ಕಲಾವಿದರಿಗೆ ಮಾಸಾಶನಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಡಿ.1: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರಿಗೆ ಮಾಸಾಶನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ಹಾಗಾಗಿ ತುಳು ಸಾಹಿತ್ಯ, ಜಾನಪದ, ದೈವಾರಾಧನೆ, ಪಾಡ್ದನ ಇತ್ಯಾದಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 60 ವರ್ಷ ಪ್ರಾಯ ದಾಟಿದ ಕಲಾವಿದರು ಮಾಸಾಶನ ಅರ್ಜಿ ಸಲ್ಲಿಸಬಹುದು.
ಕಲಾವಿದರು ತಮ್ಮ ಸಾಧನೆ, ಭಾವಚಿತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಶಾಲಾ ವರ್ಗಾವಣೆ ಪ್ರತಿ ಇತ್ಯಾದಿ ದಾಖಲೆಯ ವಿವರಗಳನ್ನು ಲಗತ್ತೀಕರಿಸಿ ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳುಭವನ, ಉರ್ವಸ್ಟೋರ್, ಮಂಗಳೂರು-575006 ಈ ವಿಳಾಸಕ್ಕೆ ಬಂದು ಸಲ್ಲಿಸಲು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story