ನ. 26: ಯುನಿವೆಫ್ ಕುದ್ರೋಳಿ ಶಾಖೆಯಿಂದ ಮೊಹಲ್ಲಾ ಸಭೆ
ಮಂಗಳೂರು : ಯುನಿವೆಫ್ ಕರ್ನಾಟಕ 2019ರ ನ. 22 ರಿಂದ 2020ರ ಜ.24 ರವರೆಗೆ "ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ನ. 26ರಂದು ರಾತ್ರಿ 8ಕ್ಕೆ ಕುದ್ರೋಳಿ ಶಾಖೆಯ ವತಿಯಿಂದ "ಮೊಹಲ್ಲಾ ಸಭೆ" ಹಮ್ಮಿಕೊಳ್ಳಲಾಗಿದೆ.
"ಪ್ರಚಲಿತ ವಿದ್ಯಮಾನ ಮತ್ತು ಪ್ರವಾದಿಯವರ ಬೋಧನೆ" ಎಂಬ ವಿಷಯದಲ್ಲಿ ಚರ್ಚಾಕೂಟ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಭಾಗವಹಿಸಲಿದ್ದಾರೆ ಎಂದು ಕುದ್ರೋಳಿ ಶಾಖಾಧ್ಯಕ್ಷ ಸೈಫುದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
Next Story