ಆರಾಧನಾ ಸೇವಾ ಸಂಸ್ಥೆಯಿಂದ ಬಾಲಕನ ಚಿಕಿತ್ಸೆಗೆ ನೆರವು
![ಆರಾಧನಾ ಸೇವಾ ಸಂಸ್ಥೆಯಿಂದ ಬಾಲಕನ ಚಿಕಿತ್ಸೆಗೆ ನೆರವು ಆರಾಧನಾ ಸೇವಾ ಸಂಸ್ಥೆಯಿಂದ ಬಾಲಕನ ಚಿಕಿತ್ಸೆಗೆ ನೆರವು](/images/placeholder.jpg)
ಮೂಡುಬಿದಿರೆ: ಆರದಿರಲಿ ಬದುಕು ಆರಾಧನಾ ಸೇವಾ ಸಂಸ್ಥೆಯಿಂದ ನವೆಂಬರ್ ತಿಂಗಳ ಸಹಾಯಹಸ್ತವನ್ನು ವೇಣೂರಿನ ಹುಣಸೆಪಳಿಕೆಯ ಬಾಲಕ ಮಹಮ್ಮದ್ ಶಾಹದ್ನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಸ್ತಾಂತರಿಸಲಾಯಿತು.
ಸಂಸ್ಥೆಯ ಪ್ರಮುಖರಾದ ಪ್ರಸಾದ್ ಕೊಡ್ಯಡ್ಕ ಅವರು ಚೆಕ್ ಅನ್ನು ಬಾಲಕನ ತಾಯಿಗೆ ಹಸ್ತಾಂತರಿಸಿದರು. ಮೂಡುಬಿದಿರೆ ಪ್ರೆಸ್ಕ್ಲಬ್ನ ಅಧ್ಯಕ್ಷ ವೇಣುಗೋಪಾಲ್, ಸಂಸ್ಥೆಯ ಪ್ರಮುಖರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಸದಸ್ಯೆ ಸಂಧ್ಯಾ ಶೆಟ್ಟಿ ಅಲಂಗಾರು ಉಪಸ್ಥಿತರಿದ್ದರು.
Next Story