Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಶಿಶುಮನದ ಮಹಾಮಾರಿ

ಶಿಶುಮನದ ಮಹಾಮಾರಿ

ಬೆಳೆಯುವ ಪೈರು

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್1 Dec 2019 11:51 AM IST
share
ಶಿಶುಮನದ ಮಹಾಮಾರಿ

ಅಧ್ಯಯನ ಮತ್ತು ಅರಿವು: ಭಾಗ -1 

ಗುರುತಿಸಿ ಗುಣಮುಖರಾಗಿ

ಮಕ್ಕಳ ಅಥವಾ ಹದಿಹರೆಯದವರ ಹಾಗೂ ಮುಂದುವರಿದಂತೆ ವಯಸ್ಕರಾಗಿರುವವರ ವರ್ತನೆಗಳನ್ನು ಗಮನಿಸಿಕೊಂಡು ಒಂದಿಷ್ಟು ಮನಸ್ಥಿತಿಗಳ ಗುರುತು ಹಾಕೋಣವೆಂದುಕೊಂಡರೆ, ಹೆಸರಿಸಲೇ ಸಾವಿರಾರು ಬಗೆಯ ಸಮಸ್ಯೆಗಳಿವೆ. ಆ ಸಾವಿರಾರು ಸಮಸ್ಯೆಗಳು ನಮ್ಮ ನಮ್ಮಲ್ಲಿ ಧಾರಾಳವಾಗಿ ಹಂಚಿಕೊಂಡು ಹರಿದಾಡಿಕೊಂಡಿವೆ. ಸಮಸ್ಯೆ ಇರುವುದು ಸಮಸ್ಯೆಯನ್ನು ಹೊಂದಿರುವುದರಲ್ಲಿ ಅಲ್ಲ. ಆ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದರಲ್ಲಿ. ಮೊದಲನೆಯ ಹಂತವಾದ ಒಪ್ಪಿಕೊಳ್ಳುವುದೇ ಸಾಧ್ಯವಿಲ್ಲದಿರುವುದರಿಂದ ಇನ್ನುಳಿದ ಹಂತಗಳಾದ ಸಮಾಲೋಚನೆ, ಚಿಕಿತ್ಸೆ ಮತ್ತು ಪರಿಹಾರ ಯಾವುದೂ ಸಕಾರಾತ್ಮಕವಾಗಿರುವುದಿಲ್ಲ. ಒಂದು ವಿಷಯ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳೋಣ. ರೋಗಲಕ್ಷಣಗಳನ್ನು ಗುರುತಿಸಿ, ಅದರ ಕಾರಣಗಳನ್ನು ಪತ್ತೆಹಚ್ಚಿ, ಬಿಡದೇ ಸಮಾಲೋಚನೆ ಮತ್ತು ಚಿಕಿತ್ಸೆಗಳನ್ನು ನೀಡಿದ್ದೇ ಆದರೆ ಆರೋಗ್ಯಕರ ವ್ಯಕ್ತಿತ್ವ ಉಳ್ಳ ವ್ಯಕ್ತಿಯನ್ನೂ ಮತ್ತು ಅಂತಹ ವ್ಯಕ್ತಿಗಳ ಸಮೂಹದ ಆರೋಗ್ಯಕರ ಮನಸ್ಥಿತಿಯ ಸಮಾಜವನ್ನು ಒಂದು ಹಂತಕ್ಕೆ ಕಾಣಬಹುದು. ಇದು ಸಾಧ್ಯವಾಗುವುದು ವ್ಯಕ್ತಿಯ ಎರಡೇ ಹಂತಗಳಲ್ಲಿ ಒಂದು ಬಾಲ್ಯ, ಅದು ಮುಂದುವರಿದ ಕಿಶೋರಾವಸ್ಥೆ ಅಥವಾ ಹದಿಹರೆಯದ ಸಮಯ. ಅಷ್ಟರಲ್ಲಿ ಪತ್ತೆಹಚ್ಚುವಿಕೆ, ಸಮಾಲೋಚನೆ ಮತ್ತು ಅಗತ್ಯವಾದ ಚಿಕಿತ್ಸೆ ಆಗದೇ ಇದ್ದರೆ, ಮುಂದೆ ಆಗುವುದೆಲ್ಲಾ ತಪ್ಪುಗಳಲ್ಲ, ಅಪರಾಧಗಳು. ಮಕ್ಕಳು ತಿಳಿದುಕೊಳ್ಳುತ್ತಾರೆ, ದೊಡ್ಡವರಾಗುತ್ತಾ ತಿದ್ದುಕೊಳ್ಳುತ್ತಾರೆ ಎಂದು ಮಾಡಿದ ನಿರ್ಲಕ್ಷಗಳೆಲ್ಲಾ ಮಹಾಪ್ರಮಾದಗಳಾಗಿ ತೋರತೊಡಗುತ್ತವೆ. ಆದ್ದರಿಂದಲೇ ಮೊದಲು ಸಾಮಾಜಿಕವಾಗಿ ಮತ್ತು ವ್ಯಕ್ತಿಗತವಾಗಿ ಮನೋರೋಗಗಳಿಗೆ ಸಂಬಂಧಿಸಿರುವ ಅಪಖ್ಯಾತಿ ಹೋಗಬೇಕು. ಇದನ್ನು ಇಂಗ್ಲಿಷಲ್ಲಿ ಸ್ಟಿಗ್ಮಾ ಎನ್ನುತ್ತೇವೆ. ಮನೋರೋಗಗಳ ಕುರಿತಾದ ಮನೋಭಾವ ಬದಲಾಗದ ಹೊರತು ಆರೋಗ್ಯಕರ ಮನಸ್ಥಿತಿಯ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ಮುಂದುವರಿದ ರಾಷ್ಟ್ರಗಳು ಬರಿಯ ಆರ್ಥಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಮಾತ್ರ ಹೊಂದಿರುವುದಲ್ಲ. ಜನಸಮೂಹದಲ್ಲಿ ವ್ಯಕ್ತಿಗತವಾಗಿ ಸ್ಟಿಗ್ಮಾಗಳನ್ನು ಅಥವಾ ಸಾಮಾಜಿಕ ಅಪಕೀರ್ತಿಗಳೆಂದು ಪೂರ್ವಾಗ್ರಹಗಳನ್ನು ಹೊಂದಿರಬಾರದು. ಆರೋಗ್ಯಕರ ಮನಸ್ಥಿತಿಗಳೇ ಆರೋಗ್ಯಕರ ಕುಟುಂಬವನ್ನು ನಿರ್ಮಿಸುವುದು, ಕುಟುಂಬದ ಆರೋಗ್ಯವೇ ಸಮಾಜದ ಆರೋಗ್ಯಕ್ಕೆ ಮೂಲ.

ಸೀಮಾತ್ಮ ಕ್ಷೋಬೆ

 ಚೌಕಟ್ಟಿನ ಮನಸ್ಸಿನದೊಂದು ಸಮಸ್ಯೆ ಇದೆ. ಅದಕ್ಕೆ ಸೀಮಾತ್ಮ ಕ್ಷೋಬೆ ಎನ್ನಬಹುದು. ಇಂಗ್ಲಿಷಲ್ಲಿ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಅಥವಾ ಸಂಕ್ಷಿಪ್ತವಾಗಿ ಬಿಪಿಡಿ ಎನ್ನುತ್ತೇವೆ. ಇದೊಂದು ಗಂಭೀರ ಸಮಸ್ಯೆ. ಇದು ಸಣ್ಣ ಮಗುವಿದ್ದಾಗಿನಿಂದಲೇ ಪ್ರಾರಂಭವಾಗಿ, ಹದಿಹರೆಯದಲ್ಲಿ ಪರಿಣಾಮಕಾರಿಯಾಗಿ ಮುಂದುವರಿದು, ವಯಸ್ಕರಾದಾಗ ಪೂರ್ಣಫಲಗಳನ್ನು ನೀಡುವಂತಹ ಗಂಭೀರ ಸಮಸ್ಯೆ. ಈ ಸಮಸ್ಯೆ ಇರುವವರು ಕೊಡುವ ಸಮಸ್ಯೆ ಅಷ್ಟಿಷ್ಟಲ್ಲ. ಒಂದೆರಡು ವರ್ಷಗಳ ಕಾಲ ಬಾಧಿಸಿ ಹೋಗಿಬಿಡಬಹುದಾದಂತಹ ಸಮಸ್ಯೆಯಾದರೂ ಆ ಅವಧಿಯಲ್ಲಿ ಉಂಟಾಗುವ ಅವಘಡಗಳು ಅವರನ್ನು ಮತ್ತು ಅವರ ಜೊತೆಗಾರರನ್ನು ಜೀವನಪೂರ್ತಿ ಬಾಧಿಸಬಹುದು. ಆಗ ಉಂಟಾಗುವ ತೊಂದರೆಗಳು ಜೀವನಪರ್ಯಂತ ನೋವನ್ನು ಉಂಟು ಮಾಡಬಹುದು. ಬಿಪಿಡಿ ಅಥವಾ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಲಕ್ಷಣಗಳನ್ನು ಗುರುತಿಸಬೇಕು. ಅವೇನೆಂದರೆ,

1.ತನ್ನ ತೊರೆಯಬಾರದು ಎಂದ ಉನ್ಮತ್ತ ಅಥವಾ ಆವೇಶಭರಿತವಾಗಿರುವಂತಹ ಪ್ರಯತ್ನಗಳನ್ನು ಮಾಡುವುದು. ತಮ್ಮನ್ನು ಬಿಟ್ಟುಬಿಡುತ್ತಾರೆ ಅಥವಾ ನಿರಾಕರಿಸುತ್ತಾರೆ ಎಂದು ಭಾವೋದ್ರೇಕಗೊಳ್ಳುವುದು.

 2.ವ್ಯಕ್ತಿಗಳೊಂದಿಗೆ ಅಸ್ಥಿರವಾದ ಮತ್ತು ತೀವ್ರ ಅಥವಾ ಉಗ್ರವಾದ ಸಂಬಂಧಗಳನ್ನು ಹೊಂದಿರುವುದು.

3.ವ್ಯಕ್ತಿಯ ಅನನ್ಯತೆ ಅಥವಾ ವ್ಯಕ್ತಿತ್ವದ ಗುರುತಿನ ಬಗ್ಗೆ ಗೊಂದಲ.

4.ಆತ್ಮಹಾನಿ ಅಥವಾ ತನಗೆ ತೊಂದರೆ ಮಾಡಿಕೊಳ್ಳುವಂತಹ ಉದ್ವೇಗ.

5.ಆತ್ಮಹತ್ಯೆ ಮಾಡಿಕೊಳ್ಳುವ ಒಲವು.

6.ಪರಿಣಾಮಕಾರಿಯಾದ ಅಥವಾ ಪ್ರಭಾವಶಾಲಿಯಾದ ಅಸ್ಥಿರತೆ.

7.ದೀರ್ಘಕಾಲ ಶೂನ್ಯಭಾವದಲ್ಲಿರುವುದು. ಖಾಲಿತನವನ್ನು ಅನುಭವಿಸುವುದು.

8.ಅಸಹನೀಯ ಮತ್ತು ತೀವ್ರವಾದ ಕೋಪ. 9.ಅನಾದರಗೊಂಡಿರುವ ಭಾವದಲ್ಲಿ ಖಿನ್ನತೆಯಲ್ಲಿರುವುದು.

10.ತಾವೇ ಎಲ್ಲರ ಸಂಪರ್ಕ ಕಳೆದುಕೊಂಡು ಏಕಾಂತದಲ್ಲಿರುವುದೇ ಸರಿ ಎಂದು ಭಾವಿಸುವುದು.

11.ಜನರನ್ನು ನಂಬದೇ ಇರುವುದು. ಇದ್ದಕ್ಕಿದ್ದಂತೆ ಜಿಗುಪ್ಸೆಗೊಳ್ಳುವುದು.

ಸಂಬಂಧಗಳನ್ನು ಉದಾಸೀನ ಮಾಡುವುದು. ಇಂತಹ ಮಾನಸಿಕ ಸಮಸ್ಯೆಗಳು ಬಾಲ್ಯದಿಂದಲೇ, ಅದರಲ್ಲೂ ಕೆಲವೊಮ್ಮೆ ಪಾಲಕ ಪೋಷಕರಿಂದಲೇ ಬಂದಿರುತ್ತವೆ. ಮಾನಸಿಕ ಸಮಸ್ಯೆಗಳನ್ನು ಹೊಂದಿರುವಾಗ ಅವನ್ನು ಬಹಳ ಲಘುವಾದ ಮತ್ತು ಸಹಜವಾದ ಹೆಸರುಗಳಿಂದ ಗುರುತಿಸಿ, ನಿರ್ಲಕ್ಷಿಸುತ್ತಾರೆ. ಖಿನ್ನತೆಯನ್ನು ಬೇಸರ ಎಂದೋ, ಅನವಶ್ಯಕ ಕೋಪವನ್ನು ಮೂಡ್ ಔಟ್ ಎಂದೋ, ಸಂಬಂಧಗಳ ಬಗ್ಗೆ ಜಿಗುಪ್ಸೆ ಅಥವಾ ಅನಾದರ ಉಂಟಾಗುವುದನ್ನು ಅವರ ಯಾವುದೋ ಅಪಥ್ಯವಾದ ನಡವಳಿಕೆಗೆ ಅಥವಾ ಇಷ್ಟವಿಲ್ಲದ ಘಟನೆಗೆ ತಳುಕು ಹಾಕಿ, ಅದಕ್ಕೇ ನನಗೆ ಇಷ್ಟವಿಲ್ಲದ ವ್ಯಕ್ತಿ ಅವನು ಎಂದೋ ಸುಮ್ಮನಾಗಿಬಿಡುವ ಅಪಾಯಗಳು ಉಂಟು. ಹುಟ್ಟಿದಾಗಿನಿಂದ ವಯಸ್ಸಿಗೆ ಬಂದಿರುವವರೆಗೂ ಗಾಢ ಸಂಬಂಧದಲ್ಲಿ ಮನೆಯವ ರೊಂದಿಗೆ ಇರುತ್ತಾರೆ. ಯಾರೋ ಗೆಳತಿ, ಗೆಳೆಯರೊಂದಿಗೆ ಕೂಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಮ್ಮ ಸಮಾಜದಲ್ಲಿ ಅವರ ಹಣೆಯಲ್ಲಿ ಹಾಗೆ ಬರೆದಿತ್ತು, ಅವರಿಗೆ ಅಷ್ಟೇ ಋಣ ಇದ್ದದ್ದು, ಕೆಟ್ಟಗಳಿಗೆ ಹಾಗಾಯ್ತು ಎಂದು ಸಮಯದಲ್ಲಿ ಕೈ ತೊಳೆದುಕೊಂಡುಬಿಡುತ್ತಾರೆ. ಆದರೆ ಅವುಗಳ ಲಕ್ಷಣಗಳನ್ನು ಅವರು ಬಾಲ್ಯದಿಂದಲೇ ತೋರಿಸಿರುತ್ತಾರೆ. ಅವನ್ನು ಗುರುತಿಸುವ ರೀತಿಯೇ ಗೊತ್ತಿಲ್ಲದೇ ಮುಂದಿನ ಅನಾಹುತಗಳಿಗೆ ಪೋಷಕರು ಮತ್ತು ಶಿಕ್ಷಕರು ಕಾರಣರಾಗುತ್ತಾರೆ. ಅವು ಹೇಗೆ ಬರುತ್ತವೆ. ಅವುಗಳನ್ನು ಮಕ್ಕಳಲ್ಲಿಯೇ ಹೇಗೆ ಗುರುತಿಸಿ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ಮುಂದೆ ನೋಡೋಣ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X