ಪುತ್ತೂರು: ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್ ಪುತ್ತೂರು ಸಮಿತಿಯ ಸಭೆಯು ಇತ್ತೀಚಿಗೆ ಪುತ್ತೂರಿನ ಆಶ್ಮಿ ಕಂಪರ್ಟ್ ಸಭಾಂಗಣದಲ್ಲಿ ನಡೆಯಿತು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಿತಿಯ ರಾಜ್ಯ ಸದಸ್ಯರಾದ ಇಬ್ರಾಹಿಂ ಗೋಳಿಕಟ್ಟೆ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ಸಂಘಟನೆಯ ರೂಪು ರೇಷೆಗಳ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದರು.
ರಾಜ್ಯಾಧ್ಯಕ್ಷ ಮುಹಮ್ಮದ್ ಸಿರಾಜುದ್ದೀನ್ ರವರು ನಾಯಕತ್ವ ಹಾಗೂ ನಾಯಕನ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು. ಸಿರಾಜುದ್ದೀನ್, ಇಮ್ತಿಯಾಝ್, ಶಾಕಿರ್ ಅಳಕೆಮಜಲು ಹಾಗೂ ನಝೀರ್ ಉಳ್ಳಾಲರವರ ನೇತೃತ್ವದಲ್ಲಿ ಪುತ್ತೂರು ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಅಧ್ಯಕ್ಷರಾಗಿ ಹಮೀದ್ ಸಾಜ, ಉಪಾಧ್ಯಕ್ಷರಾಗಿ ಶಾಕಿರ್ ಹಾಜಿ ಮಿತ್ತೂರು, ಅಶ್ರಫ್ ಕುಂಬ್ರ, ಇರ್ಷಾದ್ ಕೌಡಿಚ್ಚಾರ್, ಹಾರಿಸ್ ಕಬಕ, ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ಕೊಡಿಪ್ಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಸಮದ್ ಮಾಸ್ಟರ್, ಇಲ್ಯಾಸ್ ನೆಲ್ಯಾಡಿ, ಕೋಶಾಧಿಕಾರಿಯಾಗಿ ರವೂಫ್ ಪರ್ಲಡ್ಕ, ಕ್ರೀಡಾ ಸಂಯೋಜಕರಾಗಿ ಆಸಿಫ್ ತಂಬುತ್ತಡ್ಕ, ಕ್ರೀಡಾ ಉಸ್ತುವಾರಿಗಳಾಗಿ ಕ್ರಿಕೆಟ್- ಖಲಂದರ್ ಬುಳೇರಿಕಟ್ಟೆ, ವಾಲಿಬಾಲ್- ರಫೀಕ್ ಆತೂರು, ಬ್ಯಾಡ್ಮಿಂಟನ್- ಹಮೀದ್ ಎಸ್ಎಂ, ಕಬಡ್ಡಿ ರಝಾಕ್ ಕೊಡಾಜೆ, ಖಾದರ್ ಕಬಕ ಇತರ ಕ್ರೀಡೆ ಅಶ್ರಫ್ ಪಿ.ಟಿ ,ಶರೀಫ್ ಅಂಕತ್ತಡ್ಕರವರನ್ನು ನೇಮಿಸಲಾಯಿತು.
ಪಂದ್ಯಾಕೂಟಗಳ ಕಾರ್ಯದರ್ಶಿಗಳಾಗಿ ಮುಕ್ತಾರ್ ಕುಂಬ್ರ, ನವಾಝ್ ಸಾಲ್ಮರ, ಮಾಧ್ಯಮ ಉಸ್ತುವಾರಿಯಾಗಿ ರಝಾಕ್ ಸಾಲ್ಮರ, ವಲಯ ಉಸ್ತುವಾರಿಗಳಾಗಿ ಯಹ್ಯಾ, ಇರ್ಷಾದ್ ಕೌಡಿಚ್ಚಾರ್, ಆಸಿಫ್ ಕುಂಬ್ರ, ಬಶೀರ್ ಬುಳೇರಿಕಟ್ಟೆ, ಅಶ್ರಫ್ ಮುಕ್ವೆ, ಸಮದ್, ಇಕ್ಬಾಲ್ ಅಂಜು, ಮೋನು ಬಪ್ಪಳಿಗೆ, ನೌಶಾದ್ ಬೊಳ್ವಾರು ರವರನ್ನು ನೇಮಿಸಲಾಯಿತು. ರಾಜ್ಯ ಸಮಿತಿಯ ಸದಸ್ಯರಾದ ಶರೀಫ್ ಸಾಲ್ಮರ, ನಿಝಾರ್ ಮಂಗಳೂರು, ಫಾರೂಕ್ ನಿಶ್ಮಾ ಸಿರಾಜುದ್ದೀನ್ ಮೊಬೈಲ್ ಕೇರ್ ಉಪಸ್ಥಿತರಿದ್ದರು.
ಸಮದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ರಝಾಕ್ ಸಾಲ್ಮರ ವಂದಿಸಿದರು.