ಅಜಿತ್ ಪವಾರ್ ಜೈಲಿಗೆ ಹೋಗುವುದರಿಂದ ಪಾರಾಗಲು ಬಿಜೆಪಿಗೆ ಬೆಂಬಲ: ಸಂಜಯ್ ರಾವತ್
ಮುಂಬೈ, ನ.23: ಎನ್ಸಿಪಿ ನಾಯಕ ಅಜಿತ್ ಪವಾರ್ ಮಹಾರಾಷ್ಟ್ರದ ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ. ಜೈಲಿಗೆ ಹೋಗುವುದರಿಂದ ಪಾರಾಗಲು ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಯ ತನಕ ಅಜಿತ್ ಪವಾರ್ ನಮ್ಮ ಜೊತೆಯೇ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಅವರ ಹಾವಭಾವ ಸರಿಯಿರಲಿಲ್ಲ. ನಿನ್ನೆ ಮಾಯವಾಗಿದ್ದ ಅವರು ಇಂದು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಬಿಜೆಪಿ ತನ್ನ ಲಾಭಕ್ಕಾಗಿ ಅಧಿಕಾರ ಹಾಗೂ ಧನಬಲವನ್ನು ಉಪಯೋಗಿಸಿದೆ. ಬಿಜೆಪಿ ರಾಜ್ಯಭವನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ರಾವತ್ ಹೇಳಿದ್ದಾರೆ.
Next Story