ನ.30: ಕೇರಳ ರಾಜ್ಯಪಾಲರ ಪ್ರವಾಸ
ಮಂಗಳೂರು, ನ.25: ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ನ.30ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ರೈಲಿನ ಮೂಲಕ ಅಂದು ಬೆಳಿಗ್ಗೆ 5:15ಕ್ಕೆ ನಗರಕ್ಕೆ ಆಗಮಿಸುವ ಅವರು ಪೂರ್ವಾಹ್ನ 11 ಗಂಟೆಗೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆಯುವ ಮಂಗಳೂರು ಲಿಟರೆರಿ ಫೆಸ್ಟ್ನಲ್ಲಿ ಭಾಗವಹಿಸಿ ಅಪರಾಹ್ನ 2:15ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





