ಮನೆ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು
ಉಡುಪಿ, ನ.25: ಸಂತೆಕಟ್ಟೆ ಕರಂಬಳ್ಳಿಯ ಮನೆಯೊಂದರ ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ತಡ ವಾಗಿ ಬೆಳಕಿಗೆ ಬಂದಿದೆ.
ಸೆ.19ರಂದು ಮನೆಯ ಕಪಾಟಿನಲ್ಲಿರುವ ಅಚ್ಚುತ ಶೆಟ್ಟಿಗಾರ್ ಎಂಬವರ ಪತ್ನಿಯ 1.5ಲಕ್ಷ ರೂ. ಮೌಲ್ಯದ ಚಿನ್ನಭರಣಗಳನ್ನು ಕಳವು ಮಾಡಿ ದ್ದಾರೆನ್ನಲಾಗಿದೆ. ಈ ಬಗ್ಗೆ ಮನೆಯವರ ಬಳಿ ವಿಚಾರಿಸಿದರೂ ಪತ್ತೆಯಾಗಿರ ಲಿಲ್ಲ. ಈ ಹಿನ್ನೆಲೆಯಲ್ಲಿ ಅಚ್ಚುತ ಶೆಟ್ಟಿಗಾರ್ ತಡವಾಗಿ ದೂರು ನೀಡಿದ್ದು, ದೂರಿನಲ್ಲಿ ತನ್ನ ಅಣ್ಣಂದಿರಾದ ಹರೀಶ, ಮಾಧವ ಮತ್ತು ಅವರ ಹೆಂಡತಿಯರಾದ ರಮಾ, ಶಾಂತ ಎಂಬವರ ಮೇಲೆ ಸಂಶಯವಿರುವುದಾಗಿ ತಿಳಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story