Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ಪಿ.ಎ.ರೈಪಿ.ಎ.ರೈ24 Nov 2019 11:59 PM IST
share
ಓ ಮೆಣಸೇ ...

ಬಿಜೆಪಿಯಿಂದ ದೂರವಾಗಿರುವುದರಿಂದ ಶಿವಸೇನೆ ಈಗ ಕೋಮುವಾದಿಯಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.

ಕಾಂಗ್ರೆಸ್‌ಗೆ ಹತ್ತಿರವಾಗಿರುವುದರಿಂದ ಜನರು ಅದನ್ನು ತಿರಸ್ಕರಿಸಲೇ ಬೇಕಾಗುತ್ತದೆ.

---------------------

ಸಣ್ಣ ಪುಟ್ಟ ಭಿನ್ನಾಭಿಪ್ರಾಯ (ಎನ್‌ಡಿಎಯಲ್ಲಿ)ಗಳು ನಮ್ಮನ್ನು ಅತಂತ್ರಗೊಳಿಸಬಾರದು
- ನರೇಂದ್ರ ಮೋದಿ, ಪ್ರಧಾನಿ.

ದೇಶವನ್ನು ಅತಂತ್ರಗೊಳಿಸಿಯಾದರೂ ಎನ್‌ಡಿಎಯನ್ನು ಉಳಿಸುವ ಯೋಚನೆ.

---------------------
ಯೋಗ ಎನ್ನುವುದು ಒಂದು ಪುರುಷಾರ್ಥ ಸಾಧನೆ
- ಬಾಬಾ ರಾಮ್‌ದೇವ್, ಯೋಗ ಗುರು.

ನಿಮ್ಮ ಯೋಗವನ್ನು ನೋಡಿದರೆ ಪುರುಷಸ್ವಾರ್ಥ ಸಾಧನೆಯಿರಬೇಕು. ಅನ್ನಿಸುತ್ತದೆ.

---------------------
ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ನನ್ನ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿಯರೂ ನನಗೆ ಮತ ಹಾಕಿರಲಿಲ್ಲ
- ಆನಂದ ಸಿಂಗ್, ಅನರ್ಹ ಶಾಸಕ.
ಮತ್ತೆ ಇವಿಎಂ ಬಲದಿಂದ ಗೆದ್ದಿರಾ?

---------------------

ಶಿವಸೇನೆ ಸಂಸ್ಥಾಪಕ ಬಾಳಾಠಾಕ್ರೆ ಜನರಿಗೆ ಸ್ವಾಭಿಮಾನದ ವೌಲ್ಯ ಕಲಿಸಿದ್ದರು - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ. 
ಆ ವೌಲ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಅವರ ಮಗ ನಿಮ್ಮಿಂದ ದೂರವಾಗಿದ್ದಾರೆ.

---------------------
ನಾನು ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಆದರೆ ಶ್ರೀಕೃಷ್ಣನಾಗಿ ಚುನಾವಣೆಗೆ ಬಂದಿದ್ದೇನೆ
- ಆರ್.ಶಂಕರ್, ಅನರ್ಹ ಶಾಸಕ.

ಆದರೆ ನಿಮ್ಮ ವೇಷ ನೋಡಿದರೆ ಶಕುನಿಯ ನೆನಪಾಗುತ್ತದೆ. 

---------------------
ಕಾಂಗ್ರೆಸ್-ಜೆಡಿಎಸ್‌ಗೆ ರಾಜ್ಯಭಾರ ಮಾಡಲು ಬರುವುದಿಲ್ಲ
- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.
ರಾಜ್ಯಭಾರವೆಂದರೆ ರಾಜ್ಯವನ್ನು ದೋಚುವುದೇ?
---------------------

 ಜನರ ನೀರಿಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ
- ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ.
  
ವಿಮರ್ಶೆ ಮಾಡುವುದಕ್ಕೆ ಮೊದಲು, ಆತ್ಮ ಎಲ್ಲಿದೆ ಎನ್ನುವುದನ್ನು ಹುಡುಕಿ.

---------------------
ಉಪಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಎಸಗುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ
- ಯಡಿಯೂರಪ್ಪ, ಮುಖ್ಯಮಂತ್ರಿ.
ಬೇರೆ ಪಕ್ಷದ ಶಾಸಕರು ದ್ರೋಹ ಎಸಗಿ ಬಂದರೆ ಸರೀನಾ?

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಬಿಜೆಪಿ ಸೇರಲು ಲೈನ್‌ನಲ್ಲಿ ನಿಂತಿದ್ದಾರೆ
- ಅನಂತಕುಮಾರ್ ಹೆಗಡೆ, ಸಂಸದ.

ಬಿಜೆಪಿ ಬಿಡುವವರ ಸಾಲಲ್ಲಿ ಯಡಿಯೂರಪ್ಪ ನಿಂತಿರುವುದನ್ನು ಒಮ್ಮೆ ಗಮನಿಸಿ.

---------------------
 ಐದು ವರ್ಷಗಳ ಹಿಂದೆ ಕೇಜ್ರಿವಾಲ್ ಮಾತ್ರ ಕೆಮ್ಮುತ್ತಿದ್ದರು, ಇಂದು ಇಡೀ ದಿಲ್ಲಿಗೆ ಅದು ಹರಡಿದೆ
- ರಮೇಶ್ ಬಿಧುರಿ, ಸಂಸದ.
ಇಡೀ ದೇಶ ಭ್ರಷ್ಟಾಚಾರದ ಕ್ಯಾನ್ಸರ್‌ನಿಂದ ಕೆಮ್ಮುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?

---------------------
  ಯಾರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇವೆ
- ಕೆ.ಎಸ್. ಈಶ್ವರಪ್ಪ, ಸಚಿವ.
   ಯಡಿಯೂರಪ್ಪರನ್ನು ಈ ಬಾರಿ ಎಲ್ಲಿ ಇಡಬೇಕೆಂದು ನಿರ್ಧರಿಸಿದ್ದೀರಿ?

---------------------
  ಹುಲಿ ರಾಷ್ಟ್ರ ಪ್ರಾಣಿ ಆಗಿದ್ದಕ್ಕೆ ಭಾರತದಲ್ಲಿ ಭಯೋತ್ಪಾದನೆ ಹೆಚ್ಚಿದೆ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
  ನರಿಗಳನ್ನೇ ರಾಷ್ಟ್ರಪ್ರಾಣಿ ಮಾಡಿದರೆ ಹೇಗೆ?

---------------------
 ಸಾವರ್ಕರ್‌ಗೆ ಭಾರತರತ್ನ ನೀಡಲು ಯಾವುದೇ ಶಿಫಾರಸಿನ ಅಗತ್ಯವಿಲ್ಲ
- ನಿತ್ಯಾನಂದರಾಯ್, ಕೇಂದ್ರ ಸಚಿವ.
ಬ್ರಿಟಿಷರಿಗೆ ಅವರು ಬರೆದ ಕ್ಷಮಾಯಾಚನಾ ಪತ್ರವೇ ಅತಿ ದೊಡ್ಡ ಶಿಫಾರಸು.

---------------------
  ಅಂಬೇಡ್ಕರ್ ಬಗ್ಗೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ನಾನು ತಪ್ಪಿತಸ್ಥನಾದರೆ ಚಾಮರಾಜನಗರ ವೃತ್ತದಲ್ಲಿ ನನ್ನನ್ನು ನೇಣಿಗೆ ಹಾಕಲಿ
- ಸುರೇಶ್‌ಕುಮಾರ್, ಸಚಿವ.
  ಬೇರೆಯವರೇಕೆ ನಿಮಗೆ ನೇಣು ಹಾಕಿ ಜೈಲಿಗೆ ಹೋಗುವುದು, ನೀವೇ ಹಾಕಿಕೊಳ್ಳಬಹುದಲ್ಲ?

---------------------
 ಜವಾಹರಲಾಲ್ ನೆಹರೂ ಹೆಸರು ಕೇಳಿದರೆ ಸಾಕು ಕೆಲವರ ರಕ್ತದೊತ್ತಡ ಹೆಚ್ಚಾಗುತ್ತದೆ
- ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ.
  ನೆಹರೂ ಈ ದೇಶದ ಆತ್ಮಸಾಕ್ಷಿಯಾಗಿರುವುದರಿಂದ ಇರಬೇಕು.

---------------------
 ಹೋರಿ ಜೊತೆ ಎಚ್ಚರದಿಂದಿರು ಎಂದು ಮುಖ್ಯಮಂತ್ರಿ ನನಗೆ ಸೂಚನೆ ನೀಡಿದ್ದಾರೆ
- ರೇಣುಕಾಚಾರ್ಯ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ.  
ಬಹುಶಃ ಲಿಂಬಾವಳಿಯವರ ಕುರಿತಂತೆ ಈ ಎಚ್ಚರಿಕೆ ನೀಡಿರಬೇಕು.

---------------------
 ರಾಜಕೀಯ ಜೀವನದಲ್ಲಿ ನಾನು ಅಧಿಕಾರ ಅನುಭವಿಸಿದ್ದು ಕಡಿಮೆ, ನೋವುಂಡದ್ದೇ ಜಾಸ್ತಿ
- ದೇವೇಗೌಡ, ಮಾಜಿ ಪ್ರಧಾನಿ
 ಬಹುಶಃ ಅಧಿಕಾರ ಕಳೆದುಕೊಂಡಾಗ ಉಂಟಾದ ನೋವಿರಬೇಕು.

--------------------
 ನರೇಂದ್ರ ಮೋದಿ ಎಷ್ಟು ವರ್ಷ ರಾಜಕಾರಣದಲ್ಲಿರುತ್ತಾರೋ ಅಲ್ಲಿ ತನಕ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲ
- ಎಂಟಿಬಿ ನಾಗರಾಜ, ಅನರ್ಹ ಶಾಸಕ.
ಮಾರಿಕೊಳ್ಳಲು ತಮ್ಮಂಥವರು ಸಿದ್ಧರಿರುವವರೆಗೆ ಇನ್ನೇನಾಗುತ್ತದೆ?

---------------------
 ಗಾಂಧಿ ಟೋಪಿ ಇಟ್ಟವರಿಂದಲೇ ದೇಶಕ್ಕೆ ಟೋಪಿ
- ನಳಿನ್ ಕುಮಾರ್ ಕಟೀಲು, ಸಂಸದ
 ಅದಕ್ಕಾಗಿ ಪಂಪ್‌ವೆಲ್ ಬ್ರಿಡ್ಜ್‌ನ್ನು ತಲೆಯ ಮೇಲೆ ಹೊತ್ತುಕೊಂಡು ತಿರುಗುವುದು ಸರಿಯೇ?

---------------------
 ನಾನು ಒಬ್ಬನೇ ಇದ್ದಾಗ ಬೇಕಿದ್ದರೆ ನನಗೆ ಚಪ್ಪಲಿಯಲ್ಲಿ ಹೊಡೆಯಿರಿ
- ನಾರಾಯಣ ಗೌಡ, ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ
 ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಬಹುದೇ?
---------------------
 ಎಲ್ಲರಿಗೂ ನಾನೆಂದ್ರೆ ಭಯ
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಕಾಂಗ್ರೆಸ್‌ನೊಳಗೂ ಆ ಭಯ ಇರುವುದು ವಿಪರ್ಯಾಸ.

---------------------

 ಭವಿಷ್ಯದಲ್ಲಿ ನಾನೂ ಮುಖ್ಯಮಂತ್ರಿಯಾಗುವೆ
- ಶ್ರೀರಾಮುಲು, ಸಚಿವ.
 ಬಳ್ಳಾರಿಯನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕಾಗುತ್ತದೆ.

---------------------
 ಜೆಡಿಎಸ್ ಪಕ್ಷ ಹೊಟೇಲ್‌ನಲ್ಲಿ ಟುಡೇಸ್ ಸ್ಪೆಷಲ್ ಇದ್ದಂತೆ
- ಆರ್. ಅಶೋಕ್, ಸಚಿವ.   
ಬಿಜೆಪಿಯ ತಂಗಳನ್ನವನ್ನು ಬಿಸಿ ಮಾಡಿ ಜೆಡಿಎಸ್ ಜೊತೆಗೆ ಸೇರಿಸಿದರೆ ಟುಡೇಸ್ ಸ್ಪೆಶಲ್

---------------------

share
ಪಿ.ಎ.ರೈ
ಪಿ.ಎ.ರೈ
Next Story
X