಥಾನ ಇಲ್ಲವಂತೆ.

---------------------
  
ಭಾರತ, ಚೀನಾ ತ್ಯಾಜ್ಯದಿಂದ ಅಮೆರಿಕಕ್ಕೆ ತೊಂದರೆಯಾಗುತ್ತಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ   
ನಿಮ್ಮ ಬಾಯಿಯಿಂದ ಹೊರಡುತ್ತಿರುವ ತ್ಯಾಜ್ಯ ವಿಶ್ವಕ್ಕೇ ತೊಂದರೆ ನೀಡುತ್ತಿದೆ.

---------------------
  
ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಯಡಿಯೂರಪ್ಪರ ಸರಕಾರ ಇನ್ನಷ್ಟು ಭದ್ರವಾಗಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ   
ತಮ್ಮ ಮಗನನ್ನು ಅನರ್ಹಗೊಳಿಸಲು ತುದಿಗಾಲಲ್ಲಿ ನಿಂತಂತಿದೆ.

---------------------
  
ಕನ್ನಡ ಭಾಷಾ ಬೋಧನೆಗೆ ನಿರ್ಲಕ್ಷ ತೋರುತ್ತಿರುವ ಶಾಲೆಗಳ ಮಾನ್ಯತೆ ರದ್ದು ಗೊಳಿಸಲಾಗುವುದು - ಸುರೇಶ್‌ಕುಮಾರ್, ಸಚಿವ
   ಹಿಂದಿ ಭಾಷೆ ಬೋಧನೆಗೆ ಆಸಕ್ತಿ ತೋರುತ್ತಿರುವವರ ವಿರುದ್ಧ ಯಾವಾಗ ಕ್ರಮ?

---------------------

  
ಅನರ್ಹ ಶಾಸಕರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ - ಆರ್.ಅಶೋಕ್, ಸಚಿವ
  ಮೋಸ ಮಾಡಿದವರಿಗೆ ಮೋಸವಾಗಬಾರದು ಎಂಬುದು ನಿಮ್ಮ ಸಿದ್ಧಾಂತವಿರಬೇಕು.

---------------------
  
ನನಗೆ ಎಲ್ಲ ಪಕ್ಷಗಳ ಹಣೆಬರಹ ಗೊತ್ತಿದೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ  
ತಮ್ಮ ಪಕ್ಷದ ಹಣೆಬರಹವನ್ನೊಮ್ಮೆ ಹೇಳಿ ಬಿಡಿ.

---------------------
  
ನಾನು ಶೀಘ್ರದಲ್ಲೇ ಮಂತ್ರಿಯಾಗಲಿದ್ದೇನೆ - ಬಸನಗೌಡ ಪಾಟೀಲ ಯತ್ನಾಳ್, ಶಾಸಕ   
ಅದಕ್ಕೂ ಮೊದಲು ಅನರ್ಹರೆಂದು ಗುರುತಿಸಿಕೊಳ್ಳಬೇಕಾಗುತ್ತದೆ.

---------------------
  
ಕಾಶ್ಮೀರದ ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು - ಪರ್ವೇಝ್ ಮುಶರ್ರಫ್, ಪಾಕ್ ಮಾಜಿ ಅಧ್ಯಕ್ಷ  
ಆ ಹೀರೋಗಳಿಂದಲೇ ಪಾಕಿಸ್ತಾನಕ್ಕೆ ಈ ಗತಿ ಬಂದಿರುವುದು.

---------------------
 
ಅನರ್ಹ ಶಾಸಕರು ಬಿಜೆಪಿಗೆ ಸೇರುವ ಇಂದು ಐತಿಹಾಸಿಕ ದಿನ - ಯಡಿಯೂರಪ್ಪ, ಮುಖ್ಯಮಂತ್ರಿ   
ಅನರ್ಹರೇ ಬಿಜೆಪಿಯ ಹೆಮ್ಮೆ ಎಂದು ಘೋಷಿಸಿ.

---------------------
  
ರಾಜ್ಯದ ಅಭಿವೃದ್ಧಿಗೆ ಯಡಿಯೂರಪ್ಪ ಅವರೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡಲಾಗುವುದು - ಎಚ್.ವಿಶ್ವನಾಥ್, ಅನರ್ಹ ಶಾಸಕ
ದೇವೇಗೌಡರ ಜೊತೆಗೆ ಕೆಲಸ ಮಾಡಿದಂತೆ?

---------------------
  

ಭಾರತದಲ್ಲಿ ಈಗ ಹಿಂದೆಂದೂ ಕಾಣದ ರಾಜಕೀಯ ಸ್ಥಿರತೆ ಇದೆ - ನರೇಂದ್ರ ಮೋದಿ, ಪ್ರಧಾನಿ
   ಆರ್ಥಿಕ ಸ್ಥಿರತೆಯ ಬಗ್ಗೆ ಏನಂತೀರಿ?

---------------------
  
ಜನ ಮದುವೆಯಾಗುತ್ತಿದ್ದಾರೆ. ವಿಮಾನ ನಿಲ್ದಾಣ, ರೈಲುಗಳು ತುಂಬಿ ತುಳುಕುತ್ತಿವೆ. ಇವೆಲ್ಲವೂ ದೇಶದ ಆರ್ಥಿಕತೆ ಚೆನ್ನಾಗಿದೆ ಅನ್ನುವುದರ ಸೂಚಕ - ಸುರೇಶ್ ಅಂಗಡಿ, ಕೆಂದ್ರ ಸಚಿವ   
ಹೆಚ್ಚು ಹೆಚ್ಚು ಮದುವೆಯಾದಷ್ಟೂ ದೇಶದ ಆರ್ಥಿಕತೆ ಹೆಚ್ಚುತ್ತದೆ ಎನ್ನುವ ಅಭಿಪ್ರಾಯ ಇರಬೇಕು.

---------------------
  
ನೀವು 5 ರಿಂದ 7 ಕಿಲೋ ತೂಕ ಕಡಿಮೆ ಮಾಡಿಕೊಳ್ಳ ಬೇಕೇ ಉಚಿತ ಯೋಗ ಶಿಬಿರದಲ್ಲಿ ಭಾಗವಹಿಸಿ - ಬಾಬಾ ರಾಮ್‌ದೇವ್, ಯೋಗ ಗುರು  
ವರ್ಚಸ್ಸಿನ ತೂಕವಂತೂ ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ.

---------------------
ದೇಶದ ಇತಿಹಾಸಕಾರರು ಸಾವರ್ಕರ್ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಸಿಲ್ಲ - ವೆಂಕಯ್ಯ ನಾಯ್ಡು, ಉಪ ರಾಷ್ಟ್ರಪತಿ
  ಯಾವುದಾದರೂ ಭೂಪ್ರದೇಶವನ್ನು ಅಗೆದು ಅವರ ಇತಿಹಾಸವನ್ನು ತಕ್ಷಣ ಹುಡುಕಬೇಕಾಗಿದೆ

share
ಪಿ.ಎ.ರೈ
ಪಿ.ಎ.ರೈ
Next Story
X