ಸಿಎಂ ಕೆಲಸ ಆರಂಭಿಸಿದ ಫಡ್ನವೀಸ್, ಡೆಪ್ಯೂಟಿ ಸಿಎಂ ಸುಳಿವಿಲ್ಲ !
ಮುಂಬೈ, ನ.25: ಶನಿವಾರ ಎರಡನೇ ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾದರು.
ಎರಡನೇ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯಸಚಿವಾಲಯಕ್ಕೆ ಮರಳಿದ ಬಳಿಕ ಅವರು ಮಾಡಿದ ಮೊದಲ ಕೆಲಸವೆಂದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್ಗೆ ಸಹಿ ಹಾಕಿದ್ದು. ಚೆಕ್ನ್ನು ಅವರು ಫಲಾನುಭವಿ ಕುಸುಮ ವೆಂಗುರ್ಲೆಕರ್ಗೆ ವಿತರಿಸಿದರು.
ತನ್ಮಧ್ಯೆ ಫಡ್ನವೀಸ್ ಜೊತೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎನ್ಸಿಪಿಯ ಅಜಿತ್ ಪವಾರ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಇಲ್ಲಿಯ ಚರ್ಚ್ಗೇಟ್ನ ತನ್ನ ನಿವಾಸದಿಂದ ಹೊರಬಿದ್ದಿಲ್ಲ ಎನ್ನಲಾಗಿದೆ. ಸೋಮವಾರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತು ವಿಶ್ವಬ್ಯಾಂಕ್ ಪ್ರತಿನಿಧಿಗಳೊಂದಿಗೆ ಸಭೆಗೂ ಅವರು ಗೈರುಹಾಜರಾಗಿದ್ದರು.
Next Story