Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. 'ಉಪಚುನಾವಣೆಯಲ್ಲಿ ಅನರ್ಹರು ಒಂದು...

'ಉಪಚುನಾವಣೆಯಲ್ಲಿ ಅನರ್ಹರು ಒಂದು ಕ್ಷೇತ್ರದಲ್ಲಿ ಜಯ ಗಳಿಸಿದರೂ ..': ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಹಿರಂಗ ಪತ್ರ

ವಾರ್ತಾಭಾರತಿವಾರ್ತಾಭಾರತಿ24 Nov 2019 1:37 PM IST
share
ಉಪಚುನಾವಣೆಯಲ್ಲಿ ಅನರ್ಹರು ಒಂದು ಕ್ಷೇತ್ರದಲ್ಲಿ ಜಯ ಗಳಿಸಿದರೂ ..: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಹಿರಂಗ ಪತ್ರ

ಉಪಚುನಾವಣೆಯ ಕುರಿತು ಮಾಜಿ ಸ್ಪೀಕರ್‌ ಕೆ.ಆರ್. ರಮೇಶ್ ಕುಮಾರ್ ಒಂದು ಗಂಭೀರವಾದ ಪತ್ರವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ‌ಅಧ್ಯಕ್ಷ ದಿನೇಶ್‌ ಗುಂಡೂರಾವ್‌ರವರಿಗೆ ಬರೆದಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.


ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಮನವಿ

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದು ಗಮನಾರ್ಹ ವಿಷಯ. ಸಹಜವಾಗಿಯೇ ಉಪಚುನಾವಣೆಗಳು ಸಂವಿಧಾನಾತ್ಮಕವಾಗಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತವೆ.

ಆದರೆ ಇಂದಿನ ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಉಪಚುನಾವಣೆಗಳು ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಉಲ್ಲಂಘನೆಯ ಕಾರಣದಿಂದಾಗಿ ಶಾಸನಾತ್ಮಕವಾಗಿ ಶಾಸನ ಸಭೆಯ ಸದಸ್ಯರಾಗಿ ಮುಂದುವರಿಯಲು ಅನರ್ಹಗೊಂಡ ಶಾಸಕ ಸ್ಥಾನಗಳನ್ನು ತುಂಬುವ ಉದ್ದೇಶದಿಂದ ಸಂಭವಿಸಿವೆ. ದೇಶದ ಸರ್ವೋಚ್ಚ ನ್ಯಾಯಾಲಯ ಅನರ್ಹತೆಗೆ ಒಳಪಟ್ಟ ಶಾಸಕರು ಸಲ್ಲಿಸಿದ ಮನವಿಯನ್ನು ಭಾಗಶಃ ಗೌರವಿಸಿದೆ. ಇದರ ಪರಿಣಾಮವಾಗಿ ,ಅನರ್ಹತೆಯನ್ನು ಸ್ಥಿರೀಕರಣಗೊಳಿಸಿ ಉಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅಂಶದ ಬಗ್ಗೆ ನಾನು ವ್ಯಾಖ್ಯಾನಿಸುವುದಿಲ್ಲ. ಆದರೆ, 15ನೇ ವಿಧಾನಸಭೆಗೆ ಆಯ್ಕೆಗೊಂಡ ಹಲವು ಶಾಸಕರು ಸಂವಿಧಾನ ವಿರೋಧಿ ಚಟುವಟಿಕೆಗಳ ಕಾರಣದಿಂದ ಅನರ್ಹಗೊಂಡ, ಅಂತಹ ಅನರ್ಹತೆಯಿಂದ ತೆರವುಗೊಂಡ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಪುನಃ ಅವರು ಸ್ಪರ್ಧಿಸಲು ತಾಂತ್ರಿಕವಾಗಿ ಕಾನೂನಿನಲ್ಲಿ ಅವಕಾಶವಿದ್ದರೂ ನೈತಿಕವಾಗಿ ಇದು ಪ್ರಜಾಪ್ರಭುತ್ವಕ್ಕೆ ಆಗುವ ಘೋರ ಅಪಮಾನ. ದೇಶದ ಸರ್ವೋಚ್ಚ ನ್ಯಾಯಾಲಯವು ಬಹುಶಃ ಅತ್ಯಂತ ಗಂಭೀರವಾಗಿ, ಪ್ರೌಢಿಮೆಯಿಂದ ಈ ವಿಷಯವನ್ನು ಇತ್ಯರ್ಥಗೊಳಿಸಲು ಎರಡು ಭಾಗಗಳಾಗಿ ವಿಂಗಡಿಸಿದೆ:

1- ಅಂತಹ ಅನರ್ಹರಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನತೆ ಸೂಕ್ತವಾದ ಪಾಠ ಕಲಿಸಬೇಕೆಂದು, ಅದರ ಮುಖೇನ ನಮ್ಮ ಮತದಾರರು ಅತ್ಯಂತ ಪ್ರಬುದ್ಧರು ಎಂದು ಜಗತ್ತಿಗೆ ತೋರಿಸಬೇಕಿದೆ.

2- ದೇಶದ ಚುಕ್ಕಾಣಿಯನ್ನು ಹಿಡಿದಿರುವ ಮಹಾನುಭಾವರು ಈ ದೇಶದಲ್ಲಿ ತ್ಯಾಗ ಬಲಿದಾನಗಳ ಹಿನ್ನೆಲೆಯಲ್ಲಿ ಗಳಿಸಿದ ಪ್ರಜಾಸತ್ತೆಯನ್ನು ಬಲಪಡಿಸಲು, ಸದೃಢಗೊಳಿಸಲು, ಈ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ಸಮಗ್ರ ತಿದ್ದುಪಡಿಗೆ ಒಳಪಡಿಸಿ, ನೈಜ ಪ್ರಜಾಪ್ರಭುತ್ವ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ತಮ್ಮ ಬದ್ಧತೆಯನ್ನು ರುಜುವಾತು ಮಾಡಬೇಕಾಗಿದೆ.

ಇದರ ಜೊತೆಜೊತೆಗೆ ತೀವ್ರ ಸ್ವರೂಪದ, ಪರಿಣಾಮಕಾರಿಯಾದ, ಸಾಮಾನ್ಯ ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಚುನಾವಣೆಯ ಸುಧಾರಣೆಗಳನ್ನೂ ತರಬೇಕಾಗಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು, ಉಪಚುನಾವಣೆಗಳನ್ನು ಮೌಲ್ಯಾಧಾರಿತವಾಗಿ ಎದುರಿಸುತ್ತಿರೋ ಅಥವಾ ಕೇವಲ ಕ್ಷುಲ್ಲಕ ರಾಜಕೀಯ ಹೆಚ್ಚುಗಾರಿಕೆಗಾಗಿ ಮಾಡುವ ಮತ್ತೊಂದು ಅಪವಿತ್ರದ ಕದನವೋ ಎಂದು ಜನತೆಗೆ ತಿಳಿಸಬೇಕಾಗಿದೆ.

ಈ ಉಪಚುನಾವಣೆಗಳಲ್ಲಿ ಗೆಲುವು ಸೋಲುಗಳು, ಹೊಂದಾಣಿಕೆ, ಮರು ಹೊಂದಾಣಿಕೆಗಳು ಮುಖ್ಯವಲ್ಲ. ಪ್ರಜಾಸತ್ತೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನು ನಿರ್ಲಜ್ಜರಾಗಿ ಉಲ್ಲಂಘಿಸಿ ತಮ್ಮ ಸ್ವಾರ್ಥ ರಾಜಕಾರಣವನ್ನೇ ತ್ಯಾಗ ಎಂದು ಜನರಲ್ಲಿ ಭ್ರಮೆ ಹುಟ್ಟಿಸುವ ಅಪಾಯವೂ ನಮ್ಮನ್ನು ಕಾಡುತ್ತಿದೆ. ಜನತಾ ಪ್ರಾತಿನಿಧಿ ಕಾಯ್ದೆ ಅನ್ವಯ ಆಯ್ಕೆಗೊಂಡ ಪ್ರತಿನಿಧಿಗಳು ಜನರ ವಿಶ್ವಾಸವನ್ನೇ ಪಡೆಯದೆ, ಅಭಿಪ್ರಾಯವನ್ನು ಸಂಗ್ರಹಿಸದೆ ಕೆಲವು ಕೋಟಿ ರೂಪಾಯಿಗಳನ್ನು ಮತದಾರರ ಕಲ್ಯಾಣಕ್ಕೆಂದು ತರುವುದಾಗಿ ಘೋಷಿಸಿ, ಇದೊಂದು ತ್ಯಾಗದ ನಿರ್ಧಾರ ನಮಗೆ ಅನಿವಾರ್ಯವಾಯಿತು ಎಂದು ಹೇಳಲು ಹೊರಟಿರುವ ಇವರಿಗೆ, ಜನತೆಯಿಂದ ಸೂಕ್ತ ಉತ್ತರ ದೊರಕಿಸುವ ಪ್ರಯತ್ನ ಮಾಡಬೇಕಾಗಿದೆ.

ಈ ಉಪಚುನಾವಣೆಗಳ ಸೋಲು-ಗೆಲುವು ಯಾವುದೇ ಪಕ್ಷದ್ದಾಗಿರುವುದಿಲ್ಲ ಆದರೆ ಇದು ಪ್ರಜಾಸತ್ತೆಯ ಸೋಲು ಅಥವಾ ಗೆಲುವು ಆಗಿರುತ್ತದೆ. ಒಂದು ವೇಳೆ ಈ ಅನರ್ಹರು ಒಂದು ಕ್ಷೇತ್ರದಲ್ಲಿ ಜಯ ಗಳಿಸಿದರೂ ಅದು ತೋಳ್ಬಲಕ್ಕೆ, ಹಣದ ಬಲಕ್ಕೆ ಸಲ್ಲುವ ಜಯವೇ ಹೊರತು ಪ್ರಜಾಸತ್ತೆಗೆ ಸಂದ ಜಯವಲ್ಲ.

ಅಂದಿನ ಸಂವಿಧಾನ ಸಭೆಯ ತೀರ್ಪಿನಂತೆ ಹೊಸದಾಗಿ ಸ್ವಾತಂತ್ರ್ಯ ಪಡೆದುಕೊಂಡ ಭಾರತ ದೇಶವನ್ನು ಸಮಗ್ರ ಗಣರಾಜ್ಯ ರಾಷ್ಟ್ರವನ್ನಾಗಿ ಮಾರ್ಪಡಿಸಿ ಎಲ್ಲಾ ಜಾತಿ, ಮತ, ಧರ್ಮ, ಕುಲ, ಲಿಂಗಬೇಧವಿಲ್ಲದ, ಸಮಾನತೆಯನ್ನು ಗೌರವಿಸುವ, ಕರಡು ಸಂವಿಧಾನವನ್ನು ರೂಪಿಸುವ ಹೊಣೆಗಾರಿಕೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಇನ್ನಿತರ 13 ಜನ ಸದಸ್ಯರಿಗೆ ವಹಿಸಲಾಯಿತು. ಅಂದಿನ ಆ ಕರಡು ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಸೂಚಿಸಲಾಯಿತು. ಅಂದಿನ ಸಂವಿಧಾನ ಸಭೆಯಲ್ಲಿ, ಜಗತ್ತಿನ ಎಲ್ಲ ದೇಶಗಳ ಸಂವಿಧಾನಗಳ ಆಳ ಅಧ್ಯಯನ ಮಾಡಿದ್ದವರೂ, ಕಾನೂನು ಶಾಸ್ತ್ರದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಪಾಂಡಿತ್ಯವನ್ನು ಗಳಿಸಿದ್ದವರೂ, ಅರ್ಥಶಾಸ್ತ್ರದಲ್ಲೂ ಪರಿಣಿತಿಯನ್ನು ಪಡೆದಿದ್ದವರು, ನೋವು, ನರಳುವಿಕೆ, ಹಸಿವು, ಆಕ್ರಂದನಗಳ ಮಧ್ಯೆಯೇ ಭುಗಿಲೆದ್ದಿದ್ದ ಒಂದು ಜ್ವಾಲಾಮುಖಿ ಡಾ. ಬಿಆರ್ ಅಂಬೇಡ್ಕರ್.

ಅಂದಿನ ಭಾರತದ ಜಾತಿ ವ್ಯವಸ್ಥೆಯ ಕ್ರೌರ್ಯದ ಪೂರ್ಣ ಒಳನೋಟ ತಮಗಿದ್ದು, ಮನೋಶಾಸ್ತ್ರದಲ್ಲಿಯೂ ಸಹ ಅಪಾರ ಜ್ಞಾನ ಹೊಂದಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರು ತಮಗೆ ವೈಯುಕ್ತಿಕವಾಗಿ ಇಷ್ಟವಿಲ್ಲದಿದ್ದರೂ ದೂರದೃಷ್ಟಿಯಿಂದ ಸಮಗ್ರತೆಯನ್ನು ಎತ್ತಿಹಿಡಿಯುವ ಕಾರಣದಿಂದ, ಚಕ್ರವರ್ತಿಗಳು ಆಳಿದ ಈ ಭೂಮಿಯಲ್ಲಿ ಕತ್ತಿ, ಕಿರೀಟ, ಸಿಂಹಾಸನಗಳ ಬದಲಿಗೆ ಸಾಮಾನ್ಯ ಪ್ರಜೆಯ ಅಭಿಪ್ರಾಯ ಪ್ರಮುಖ ಆಗಬೇಕು ಎಂದು, ವಯಸ್ಕ ಮತದಾನ ಪದ್ಧತಿಗೆ ಒಬ್ಬ ವ್ಯಕ್ತಿಗೆ ಒಂದೇ ಮತ ಎಂಬ ಸಿದ್ಧಾಂತದ ಮೇಲೆ, ತಮಗಿಲ್ಲವಾದ ಸಮಾನತೆ ಮುಂದಿನ ಪೀಳಿಗೆಗಾದರೂ ಲಭ್ಯವಾಗಲಿ ಎಂದು ತನ್ನ ಸಮಿತಿಯೊಳಗಿದ್ದ ಇತರ ಗೌರವಾನ್ವಿತ ಸದಸ್ಯರ ಅಭಿಪ್ರಾಯವನ್ನು ಪಡೆದು ನಮ್ಮ ಇಂದಿನ ಸಂವಿಧಾನಕ್ಕೆ ಅಂತಿಮ ಸ್ವರೂಪವನ್ನು ನೀಡಿದರು.

ಈ ಹಿನ್ನೆಲೆಯಲ್ಲಿ ನಾವು ಇವತ್ತು ಎದುರಿಸುತ್ತಿರುವ ಉಪಚುನಾವಣೆಗಳು, ಸಂವಿಧಾನದ ಪಾವಿತ್ರ್ಯತೆಗೆ ಒದಗಿರುವ ಸವಾಲು. ಆಯ್ಕೆ ಮಾಡಿ ಕಳಿಸಿದ ಮತದಾರನ ಆತ್ಮಸಾಕ್ಷಿಗೆ ಒಂದು ಸವಾಲು. ತೋಳ್ಬಲ, ಹಣದ ಬಲದಿಂದ ಸಂವಿಧಾನವನ್ನೇ ಬುಡಮೇಲು ಮಾಡಬಲ್ಲೆವು ಎಂದು ಕೊಬ್ಬಿದ ಮದಗಜಗಳಿಗೆ ಅಂಕುಶವನ್ನು ಹಾಕಬೇಕಾಗುವ ಸವಾಲು. ಭಾವನಾತ್ಮಕ ವಿಷಯಗಳಿಂದ ಜನಗಳನ್ನು ಕ್ಷಣ ಮಾತ್ರಕ್ಕೆ ಪ್ರಚೋದಿಸಿ ಜನತೆಯ ಮುಗ್ಧ ಮನಸ್ಸನ್ನು ಮತ್ತೊಂದೆಡೆ ಸೆಳೆದು ವಾಮಮಾರ್ಗದಲ್ಲಿ ರಾಜಕೀಯ ಅಧಿಕಾರವನ್ನು ಪಡೆಯಲು ಹೊಂಚು ಹಾಕುವ ಅವಕಾಶವಾದಿಗಳಿಗೆ ಇದು ಒಂದು ಸವಾಲು.

ಕಾಂಗ್ರೆಸ್ ಪಕ್ಷದ ವತಿಯಿಂದ, ಈ ಉಪಚುನಾವಣೆಗಳ ವೇದಿಕೆಗಳ ಮೇಲೆ ವೈಯುಕ್ತಿಕ ಆರೋಪಗಳು, ಚಾರಿತ್ರ್ಯವಧೆ ಮಾಡುವ ಚೇಷ್ಟೆಗಳು, ಅಸಂಬದ್ಧ ವಿಚಾರಗಳು, ಜಾತಿ ಮತ್ತು ಹಣದ ಪ್ರಾಬಲ್ಯದ ಲೆಕ್ಕಾಚಾರ ಹೀಗೆ ಇವೆಲ್ಲವನ್ನೂ ಬದಿಗಿಟ್ಟು, ಸಂವಿಧಾನಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸಿ ವಿನಯ ವಿಧೇಯತೆಯಿಂದ ಜನರಲ್ಲಿಗೆ ಹೋಗಿ ಇದೊಂದು ಮೌಲ್ಯಾಧಾರಿತ ಹೋರಾಟ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯ.

ಸಾಮಾನ್ಯ ಜನ ಅಸಹ್ಯಪಡುವ, ಪದೇಪದೇ ನೋಡಿ ಬೇಸತ್ತು ಹೋಗಿರುವ ಭ್ರಷ್ಟರನ್ನೇ ಮುಖಂಡರು ಎಂಬ ಭ್ರಮೆಯಿಂದ ಇವರು ವೇದಿಕೆಗಳ ಮೇಲೆ ವಿಜೃಂಭಿಸಿದರೆ ಬಹುಶಃ ದುಷ್ಪರಿಣಾಮಗಳನ್ನು ಎದುರಿಸಬೇಕಾದೀತು. ಸಾಮಾನ್ಯ ಜನರ ಮನೋಭಾವ, ಆಶೋತ್ತರಗಳನ್ನು ಗಮನಿಸಿ ಗೌರವಿಸಿದರೆ ಅದು ಸಹಜವಾಗಿಯೇ ಸಂವಿಧಾನಕ್ಕೆ ತೋರುವ ಗೌರವವಾಗುತ್ತದೆ.

ಕಾರಣಾಂತರಗಳಿಂದ ಒಂದು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವ ಸ್ಥಾನದಲ್ಲಿದ್ದಾಗ ಈ ಇಕ್ಕಟ್ಟನ್ನು ನಾನು ಎದುರಿಸಬೇಕಾಯಿತು. ಯಾವುದೇ ರೀತಿಯ ಮತ್ಸರ, ದ್ವೇಷ, ಅಸೂಯೆ, ಪೂರ್ವಗ್ರಹಪೀಡಿತನಾಗದೆ ನಿಷ್ಕಳಂಕ ಮನಸ್ಸಿನಿಂದ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಈ ಘಟನೆಯ ನಂತರ, ಅಂದಿನಿಂದ ಇಂದಿನವರೆವಿಗೂ ಸಾಕಷ್ಟು ಮನೋವ್ಯಾಕುಲತೆಯನ್ನು ಅನುಭವಿಸಿದ್ದೇನೆ.

ಸದುದ್ದೇಶದಿಂದ ನಾನು ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ ಹಾಗೂ ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಒಟ್ಟಾರೆ ಉದ್ದೇಶ ಡಿಸೆಂಬರ್ 5, 2019ರಂದು ನಡೆಯುವ 15 ಉಪಚುನಾವಣೆಗಳು ಗುಣಾತ್ಮಕವಾಗಿ ಬೇರೆಯ ಸ್ವರೂಪ ಪಡೆಯುವಂತಾಗಲಿ ಹಾಗೂ ಮಾಮೂಲಿ ಚುನಾವಣೆಗಳಂತಾಗದಿರಲಿ ಎಂದು ನನ್ನ ಕಳಕಳಿ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವ ಸಂವಿಧಾನವನ್ನು ಜನರ ಧ್ವನಿಯಾಗಿಸುವ ಮಹತ್ತರ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ.

           ಇಂತಿ
ಕೆ.ಆರ್. ರಮೇಶ್ ಕುಮಾರ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X