Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎನ್‌ಕೌಂಟರ್‌ ನ ಸಾಚಾತನ ಪ್ರಶ್ನಿಸಿದ...

ಎನ್‌ಕೌಂಟರ್‌ ನ ಸಾಚಾತನ ಪ್ರಶ್ನಿಸಿದ ಆರೋಪಿಗಳ ಕುಟುಂಬಸ್ಥರು

ವಾರ್ತಾಭಾರತಿವಾರ್ತಾಭಾರತಿ6 Dec 2019 10:57 PM IST
share
ಎನ್‌ಕೌಂಟರ್‌ ನ ಸಾಚಾತನ ಪ್ರಶ್ನಿಸಿದ ಆರೋಪಿಗಳ ಕುಟುಂಬಸ್ಥರು

ಹೈದರಾಬಾದ್,ಡಿ.6: ತೆಲಂಗಾಣದ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಎನ್‌ ಕೌಂಟರ್‌ನಲ್ಲಿ ಹೊಡೆದುರುಳಿಸಿರುವುದನ್ನು ಒಂದೆಡೆ ಸಾರ್ವಜನಿಕರು ಪ್ರಶಂಸಿಸುತ್ತಿದ್ದರೆ ಇನ್ನೊಂದೆಡೆ ಹತ್ಯೆಯಾದ ಆರೋಪಿಗಳ ಕುಟುಂಬಸ್ಥರು ಈ ಎನ್‌ ಕೌಂಟರ್‌ ನ ಸಾಚಾತನದ ಬಗ್ಗೆ ಪ್ರಶ್ನಿಸಿದ್ದಾರೆ.

ಎನ್‌ಕೌಂಟರ್‌ಗೆ ಬಲಿಯಾದ ನಾಲ್ವರಲ್ಲಿ ಒಬ್ಬನಾದ ಚಿಂತಾಕುಂಟ ಚೆನ್ನಕೇಶವಲುವಿನ ಹದಿನೇಳು ವರ್ಷ ವಯಸ್ಸಿನ ಪತ್ನಿ ರೇಣುಕಾ ರೋದಿಸುತ್ತಾ, ತನ್ನನ್ನು ಕೂಡಾ ತನ್ನ ಗಂಡ ಹತ್ಯೆಯಾದ ಸ್ಥಳದಲ್ಲೇ ತನ್ನನ್ನು ಕೂಡಾ ಕೊಲ್ಲಿ. ಆತನಿಲ್ಲದೆ ತಾನು ಬದುಕಲಾರೆ ಎಂದು ಹೇಳಿದ್ದಾಳೆ.

ನಾರಾಯಣಪೇಟೆ ಜಿಲ್ಲೆಯ ಮಖ್ತಾಲ್ ಬ್ಲಾಕಂನ ನಿವಾಸಿಯಾದ ಚೆನ್ನಕೇಶವಲು ಮಾತ್ರವೇ ಈ ನಾಲ್ವರು ಆರೋಪಿಗಳಲ್ಲಿ ವಿವಾಹಿತ. ಎನ್‌ಕೌಂಟರ್‌ನಲ್ಲಿ ಆತ ಮೃತಪಟ್ಚಿರುವ ಸುದ್ದಿ ತಿಳಿದಿರುವಂತೆಯೇ ಇಡೀ ಕುಟುಂಬ ಆಘಾತಗೊಂಡಿದೆ.

ತನ್ನ ಪತಿಯನ್ನು ಪೊಲೀಸರು ವಿಚಾರಣೆಗಾಗಿ ಕೊಂಡೊಯ್ದಿದ್ದರು. ಆತನನ್ನು ಪ್ರಶ್ನಿಸಿ ವಾಪಸ್ ಕರೆತರುವುದಾಗಿ ಅವರು ತಿಳಿಸಿದ್ದರು. ಆದರೆ ಅವರು ಆತನನ್ನು ನಿರ್ದಯವಾಗಿ ಸಾಯಿಸಿದ್ದಾರೆಂದು ಆಕೆ ವರದಿಗಾರರೊಂದಿಗೆ ರೋದಿಸುತ್ತಾ ಹೇಳಿದ್ದಾರೆ.

ಚೆನ್ನಕೇಶವಲು ಜೊತೆ ವಿವಾಹವಾಗಿ ತನಗೆ ಒಂದು ವರ್ಷ ಕೂಡಾ ಕಳೆದಿಲ್ಲವೆಂದು ಹೇಳಿದ ಆಕೆ, ಒಂದು ವೇಳೆ ತನ್ನ ಪತಿ ನಿಜಕ್ಕೂ ಅಪರಾಧ ಎಸಗಿದ್ದರೆ ನ್ಯಾಯಾಲಯ ವಿಚಾರಣೆ ನಡೆಸಿ, ಆತನಿಗೆ ಮರಣದಂಡನೆ ನೀಡಬಹುದಾಗಿತ್ತು. ಎಂದು ಆಕೆ ಅಲವತ್ತುಕೊಂಡಿದ್ದಾಳೆ.

 ಪ್ರಕರಣದ ಇನ್ನೋರ್ವ ಆರೋಪಿ ಮುಹಮ್ಮದ್ ಆರೀಫ್‌ನ ತಾಯಿ, ತನ್ನ ಪುತ್ರನ ಎನ್‌ಕೌಂಟರ್‌ಗೆ ಬಲಿಯಾದ ಸುದ್ದಿ ಕೇಳುತ್ತಿದ್ದಂತೆಯೇ ಹೈದರಾಬಾದ್ ಸಮೀಪದ ಜಕ್ಕುಲಾರೆ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಕುಸಿದುಬಿದ್ದಿದ್ದಾರೆ ಹಾಗೂ ತನ್ನನ್ನು ಭೇಟಿಯಾಗಲು ಬಂದ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.

ಇತರ ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೂ ಇದೇ ಶಿಕ್ಷೆ ನೀಡಿ

ಪ್ರಕರಣದ ಇನ್ನೋರ್ವ ಆರೋಪಿ ಜೊಲ್ಲು ಶಿವನ ತಂದೆ ಜೊಲ್ಲು ರಾಜಪ್ಪ ಅವರು ಪೊಲೀಸರು ಎನ್‌ಕೌಂಟರ್ ನಡೆಸಿರುವುರಲ್ಲಿ ತಪ್ಪೇನೂ ಇಲ್ಲವೆಂದು ಹೇಳಿದ್ದಾರೆ. ಪೊಲೀಸರು ನನ್ನ ಪುತ್ರನನ್ನು ಆತ ಎಸಗಿದ ಅಪರಾಧಕ್ಕಾಗಿ ಕೊಂದಿದ್ದೇ ಆಗಿದ್ದಲ್ಲಿ, ಇದೇ ರೀತಿ ಶಿಕ್ಷೆಯನ್ನು ಇತರ ಅತ್ಯಾಚಾರಿಗಳಿಗೂ ನೀಡಬೇಕಾಗಿದೆ ಎಂದು ಆತ ಆಗ್ರಹಿಸಿದ್ದಾರೆ.

ಜೊಲ್ಲು ನವೀನ್‌ನ ತಂದೆ ಯೆಲ್ಲಪ್ಪ , ತನ್ನ ಪುತ್ರನನ್ನು ಪೊಲೀಸರು ನಿರ್ದಯವಾಗಿ ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಪೊಲೀಸರು ನನಗೆ ನನ್ನ ಪುತ್ರನನ್ನು ಭೇಟಿಯಾಗಿ ಮಾತನಾಡಲು ಕೂಡಾ ಅವಕಾಶ ನೀಡಲಿಲ್ಲ. ನನ್ನ ಮಗ ಹಾಗೂ ಇತರರು ಅಪರಾಧಿಗಳೆಂದು ಸಾಬೀತುಪಡಿಸಲು ಸಾಕಷ್ಟು ಸಮಯಾವಕಾಶವಿತ್ತು. ಕಾನೂನು ಪ್ರಕ್ರಿಯೆ ಮುಗಿಯುವ ಮೊದಲೇ ಆತನನ್ನು ಶಿಕ್ಷಿಸುವ ಅಗತ್ಯವಾದರೂ ಏನಿತ್ತು” ಎಂದವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X