ಗಾಂಜಾ ಸೇವನೆ: ಮೂವರು ವಶಕ್ಕೆ
ಉಡುಪಿ, ನ.19: ಗಾಂಜಾ ಸೇವನೆಗೆ ಸಂಬಂಧಿಸಿ ಮೂವರನ್ನು ಉಡುಪಿ ಸೆನ್ ಪೊಲೀಸರು ನ.16ರಂದು ಮಣಿಪಾಲದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ಈಶ್ವರನಗರದ ರೀಗಲ್ ಹಿಲ್ಸ್ ಬಳಿ ಇಶಾನ್ ಆರ್ಯನ್ ಹಾಗೂ ಅಚಿಂತ್ಯ ಕಾಟಿಯಾರ್ ಮತ್ತು ವಿದ್ಯಾರತ್ನ ನಗರದ ಮಾಂಡವಿ ಪ್ಯಾರಡೈಸ್ ಬಳಿ ತುನೀರ್ ಭಟ್ಟಾಚಾರ್ಯ ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದಿಂದ ಪರೀಕ್ಷೆಗೆ ಒಳಪಡಿಸಿದ್ದು, ಇದರ ವರದಿಯಂತೆ ಇವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಎಂದು ಸೆನ್ ಪೊಲೀಸರು ತಿಳಿಸಿದ್ದಾರೆ.
Next Story