Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈ ಎನ್‌ಕೌಂಟರ್ ಅಗತ್ಯವಿತ್ತೇ?

ಈ ಎನ್‌ಕೌಂಟರ್ ಅಗತ್ಯವಿತ್ತೇ?

ವಾರ್ತಾಭಾರತಿವಾರ್ತಾಭಾರತಿ10 Dec 2019 6:14 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share

ಮಾನ್ಯರೇ,

ಹೈದರಾಬಾದ್‌ನಲ್ಲಿ ನಾಲ್ಕು ಜನ ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದು ನಿಜವಾಗಿ ಅದು ಆ ಅತ್ಯಾಚಾರಿಗಳಿಗೆ ಕೊಟ್ಟ ಶಿಕ್ಷೆಯಲ್ಲ, ಅದು ಬಹುಮಾನವೆಂದೇ ಪರಿಗಣಿಸಬೇಕು. ಇದೊಂದು ರೀತಿಯ ದಯಾ ಮರಣವೇ ಆಗಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರೆ ಹೇಗೂ ತ್ವರಿತ ನ್ಯಾಯಾಲಯದಲ್ಲಿ ಅವರಿಗೆ ಖಂಡಿತಾ ಗಲ್ಲು ಶಿಕ್ಷೆಯಾಗುತ್ತಿತ್ತು. ಹೆಚ್ಚೆಂದರೆ ಅದಕ್ಕೆ ಎರಡು ಮೂರು ತಿಂಗಳು ಹಿಡಿಯುತ್ತಿತ್ತು. ನಂತರ ಅವರು ಹೈಕೋರ್ಟ್ ಸುಪ್ರೀಂ ಕೋರ್ಟಿಗೆ ಅಪೀಲ್ ಮಾಡಿದ್ದರೂ ಹೆಚ್ಚೆಂದರೆ ಅದಕ್ಕೆ ಆರು ತಿಂಗಳು ತಗಲುತ್ತಿತ್ತು. ಅಷ್ಟು ದಿನವೂ ಅವರು ಸ್ವಲ್ಪ ಸ್ವಲ್ಪವೇ ಸಾಯುತ್ತಿದ್ದರು. ಈ ಮಾನಸಿಕ ಹಿಂಸೆ ಸಹಿಸಿಕೊಳ್ಳುವುದು ಅವರಿಗೆ ಅಸಾಧ್ಯವಾಗಿರುತ್ತಿತ್ತು. ಈಗ ಎನ್‌ಕೌಂಟರ್ ಮಾಡಿ ಆ ನಾಲ್ವರಿಗೂ ತಿಂಗಳುಗಟ್ಟಲೇ ಆಗಬಹುದಾಗಿದ್ದ ಭೀಕರ ಮಾನಸಿಕ ಚಿತ್ರಹಿಂಸೆಯನ್ನು ಪೊಲೀಸರು ಒಂದೇ ಏಟಿಗೆ ತಡೆದಂತಾಯಿತು.

ಕೋಲ್ಕತಾದ ಧನಂಜಯ ಚಟರ್ಜಿಯ ಚರಿತ್ರೆ ಓದಿದವರಿಗೆ ಇದೆಲ್ಲಾ ಸರಿಯಾಗಿ ಅರ್ಥವಾಗುತ್ತದೆ. 1992ರಲ್ಲಿ ಒಂದು ಹೈಸ್ಕೂಲ್ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಧನಂಜಯ ಚಟರ್ಜಿಯನ್ನು ಕೊನೆಗೆ ಗಲ್ಲಿಗೆ ಏರಿಸಿದ್ದು 2004ರಲ್ಲಿ. ಹನ್ನೆರಡು ವರ್ಷಗಳ ಕಾಲ ಅವನು ಜೈಲಿನಲ್ಲಿ ಮಾನಸಿಕ ಹಿಂಸೆಯಿಂದ ಜರ್ಜರಿತನಾಗಿ ಗಲ್ಲಿಗೇರುವ ದಿನ ಹತ್ತಿರ ಬರುತ್ತಿರುವಂತೆ ಹುಚ್ಚನಾಗಿ ಬಿಟ್ಟಿದ್ದ. ಅವನನ್ನು 12 ವರ್ಷ ಗಮನಿಸುತ್ತಿದ್ದ ಜೈಲು ಸಿಬ್ಬಂದಿಯ ಸಂದರ್ಶನವಿದ್ದ ಸವಿಸ್ತಾರ ಲೇಖನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 2013ರಲ್ಲಿ ಆದ ನಿರ್ಭಯಾ ಪ್ರಕರಣದಲ್ಲಿಯೂ ಒಬ್ಬ ಆರೋಪಿ ಮಾನಸಿಕ ಹಿಂಸೆ ತಡೆಯಲಾರದೆ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಅದೇ ರೀತಿ ಈ ಹೈದರಾಬಾದಿನ 4 ಅತ್ಯಾಚಾರಿಗಳಿಗೂ ಮಾನಸಿಕ ಹಿಂಸೆ ಮತ್ತು ಪ್ರಾಯಶ್ಚಿತ ಆಗಬೇಕಿತ್ತು. ಹೈದರಾಬಾದ್ ಎನ್‌ಕೌಂಟರ್ ಪೊಲೀಸರ ಕಾರ್ಯಕ್ಷಮತೆಗೂ ಘೋರ ಅವಮಾನ.

ನಾಲ್ಕು ಜನ ಪೀಚಲು ಹುಡುಗರು ಹತ್ತು ಜನ ಪೈಲ್ವಾನರಂತಿದ್ದ ಪೊಲೀಸರನ್ನು ಹೊಡೆದು ಕೆಡವಿ ಅವರಿಂದ ಬಂದೂಕು ಕಸಿದು ಕೊಂಡು ಪೊಲೀಸರ ಮೇಲೆಯೇ ಗುಂಡಿನ ದಾಳಿ ಮಾಡಿದರು ಅನ್ನುವುದು ಪೊಲೀಸರ ದೈಹಿಕ ಕ್ಷಮತೆಯ ಮೇಲೆಯೇ ಪ್ರಶ್ನೆ ಹುಟ್ಟು ಹಾಕುತ್ತದೆ. ಇಂತಹ ದುರ್ಬಲ ಪೊಲೀಸರು ಇಲಾಖೆಯಲ್ಲಿರಲು ಅರ್ಹರೇ? ಈ ಆರೋಪಿಗಳು ಈ ಒಂದು ಅತ್ಯಾಚಾರ ಮಾತ್ರವಲ್ಲ, ಆಂಧ್ರ, ತಮಿಳುನಾಡು, ಕರ್ನಾಟಕದಲ್ಲಿಯೂ ಇಂತಹ ಅನೇಕ ಅಪರಾಧಗಳನ್ನು ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದರು. ಅದು ನಿಜವೇ ಆಗಿದ್ದರೆ ಈ ಎನ್‌ಕೌಂಟರ್‌ನಿಂದ ಅವರು ಮಾಡಿರಬಹುದಾದ ಬೇರೆ ಅಪರಾಧಗಳು ಮುಚ್ಚಿ ಹೋಗುವಂತೆ ಆಯಿತು ತಾನೇ? ಏನೇ ಇರಲಿ, ಒಂದು ವೇಳೆ ಈ ನಾಲ್ಕು ಅತ್ಯಾಚಾರಿಗಳು ಮೇಲ್ಜಾತಿಯವರಾಗಿದ್ದು ಆ ನತದೃಷ್ಟ ಹುಡುಗಿ ಕೆಳಜಾತಿಯವಳಾಗಿದ್ದಿದ್ದರೆ ಆರೋಪಿಗಳ ಎನ್‌ಕೌಂಟರ್ ಆಗುತ್ತಿತ್ತೇ? 

ಉದಯರಾಜ್ ಆಳ್ವಾ,

ಕಾಟಿಪಳ್ಳ, ಮಂಗಳೂರು

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X