Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಚಿನಾರ್ ವೃಕ್ಷದ ಅಳು

ಚಿನಾರ್ ವೃಕ್ಷದ ಅಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ11 Dec 2019 6:28 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಚಿನಾರ್ ವೃಕ್ಷದ ಅಳು

ಭಾರತ ಎನ್ನುವ ಬೇರು ನೂರಾರು ಭಾಷೆಗಳ ಕೊಂಬೆ ರೆಂಬೆಗಳನ್ನು ಹಿಡಿದುಕೊಂಡಿದೆ. ಭಾಷೆ ಬೇರೆಯಾದಾಕ್ಷಣ ಬದುಕು, ನೋವು ಸಂಕಟಗಳು ಬೇರೆ ಬೇರೆಯಾಗಿರುವುದಿಲ್ಲ. ಅದರ ಅಭಿವ್ಯಕ್ತಿಯ ವಿಧಾನದಲ್ಲಿ ಆಯಾ ಭಾಷೆ ಸಂಸ್ಕೃತಿಯ ಹಿನ್ನೆಲೆಯಿರುತ್ತದೆ. ಒಂದು ಕತೆ ಒಂದು ಭಾಷೆಯ ಮೂಲಕ ಅಭಿವ್ಯಕ್ತಿಗೊಳ್ಳುವಾಗ, ಆ ನೆಲದ ಸಂಸ್ಕೃತಿಯನ್ನೂ, ಪರಂಪರೆಯನ್ನೂ ನಮಗೆ ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಭಾರತದ ವಿವಿಧ ಭಾಷೆಗಳ ಸಣ್ಣ ಕಥೆಗಳನ್ನು ‘ಚಿನಾರ್ ವೃಕ್ಷದ ಅಳು’ ಹೆಸರಿನಲ್ಲಿ ಡಾ. ಬಸವರಾಜ ಸಾದರ ಅವರು ಕನ್ನಡಕ್ಕೆ ತಂದಿರುವುದು ಮಹತ್ವದ ಕೆಲಸವಾಗಿದೆ. ಇಲ್ಲಿರುವ ವಿವಿಧ ಕಥೆಗಳು ಭಾರತದ ವೈವಿಧ್ಯತೆಯನ್ನು ಎತ್ತಿ ಹಿಡಿಯುತ್ತದೆ. ಇಲ್ಲಿರುವ ಕಥೆಗಳ ಕುರಿತಂತೆ ಡಾ. ಎಚ್. ಎಸ್. ರಾಘವೇಂದ್ರರಾವ್ ಅವರು ಹೀಗೆ ಬರೆಯುತ್ತಾರೆ ‘‘ಈ ಕಥೆಗಳು ಹೆಚ್ಚು ಆಧುನಿಕವೂ, ಸಮಕಾಲೀನವೂ ಆದ ಸಮಸ್ಯೆಗಳನ್ನು ಎದುರಿಸುತ್ತವೆ...ಇಲ್ಲಿನ ಅಷ್ಟೂ ಕಥೆಗಳು ಯಾವುದೋ ಒಂದು ಐಡಿಯಾಲಜಿ ಅಥವಾ ಐಡೆಂಟಿಟಿಗೆ ಮೀಸಲಾಗದೆ, ಹೆಚ್ಚು ಮಾನವೀಯವಾದ ನೆಲೆಗಳನ್ನು ಅನುಸಂಧಾನ ಮಾಡುತ್ತದೆ. ಯಾರೋ ಒಬ್ಬನನ್ನು ಅಥವಾ ಒಂದು ವರ್ಗವನ್ನು ಶತ್ರು ಎಂದು ಗುರುತಿಸದೆ, ಸನ್ನಿವೇಶದ ಸಂಕೀರ್ಣತೆಯನ್ನು ಗ್ರಹಿಸುತ್ತವೆ. ...’’

 ಚಿನಾರ್ ವೃಕ್ಷದ ಅಳು ಎನ್ನುವುದೇ ಒಂದು ಅಪರೂಪದ ರೂಪಕ ಮತ್ತು ವರ್ತಮಾನದ ರಾಜಕೀಯ ಸಂದರ್ಭದಲ್ಲಿ ಅದು ಇನ್ನಷ್ಟು ಮಹತ್ವವನ್ನು ಪಡೆಯುತ್ತದೆ. ಕಾಶ್ಮೀರಿ ಜನತೆಯ ಬದುಕಿನಲ್ಲಿ ಗಾಢವಾಗಿ ಬೆರೆತಿರುವ ಚಿನಾರ್ ವೃಕ್ಷವು ಆ ಸಂಸ್ಕೃತಿಯ ಒಂದು ಮಹಾನ್ ರೂಪಕದಂತಿದೆ. ಒಂದು ಪವಿತ್ರ ಮರವಾಗಿ ಮಾತ್ರವಲ್ಲ, ಕಾಶ್ಮೀರಿಗಳ ಅಸ್ಮಿತೆಯ ಸಂಕೇತವಾಗಿಯೂ ಅದು ಮಹತ್ವವನ್ನು ಪಡೆದಿದೆ. ಆಧುನಿಕತೆಯ ಭರಾಟೆ ಹಾಗೂ ಮನುಷ್ಯನ ಸ್ವಾರ್ಥದಿಂದಾಗಿ ಇಂತಹ ವೃಕ್ಷ ಈಗ ಅವಸಾನದ ಅಂಚಿಗೆ ಹೋಗುತ್ತಿದೆ. ಚಿನಾರ್ ವೃಕ್ಷದ ಅವಸಾನವೆಂದರೆ ಕಾಶ್ಮೀರಿಗರಿಗೆ ತಮ್ಮ ಸಂಸ್ಕೃತಿಯ ಅವಸಾನವೇ ಎಂಬ ನೋವು ಕಾಡುತ್ತಿದೆ. ಇಂಥ ಮರವೊಂದರ ಅವಸಾನದ ನೋವನ್ನೇ ಧ್ವನಿಪೂರ್ಣವಾಗಿ ಕಥೆಯಾಗಿಸಿದ್ದಾರೆ ಸ್ನೇಹಾ ಮೊಂಟು. ಕೊಂಕಣಿ ಭಾಷೆಯಲ್ಲಿ ದಾಮೋದರ ವೌಜೋ ಬರೆದ ಬರ್ಗರ್, ಅಸ್ಸಾಮಿ ಭಾಷೆಯಲ್ಲಿ ಸಂಜೀವ ಪೋಳ್ ಡೇಕಾ ಅವರ ನಾಚಿಕೆ, ಒರಿಯಾ ಭಾಷೆಯಲ್ಲಿ ಭೂಪೇನ್ ಮಹಾಪಾತ್ರ ಅವರ ಎಂ. ಕೆ. ಗಾಂಧಿ, ಬಂಗಾಳಿಯಲ್ಲಿ ವಿನೋದ ಘೋಸಾಲ್ ಅವರ ಎಸ್‌ಎಮ್‌ಎಸ್, ಒರಿಯಾ ಭಾಷೆಯ ಜಾನಪದ ಕಥೆ ಕಕ್ಕಸಿನವನ ಕನಸು, ಮಲಯಾಳಂ ಭಾಷೆಯಲ್ಲಿ ಈ. ಪಿ. ಕುಮಾರ್ ಬರೆದ ಕಣ್ಣೀರಿನಾಕಳು, ಬಂಗಾಳಿಯಲ್ಲಿ ದಿವ್ಯೇಂದು ಪಲಿತ್ ಬರೆದ ಅಬನ್, ಸಿಂಧಿಯಲ್ಲಿ ವಾಸದೇವ್ ಮೋಹಿ ಸಿದ್ನಾನಿ ಬರೆದ ಒಂದು ಬದಲಾವಣೆ ಕಥೆಗಳು ಇಲ್ಲಿವೆ. ಒಟ್ಟು ವಿವಿಧ ಭಾಷೆಗಳ 11 ಕಥೆೆಗಳಿವೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 96. ಮುಖಬೆಲೆ 100 ರೂಪಾಯಿ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X