Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ಪಿ.ಎ.ರೈಪಿ.ಎ.ರೈ1 Dec 2019 11:59 PM IST
share
ಓ ಮೆಣಸೇ ...

*ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ - ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ
  ಕುದುರೆ ಎಂದು ಕೊಟ್ಟದ್ದು ಕತ್ತೆಯನ್ನಂತೆ.

---------------------

ತಂತ್ರಜ್ಞಾನವನ್ನು ವಿವೇಚನಾ ರಹಿತರಾಗಿ ಬಳಸದೆ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಬೇಕು - ರಾಘವೇಶ್ವರಸ್ವಾಮೀಜಿ, ರಾಮಚಂದ್ರಾಪುರ ಮಠ

 ಯಾರ ಅನುಕೂಲಕ್ಕೆ ತಕ್ಕಂತೆ?

--------------------

ಅಸ್ಪಶ್ಯತೆ ವಿರುದ್ಧ ಅಂಬೇಡ್ಕರ್ ಹೋರಾಟ ನಡೆಸುತ್ತಿದ್ದ ಕಾಲದಲ್ಲಿ ಸಂಘ ಪರಿವಾರವೂ ಆ ಕೆಲಸ ಮಾಡುತ್ತಿತ್ತು - ಬಿ.ಎಲ್. ಸಂತೋಷ್, ಬಿಜೆಪಿ ನಾಯಕ  

ಹೌದು, ಅಂಬೇಡ್ಕರ್ ಹೋರಾಟದ ವಿರುದ್ಧ.

---------------------

ಗೂಂಡಾಗಿರಿ ಮಾಡುವವರನ್ನು ಎಲ್ಲಿಡಬೇಕು, ಹೇಗಿಡಬೇಕು ಎಂಬುದು ನನಗೆ ಗೊತ್ತಿದೆ
- ಯಡಿಯೂರಪ್ಪ, ಮುಖ್ಯಮಂತ್ರಿ
ಸದ್ಯಕ್ಕೆ ಅವರನ್ನೆಲ್ಲ ಸಚಿವ ಸಂಪುಟದಲ್ಲೇ ಇಟ್ಟಂತಿದೆ.

---------------------

 ನನ್ನ ರಾಜಕೀಯ ಪ್ರವೇಶ ಆಕಸ್ಮಿಕ - ನರೇಂದ್ರ ಮೋದಿ, ಪ್ರಧಾನಿ
ಆ ಆಕಸ್ಮಿಕಕ್ಕೆ ದೇಶ ಕೊಟ್ಟ ಬೆಲೆ ಮಾತ್ರ ಭಾರೀ ದೊಡ್ಡದು.

---------------------

ನಾನು ಸರಕಾರ ಕಾಪಾಡುತ್ತೇನೆ ಎಂದು ಹೇಳಿದ್ದೆ, ಯಾವ ಸರಕಾರ ಎಂದು ಹೇಳಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಬಹುಶಃ ಅಮೆರಿಕದ ಸರಕಾರ ಇರಬಹುದೋ?

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳಿದರೆ ನನಗೆ ಯಾವ ರಾಜಕೀಯ ಲಾಭವೂ ಇಲ್ಲ - ಎಚ್.ವಿಶ್ವನಾಥ್, ಮಾಜಿ ಶಾಸಕ

ಅಮಿತ್ ಶಾರನ್ನೊಮ್ಮೆ ಹೊಗಳಿ ನೋಡಿ.

---------------------

15 ಅನರ್ಹ ಶಾಸಕರು ಕರ್ನಾಟಕದ ಮುತ್ತುಗಳು
- ನಳಿನ್ ಕುಮಾರ್ ಕಟೀಲು, ಸಂಸದ
ಯಾವಳು ಕೊಟ್ಟ ಮುತ್ತುಗಳು ಎನ್ನುವುದನ್ನೂ ಹೇಳಿ.

---------------------

ಉಪಚುನಾವಣೆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಷ್ಟು ಗಟ್ಟಿಯಾಗಲಿದ್ದಾರೆ -ಬಸನಗೌಡ ಪಾಟೀಲ್, ಶಾಸಕ
ಹೊಡೆತ ತಾಳಿಕೊಳ್ಳಬೇಕಾದರೆ ಗಟ್ಟಿಯಾಗಲೇ ಬೇಕು.

---------------------
 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
  
ಉಪಾಧ್ಯಾಯರೇ ಇಲ್ಲದ ಶಾಲೆಗಿಂತ ವಾಸಿ.

---------------------
  
ಸಂವಿಧಾನ ದಿನದ ಇಂದು(ನ.26) ಡಾ.ಬಿ.ಆರ್. ಅಂಬೇಡ್ಕರ್ ಬದುಕಿದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು - ನರೇಂದ್ರ ಮೋದಿ, ಪ್ರಧಾನಿ
  ಅರ್ಬನ್ ನಕ್ಸಲ್ ಎಂದು ಜೈಲು ಸೇರುತ್ತಿದ್ದರೇನೊ

---------------------

ಉಪಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದರೆ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಚಿನ್ನದ ಉಂಗುರ ತೊಡಿಸಿ ಮೆರವಣಿಗೆ ಮಾಡಿಸುತ್ತೇನೆ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ
ಯಡಿಯೂರಪ್ಪ ಸೋಲುವುದನ್ನು ನೋಡಲು ಅಷ್ಟೊಂದು ಆತುರವೇ?

---------------------

ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ದೇಶ ಮುಂದುವರಿಯಲು ಮುಸ್ಲಿಮರು ಪೂರ್ಣಮನಸ್ಸಿನಿಂದ ಬೆಂಬಲ ನೀಡಬೇಕು - ರೋಷನ್ ಬೇಗ್, ಅನರ್ಹ ಶಾಸಕ   
ಅನರ್ಹ ಶಾಸಕನ ಮಾತುಗಳು ಆಲಿಸುವುದಕ್ಕೆ ಸದಾ ಅನರ್ಹವಾಗಿಯೇ ಇರುತ್ತದೆ.

---------------------
  
ಶ್ರೀಲಂಕಾವು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ - ಗೋತಬಯ, ಶ್ರೀಲಂಕಾ ಅಧ್ಯಕ್ಷ  
ಚೀನಾದ ಹಿತಾಸಕ್ತಿಗೆ ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದನ್ನೂ ಸ್ಪಷ್ಟಪಡಿಸಿ.

---------------------
  
ಮಹಾರಾಷ್ಟ್ರ ಸರಕಾರದ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಅಕ್ರಮ ಸಂಬಂಧದಂತೆ - ಕೆ.ಎಸ್. ಈಶ್ವರಪ್ಪ, ಸಚಿವ
ಅನರ್ಹ ಶಾಸಕರ ಜೊತೆಗಿನ ನಿಮ್ಮ ಸಂಬಂಧ?

---------------------

30 ವರ್ಷಗಳಿಂದ ಗೆಳೆಯರಾಗಿದ್ದವರು ನನ್ನನ್ನು ನಂಬಲಿಲ್ಲ, 30 ವರ್ಷಗಳಿಂದ ನಾವು ಯಾರ ವಿರುದ್ಧ ಹೋರಾಡಿದ್ದೆವೋ ಅವರು ನನ್ನನ್ನು ನಂಬಿದರು
- ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಆ ನಂಬಿಕೆಗೆ ಅವರು ಶೀಘ್ರವೇ ದುಬಾರಿ ಶುಲ್ಕ ನೀಡಬೇಕಾಗುತ್ತದೆ.

---------------------

ರ್ನಾಟಕದ 17 ಶಾಸಕರ ರಾಜೀನಾಮೆಯ ಹಿಂದೆ ನನ್ನ ಪಾತ್ರವೂ ಇದೆ - ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ
  ಅಳಿಯನ ಸಾವಿನ ಹಿಂದಿರುವ ಪಾತ್ರಗಳ ತನಿಖೆ ಅಗತ್ಯವಿಲ್ಲವೆ?

---------------------

ಅನರ್ಹರು ತಾವು ಅರ್ಹ ಎಂದು ಭಾವಿಸುವುದಾದರೆ ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ - ರಮೇಶ್ ಕುಮಾರ್, ಮಾಜಿ ಸ್ಪೀಕರ್ 
ಮಾನಸಿಕ ಆರೋಗ್ಯ ಸರಿ ಇದ್ದರೆ ಅವರು ಅನರ್ಹರಾಗುತ್ತಿರಲಿಲ್ಲ.

---------------------

ಮತ್ತೆ ಬಂದೆ ಎನ್ನಲು ನಾನು ಯಾವತ್ತಾದರೂ ಪಕ್ಷ (ಎನ್‌ಸಿಪಿ) ಬಿಟ್ಟು ಹೋಗಿದ್ದೇನೆಯೇ? - ಅಜಿತ್‌ಪವಾರ್, ಎನ್‌ಸಿಪಿ ನಾಯಕ  
ನೀವು ಬಿಟ್ಟು ಹೋಗಿದ್ದು ನಿಮ್ಮ ಮಾನ, ಮರ್ಯಾದೆಯನ್ನು ಮಾತ್ರ.

---------------------
370ನೇ ವಿಧಿ ರದ್ದಾದ ಬಳಿಕ ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಶೂನ್ಯಕ್ಕಿಳಿದಿವೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ  
ಆ ಕೆಲಸವನ್ನು ಸೇನೆಯೇ ವಹಿಸಿಕೊಂಡಿದೆ ಎನ್ನುವ ಆರೋಪಗಳಿವೆ.

---------------------
  
ಮಹಾರಾಷ್ಟ್ರದಲ್ಲಿ ಆದ ಬೆಳವಣಿಗೆಯಿಂದ ಎಲ್ಲ ರಾಜಕೀಯ ಪಕ್ಷಗಳ ನೈತಿಕತೆ ಕುಸಿದಿರುವುದು ನೋಡಿ ಬೇಸರವಾಗುತ್ತಿದೆ - ವಿಶ್ವೇಶ ತೀರ್ಥಸ್ವಾಮೀಜಿ, ಪೇಜಾವರ ಮಠ
 ಸನ್ಯಾಸಿಗಳ ನೈತಿಕತೆ ಕುಸಿದಿರುವುದರ ಬಗ್ಗೆ ಬೇಸರವಿಲ್ಲವೆ?
---------------------

ಎಲ್ಲವೂ ಕುಸಿಯುತ್ತಿದೆ ಎಂಬುದು ಸರಿಯಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ 
ಈರುಳ್ಳಿ ಬೆಲೆ ಏರುತ್ತಿದೆ ಎಂಬ ಕಾರಣಕ್ಕಿರಬೇಕು.

---------------------
  
ನಾವು ಅಣಬೆಗಳ ರೀತಿ ಬೆಳೆದು ಬಂದವರಲ್ಲ, ಹೋರಾಟದ ಮೂಲಕ ಬೆಳೆದವರು - ಆರ್. ಅಶೋಕ್, ಸಚಿವ  
ಯಡಿಯೂರಪ್ಪ ವಿರುದ್ಧ ಹೋರಾಟ ಮಾಡುವ ಮೂಲಕ ಇರಬೇಕು.

---------------------

ನಾನು ಕೂಡಾ ರೈತ ಮನೆತನದಿಂದ ಬಂದವನು - ಪ್ರತಾಪ ಸಿಂಹ, ಸಂಸದ
  ಆ ಕಾರಣಕ್ಕಾಗಿ ರೈತರಿಗೆ ದ್ರೋಹವೆಸಗುವ ಹಕ್ಕಿದೆ ಅಂತೀರಾ?

---------------------
ಒಬ್ಬ ವ್ಯಕ್ತಿಯನ್ನು ಒಮ್ಮೆ ಮಾತ್ರ ಫೂಲ್ ಮಾಡಬಹುದು. ಪ್ರತೀ ಸಲವೂ ಫೂಲ್ ಮಾಡಲು ಆಗುವುದಿಲ್ಲ - ಸದಾನಂದ ಗೌಡ, ಕೇಂದ್ರ ಸಚಿವ
ಮುಂದಿನ ಬಾರಿ ಮೋದಿ ವಿಫಲರಾಗುತ್ತಾರೆ ಎಂದು ಅರ್ಥವೆ?
---------------------

share
ಪಿ.ಎ.ರೈ
ಪಿ.ಎ.ರೈ
Next Story
X