ಮಂಗಳೂರು: 'ಎಸ್ ನಟ್ಸ್' ಅಂಗಡಿ ಶುಭಾರಂಭ
![ಮಂಗಳೂರು: ಎಸ್ ನಟ್ಸ್ ಅಂಗಡಿ ಶುಭಾರಂಭ ಮಂಗಳೂರು: ಎಸ್ ನಟ್ಸ್ ಅಂಗಡಿ ಶುಭಾರಂಭ](https://www.varthabharati.in/sites/default/files/images/articles/2019/12/1/221735-1575186710.jpg)
ಮಂಗಳೂರು : ಉಡುಪಿ ಮೂಲದ ಸೋಝಾ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಅಧೀನದ ಸೋಝಾ ಕ್ಯಾಶ್ಯೂಸ್ ಇದರ "ಎಸ್ ನಟ್ಸ್" ಅಂಗಡಿಯು ರವಿವಾರ ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯ ಜಾನ್ವಿ ಪ್ಲಾಝಾದಲ್ಲಿ ಶುಭಾರಂಭಗೊಂಡಿತು.
ನಿಟ್ಟೆ ವಿವಿಯ ಪ್ರೊ. ಚಾನ್ಸಲರ್ ಡಾ. ಎಂ. ಶಾಂತರಾಮ ಶೆಟ್ಟಿ "ಎಸ್ ನಟ್ಸ್" ಅಂಗಡಿಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಭಾರತವು ರಫ್ತು ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಪರಿಶ್ರಮ ಪಟ್ಟರೆ ಈ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದರು.
ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲರಾದ ರೆ. ಫಾ. ರಾಬರ್ಟ್ ಡಿಸೋಜ ಆಶೀರ್ವಚನ ನೀಡಿದರು. ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಗೇರುಬೀಜ ಉದ್ಯಮವು ಸಂಕಷ್ಟದಲ್ಲಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಅನಿವಾರ್ಯ ಸ್ಥಿತಿ ಇದೆ. ಅದರಂತೆ ನಗರದ ಜನತೆಗೆ ಮುಕ್ತವಾಗಿ ಗೋಡಂಬಿ ಸಹಿತ ವಿವಿಧ ಬಗೆಯ ನಟ್ಸ್ ಗಳು ಸಿಗುವಂತಾಗಲು ಇಲ್ಲಿ ಅಂಗಡಿ ತೆರೆದಿರುವುದು ಸಂತಸದ ವಿಚಾರ ಎಂದರು.
ಸಿಂಡಿಕೇಟ್ ಬ್ಯಾಂಕ್ನ ವಲಯ ಕಚೇರಿಯ ಮ್ಯಾನೇಜರ್ ಸುಜಾತಾ ಡಿ., ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ದಿ ಕರ್ನಾಟಕ ಕ್ಯಾಶ್ಯೂ ಮ್ಯಾನುಫೆಕ್ಚರರ್ಸ್ ಅಸೋಸಿಯೇಶನ್ ಅಧ್ಯಕ್ಷ ಪಿ. ಸುಬ್ರಾಯ ಪೈ, ಸಿಎ ಎಸ್.ಎಸ್. ಕಾಮತ್, ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಸಿ. ಅಲೆನ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಡಾ. ಕ್ರಿಸ್ಟೊಫರ್, ಬೆಟಿನಾ, ಕ್ರಿಸ್ಟೀನಿಯಾ, ಕ್ರಿಸ್ಟಿನೋ ಡಿಸೋಜ ಪಾಲ್ಗೊಂಡಿದ್ದರು.