ಮಹಾರಾಷ್ಟ್ರ:ಆರು ಅಪೇಕ್ಷಿತ ನಕ್ಸಲರ ಶರಣಾಗತಿ
ನಾಗ್ಪುರ, ನ.27: ಐವರು ಮಹಿಳೆಯರು ಸೇರಿದಂತೆ ವಾಂಟೆಡ್ ಪಟ್ಟಿಯಲ್ಲಿರುವ ಆರು ನಕ್ಸಲರು ಬುಧವಾರ ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ಪೊಲೀಸರೆದುರು ಶರಣಾಗಿದ್ದಾರೆ.
ಶರಣಾಗತರ ಪೈಕಿ ಓರ್ವನನ್ನು ತನ್ನ ತಲೆಯ ಮೇಲೆ 6.25 ಲ.ರೂ.ಬಹುಮಾನವನ್ನು ಹೊತ್ತಿದ್ದ ಕಸುನ್ಸರ್ ದಳಂ ಕಮಾಂಡರ್ ಸಂದೀಪ ಅಲಿಯಾಸ ಮಹಾರು ವದ್ದೆ (30) ಎಂದು ಗುರುತಿಸಲಾಗಿದ್ದು,ಈತ ಗಡಚಿರೋಲಿ ಜಿಲ್ಲೆಯಲ್ಲಿ ಹಲವಾರು ಕೊಲೆಗಳು,ಎನ್ಕೌಂಟರ್ಗಳು ಮತ್ತು ಸ್ಫೋಟಗಳ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನೊಂದಿಗೆ ಶರಣಾಗತರಾಗಿರುವ ಎಲ್ಲ ಐದೂ ಮಹಿಳಾ ನಕ್ಸಲರೂ ತಮ್ಮ ತಲೆಯ ಮೇಲೆ 5 ಲ.ರೂ.ನಿಂದ 5.5 ಲ.ರೂ.ವರೆಗೆ ಬಹುಮಾನವನ್ನು ಹೊತ್ತಿದ್ದರು.
ಗಡಚಿರೋಳಿಯಲ್ಲಿ ಈ ವರ್ಷ 29 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದರು.
Next Story