Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಗಾಗ್ಗೆ ತಲೆ ಸುತ್ತುತ್ತದೆಯೇ, ಬವಳಿ...

ಆಗಾಗ್ಗೆ ತಲೆ ಸುತ್ತುತ್ತದೆಯೇ, ಬವಳಿ ಬರುತ್ತದೆಯೇ? ಸಿಂಕೋಪ್ ಮುಖ್ಯ ಕಾರಣವಾಗಿರಬಹುದು

ವಾರ್ತಾಭಾರತಿವಾರ್ತಾಭಾರತಿ22 Nov 2019 8:57 PM IST
share

ತಲೆ ಸುತ್ತಿದಂತಾಗಿ,ಬವಳಿ ಬಂದು ಬಿದ್ದ ವ್ಯಕ್ತಿ ಪ್ರಜ್ಞೆಗೆ ಮರಳಿದ ಬಳಿಕ ತನ್ನ ಮಾಮೂಲು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾನೆ,ಹೀಗಾಗಿ ನಾವು ಇಂತಹ ಸಂದರ್ಭಗಳನ್ನು ತೀರ ಲಘುವಾಗಿ ಪರಿಗಣಿಸುವುದೇ ಹೆಚ್ಚು. ಆದರೆ ಇಂತಹ ಸಂದರ್ಭಗಳು ನಿಯಮಿತವಾಗಿ ಮರುಕಳಿಸುತ್ತಿದ್ದರೆ ಅದು ಕಳವಳಕ್ಕೆ ಪ್ರಮುಖ ಕಾರಣವಾಗುತ್ತದೆ. ಸಿಂಕೋಪ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಅಷ್ಟೇನೂ ಪರಿಚಿತವಲ್ಲದ ಇದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಬಹುದು.

ಸಿಂಕೋಪ್ ಸಂದರ್ಭದಲ್ಲಿ ರೋಗಿಯು ದಿಢೀರನೆ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ. ಹೆಚ್ಚಿನ ಪ್ರಕರಣಗಳಲ್ಲಿ ರೋಗಿಗೆ ತಲೆ ಹಗುರವಾಗಿರುವಂತೆ ಅಥವಾ ಕಣ್ಣು ಕತ್ತಲಾದಂತೆ ಆಗಿ ಏಕಾಏಕಿ ಬವಳಿ ಬಂದು ಬೀಳಬಹುದು. ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯು ಚೇತರಿಸಿಕೊಂಡು ಮಾಮೂಲು ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ರೋಗಿಯು ಅತಿಯಾಗಿ ಬೆವರಬಹುದು,ಆದರೆ ಪಾರ್ಶ್ವವಾಯು ಅಥವಾ ಇತರ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವಿರುವುದಿಲ್ಲ.

► ಕಡಿಮೆ ರಕ್ತದೊತ್ತಡ ಪ್ರಮುಖ ಕಾರಣ

ನಮ್ಮ ಶರೀರದ ಪ್ರಮುಖ ಅಂಗವಾಗಿರುವ ಮಿದುಳಿಗೆ ಕೇವಲ ಒಂದು ಸೆಕೆಂಡ್‌ನಷ್ಟು ಕಾಲ ರಕ್ತ ಪೂರೈಕೆಯಾಗದಿದ್ದರೂ ಅದು ಕೆಲಸವನ್ನು ಮಾಡುವುದಿಲ್ಲ. ಶರೀರದಲ್ಲಿ ರಕ್ತದೊತ್ತಡ ಕಡಿಮೆಯಾದಾಗ ಮಿದುಳಿಗೆ ಕಡಿಮೆ ರಕ್ತ ಪೂರೈಕೆಯಾಗುತ್ತದೆ. ಹೀಗೆ ರಕ್ತಪೂರೈಕೆಯಲ್ಲಿ ವ್ಯತ್ಯಯವುಂಟಾದಾಗ ವ್ಯಕ್ತಿಯು ದಿಢೀರF ಬವಳಿಗೆ ಗುರಿಯಾಗುತ್ತಾನೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯು ಪ್ರಜ್ಞೆ ಕಳೆದುಕೊಂಡು ನೆಲಕ್ಕೆ ಬೀಳುತ್ತಾನೆ ಮತ್ತು ಇದು ಮಿದುಳಿಗೆ ರಕ್ತ ಪೂರೈಕೆಯನ್ನು ಸಾಧ್ಯವಾಗಿಸುತ್ತದೆ. ಇದೇ ಕಾರಣದಿಂದ ಸಿಂಕೋಪ್‌ಗೆ ಗುರಿಯಾದ ವ್ಯಕ್ತಿಯು ಚೇತರಿಸಿಕೊಳ್ಳುತ್ತಾನೆ.

ಆದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದರೆ ರೋಗಿಯು ವೈದ್ಯರನ್ನು ಭೇಟಿಯಾಗಿ ಸಮಸ್ಯೆಯ ಮೂಲಕಾರಣವನ್ನು ತಿಳಿದುಕೊಳ್ಳಬೇಕಾಗುತ್ತದೆ. ಇಂತಹ ಘಟನೆಗಳನ್ನು ಕಡೆಗಣಿಸುತ್ತಿದ್ದರೆ ಹೆಚ್ಚಿನ ಪ್ರಕರಣಗಳಲ್ಲಿ ಮಾರಣಾಂತಿಕವಾಗಬಹುದು ಮತ್ತು ಚೇತರಿಸಿಕೊಳ್ಳಲು ವ್ಯಕ್ತಿಗೆ ಸಾಧ್ಯವಾಗದಿರಬಹುದು.

► ಸಿಂಕೋಪ್ ಮತ್ತು ಹೃದಯಾಘಾತದ ನಡುವೆ ತಪ್ಪುಗ್ರಹಿಕೆ

ಇದೊಂದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ. ಹೆಚ್ಚಿನ ಜನರು ಸಿಂಕೋಪ್‌ಗೂ ಪಾರ್ಶ್ವವಾಯುವಿಗೂ ಸಂಬಂಧ ಕಲ್ಪಿಸುತ್ತಾರೆ. ಆದರೆ ಸಿಂಕೋಪ್ ಅತ್ಯಂತ ಸಾಮಾನ್ಯ ಲಕ್ಷಣವಾಗಿದ್ದು, ಶೇ.40ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಅನುಭವಿಸಿರುತ್ತಾರೆ. 13ರಿಂದ 22ವರ್ಷ ವಯೋಗುಂಪಿನವರಲ್ಲಿ ಮತ್ತು 55ವರ್ಷ ಮೀರಿದವರಲ್ಲಿ ಸಿಂಕೋಪ್ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಎರಡೂ ವಯೋಗುಂಪುಗಳಲ್ಲಿ ಸಿಂಕೋಪ್ ಉಂಟಾಗಲು ಕಾರಣಗಳು ಭಿನ್ನವಾಗಿವೆ.

► ಸಿಂಕೋಪ್ ತಲೆ ಸುತ್ತುವಿಕೆಗಿಂತ ಭಿನ್ನ

ವ್ಯಕ್ತಿಗೆ ತಲೆ ಸುತ್ತತೊಡಗಿದಾಗ ತನ್ನ ಸುತ್ತಲಿರುವ ಜಗತ್ತು ಅಥವಾ ಸ್ವಯಂ ತಾನೇ ಸುತ್ತುತ್ತಿರುವ ಅನುಭವವಾಗುತ್ತದೆ. ಆದರೆ ಸಿಂಕೋಪ್‌ನಲ್ಲಿ ವ್ಯಕ್ತಿಯು ಕಣ್ಣಕತ್ತಲು ಅನುಭವಿಸುತ್ತಾನೆ ಮತ್ತ ದಿಢೀರ್ ಆಗಿ ಬವಳಿ ಬಂದು ಬೀಳುತ್ತಾನೆ. ಇವೆರಡೂ ಲಕ್ಷಣಗಳು ಪರಸ್ಪರ ಭಿನ್ನವಾಗಿದ್ದು ಇವುಗಳ ನಡುವೆ ಸಂಬಂಧವನ್ನು ಗೊತ್ತು ಮಾಡಿಕೊಳ್ಳಲು ಪ್ರಯತ್ನಿಸುವ ಬದಲು ಸಮಸ್ಯೆಗಳ ನಿವಾರಣೆ ಮುಖ್ಯವಾಗುತ್ತದೆ.

► ಯಾವ ವೈದ್ಯರನ್ನು ಸಂಪರ್ಕಿಸಬೇಕು

ಸಿಂಕೋಪ್‌ನಿಂದ ಬಳಲುತ್ತಿರುವ ವ್ಯಕ್ತಿಯು ಕಾರ್ಡಿಯಾಕ್‌ಎಲೆಕ್ಟ್ರೋಫಿಜಿಯಾಲಜಿಸ್ಟ್‌ರನ್ನು ಭೇಟಿಯಾಗಬೇಕು. ಆದರೆ ಭಾರತದಲ್ಲಿ ಇಂತಹ ವೈದ್ಯರ ಲಭ್ಯತೆ ಅಪರೂಪವಾಗಿದೆ. ಹೀಗಾಗಿ ಸಿಂಕೋಪ್ ರೋಗಿಗಳು ಕಾರ್ಡಿಯಾಲಜಿಸ್ಟ್‌ರನ್ನು ಭೇಟಿಯಾಗಬಹುದು.

► ಸಿಂಕೋಪ್‌ನ್ನು ಮೊದಲೇ ಗುರುತಿಸುವ ಎಚ್ಚರಿಕೆಯ ಸಂಕೇತಗಳು

ವಾಂತಿ ಮಾಡಬೇಕೆಂಬ ಭಾವನೆ,ಡವಗಡುವ ಹೃದಯ,ತಲೆ ಹಗುರವಾಗುವಿಕೆ ಮತ್ತು ಅತಿಯಾದ ಬೆವರುವಿಕೆ ಇವು ಸಿಂಕೋಪ್‌ನ ಎಚ್ಚರಿಕೆ ಗಂಟೆಯಾಗಿವೆ. ಇಂತಹ ಯಾವುದೇ ಸಂಕೇತ ಅನುಭವಕ್ಕೆ ಬಂದರೆ ವ್ಯಕ್ತಿಯು ತಕ್ಷಣ ನೆಲದಲ್ಲಿ ಮಲಗಿಕೊಳ್ಳಬೇಕು.

► ಸಿಂಕೋಪ್‌ನ್ನು ಹೇಗೆ ತಡೆಗಟ್ಟಬಹುದು?

ತಲೆ ಹಗುರವಾಗುತ್ತಿದೆ ಎಂಬ ಅನುಭವ ಉಂಟಾದಾಗ ರೋಗಿಯು ತಕ್ಷಣ ನೆಲದಲ್ಲಿ ಮಲಗಿಕೊಳ್ಳಬೇಕು ಮತ್ತು ಇದರಿಂದ ಮಿದುಳಿಗೆ ರಕ್ತಪೂರೈಕೆಯು ಉತ್ತಮಗೊಳ್ಳುತ್ತದೆ. ರಕ್ತನಾಳಗಳು ಸಂಕುಚಿತಗೊಳ್ಳುವಂತಾಗಲು ಎರಡೂ ಕೈಗಳನ್ನು ಬಿಗಿಯಾಗಿ ಮುಷ್ಟಿ ಕಟ್ಟಬೇಕು.

ಪದೇ ಪದೇ ಇಂತಹ ಅನುಭವವಾಗುತ್ತಿದ್ದರೆ ತಜ್ಞವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X