Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅಜ್ಮಾನ್‌ : ತುಂಬೆ ವಿ.ವಿ. ಆಸ್ಪತ್ರೆ...

ಅಜ್ಮಾನ್‌ : ತುಂಬೆ ವಿ.ವಿ. ಆಸ್ಪತ್ರೆ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ10 Dec 2019 11:15 PM IST
share
ಅಜ್ಮಾನ್‌ : ತುಂಬೆ ವಿ.ವಿ. ಆಸ್ಪತ್ರೆ ಉದ್ಘಾಟನೆ

ದುಬೈ : ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ತುಂಬೆ ಸಮೂಹದ ಇತ್ತೀಚೆಗಿನ ಶೈಕ್ಷಣಿಕ ಆಸ್ಪತ್ರೆ ತುಂಬೆ ವಿ.ವಿ. ಆಸ್ಪತ್ರೆಯನ್ನು ಅಜ್ಮಾನ್‌ನ ಯುವ ರಾಜ ಹಾಗೂ ಅಜ್ಮಾನ್ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಕ್ ಅಮ್ಮರ್ ಬಿನ್ ಹುಮೈದ್ ಅಲ್ ನೂಯೈಮಿ ಸೋಮವಾರ ಉದ್ಘಾಟಿಸಿದರು.

ತುಂಬೆ ಸಮೂಹ ಅಜ್ಮಾನ್‌ನಲ್ಲಿ ಒಟ್ಟು 1 ಶತಕೋಟಿ ದಿರ್ಹಂ ವೆಚ್ಚದಲ್ಲಿ ನಿರ್ಮಿಸಿದ ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಆರೋಗ್ಯ ಸೇವೆ ಹಾಗೂ ಸಂಶೋಧನೆಯ ಪ್ರಾದೇಶಿಕ ಕೇಂದ್ರ ತುಂಬೆ ಮೆಡಿಸಿಟಿಯನ್ನು ಕೂಡ ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಡಾ. ತುಂಬೆ ಮೊಯ್ದಿನ್, ಈ ವಲಯದಲ್ಲಿ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಅಸ್ತಿತ್ವಕ್ಕೆ ತರುವ, ಅತ್ಯಾಧುನಿಕ ತಂತ್ರಜ್ಞಾನ, ಅನುಭವಿ ವೈದ್ಯರು, ಅತ್ಯುಚ್ಛ ಸೌಲಭ್ಯ ಬಳಸಿ ಜಾಗತಿಕ ಮಟ್ಟದ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಸಂಶೋಧನೆಯ ಕೇಂದ್ರವಾಗಿಸುವ ನಮ್ಮ ನಿರಂತರ ಪ್ರಯತ್ನವಾಗಿ ತುಂಬೆ ಮೆಡಿಸಿಟಿ ಅಸ್ತಿತ್ವಕ್ಕೆ ಬಂದಿದೆ ಎಂದರು.

ತುಂಬೆ ವಿ.ವಿ. ಆಸ್ಪತ್ರೆ 100ಕ್ಕೂ ಅಧಿಕ ಸಮಾಲೋಚನೆ ಕ್ಲಿನಿಕ್, 100 ಹಾಸಿಗೆಗಳ ದೀರ್ಘಾವಧಿ ಸೇವೆ ಹಾಗೂ ಪುನರ್ವಸತಿ ಘಟಕ, ಪಿಇಟಿ-ಸಿಟಿ ಸ್ಕ್ಯಾನ್ ವ್ಯವಸ್ಥೆ ಇರುವ ಗ್ರಂಥಿ ವಿಜ್ಞಾನದ ಕೇಂದ್ರ, ಇಮೇಜಿಂಗ್‌ನ ಅತ್ಯಾಧುನಿಕ ಕೇಂದ್ರ, ಎಲ್ಲ ಪ್ರಮುಖ ರೋಗಗಳಿಗೆ 10 ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು, 10 ಬೆಡ್‌ಗಳ ಡಯಾಲಿಸಿಸ್ ಘಟಕ, ಕ್ಯಾತ್ ಲ್ಯಾಬ್, ಐಸಿಯು/ಸಿಸಿಯು/ಎನ್‌ಐಸಿಯು/ಪಿಐಸಿಯು ಮೊದಲಾದವುಗಳು ಇರುವ ಅತ್ಯಾಧುನಿಕ ಕುಟುಂಬ ಆರೋಗ್ಯ ಸೇವೆಯ ಕೇಂದ್ರ ತುಂಬೆ ವಿ.ವಿ. ಆಸ್ಪತ್ರೆಯಾಗಿದೆ ಎಂದು ಮಾಹಿತಿ ನೀಡಿದರು.

ಅತ್ಯಾಧುನಿಕ 10 ಲೇಬರ್ ಹಾಗೂ ಹೆರಿಗೆ ಕೊಠಡಿ, ಎನ್‌ಐಸಿಯು, ಎಸ್‌ಸಿಬಿಯು, ವೆಲ್‌ಬೇಬಿ ಘಟಕ ಮೊದಲಾದವು ಸೇರಿದಂತೆ ತಾಯಿ ಹಾಗೂ ಮಗುವಿನ ಆರೋಗ್ಯ ಸೇವೆಗೆ ಆಸ್ಪತ್ರೆಯಲ್ಲಿ ಒಂದು ಮಹಡಿಯನ್ನು ಮೀಸಲಿರಿಸಲಾಗಿದೆ. ತುಂಬೆ ವಿ.ವಿ. ಆಸ್ಪತ್ರೆಯಲ್ಲಿ ಇರುವ ತುಂಬೆ ಫಾರ್ಮಸಿ ತ್ವರಿತ ಸೇವೆ, ನಿಖರತೆ ಹಾಗೂ ಔಷಧ ಸುರಕ್ಷತೆಗೆ ಔಷಧವನ್ನು ಸಿದ್ಧವಾಗಿರಿ ಸಲು ಹಾಗೂ ವಿತರಿಸಲು ಅಟೋಮ್ಯಾಟೆಡ್ ರೋಬಟಿಕ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ದೇಶದ ಅತಿ ದೊಡ್ಡ ರೋಬಟಿಕ್ ಫಾರ್ಮಸಿಯಾಗಿದೆ. ರೋಗಿಗೆ ಉತ್ತಮ ವಿಶ್ರಾಂತಿ ಹಾಗೂ ಸಂಪೂರ್ಣ ಗುಣಮುಖನಾಗಲು 'ಚಿಕಿತ್ಸಕ ಗಾರ್ಡನ್' ಇದೆ. ಇದರೊಂದಿಗೆ ಪ್ರೆಸಿಡೆನ್ಶಿಯಲ್ ಸೂಟ್ ರೂಮ್, ವಿಐಪಿ ರೂಮ್, ಖಾಸಗಿ ರೂಮ್ ಮೊದಲಾದ ಸೌಲಭ್ಯ ಲಭ್ಯವಿವೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರವಾಸಿಗಳಿಗೆ ಸೇವೆ ನೀಡಲು ಬದ್ಧ ವೈದ್ಯಕೀಯ ಪ್ರವಾಸೋದ್ಯಮ ವಿಭಾಗ ಇದೆ. ಇದಲ್ಲದೆ, ಹಲವು ರೆಸ್ಟೋರೆಂಟ್, ಸಿನೆಮಾ, ಕಾಫಿ ಶಾಪ್‌ಗಳು, ಹೆಲ್ತ್ ಕ್ಲಬ್, ಸಾವಿರಕ್ಕೂ ಅಧಿಕ ಪಾರ್ಕಿಂಗ್ ಅವಕಾಶ, ರೋಗಿಗಳಿಗೆ ಸೇವೆ ನೀಡಲು 50 ವಿವಿಧ ಭಾಷೆಗಳ 25 ವಿವಿಧ ದೇಶದ ವೃತ್ತಿಪರ ಕಾರ್ಯ ಪಡೆಯನ್ನು ಆಸ್ಪತ್ರೆ ಹೊಂದಿದೆ ಎಂದು ವಿವರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X