Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೊಡ್ಡ ಮಟ್ಟಿನ ಅಸಹಕಾರ ಚಳವಳಿ ಬೇಕಾಗಿದೆ

ದೊಡ್ಡ ಮಟ್ಟಿನ ಅಸಹಕಾರ ಚಳವಳಿ ಬೇಕಾಗಿದೆ

-ಸುರೇಶ್ ಭಟ್, ಬಾಕ್ರಬೈಲ್-ಸುರೇಶ್ ಭಟ್, ಬಾಕ್ರಬೈಲ್13 Dec 2019 11:50 PM IST
share

ಮಾನ್ಯರೇ,

ನಿಮ್ಮ ಜೇಬಿಗೆ 15 ಲಕ್ಷ ಹಾಕುತ್ತೇವೆ, ಭ್ರಷ್ಟಾಚಾರವನ್ನು ನಿರ್ಮೂಲನ ಗೊಳಿಸುತ್ತೇವೆ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಾಡುತ್ತೇವೆ, ಒಂದು ರೂಪಾಯಿಗೆ ಒಂದು ಡಾಲರ್ ಕೊಡಿಸುತ್ತೇವೆ ಎಂಬಿತ್ಯಾದಿ ಗಗನ ಕುಸುಮಗಳನ್ನು ತೋರಿಸಿದವರ ಕೈಕರಣಗಳಿಂದ ಕೂಡಿದ ಅತ್ಯದ್ಭುತ ಭಾಷಣಗಳಿಗೆ ಮರುಳಾಗಿ ಅವರಿಗೆ ವೋಟು ಹಾಕಿದ ಜನ ಇಂದು ಗಗನಕ್ಕೇರುತ್ತಿರುವ ಬೆಲೆಗಳು, ಪಾತಾಳಕ್ಕಿಳಿಯುತ್ತಿರುವ ಆದಾಯ, ನಿರುದ್ಯೋಗ ಮುಂತಾದ ಹತ್ತುಹಲವು ಗಂಭೀರ ಸಮಸ್ಯೆಗಳಿಂದ ಕಂಗೆಟ್ಟು ಕೈ ಕೈ ಹಿಸುಕುವಂತಾಗಿದೆ. ನಮ್ಮಲ್ಲಿ ಸಿನೆಮಾ ಹೀರೋಗಳನ್ನು, ಗತಕಾಲದ ರಾಜಮಹಾರಾಜರನ್ನು ಅತಿಯಾಗಿ ವೈಭವೀಕರಿಸಿ ಆರಾಧಿಸುವ ಸಂಸ್ಕೃತಿ ಇನ್ನೂ ಇರುವಾಗ ಹೀಗೆ ಮೋಸ ಹೋಗುವುದಕ್ಕೆ ಯಾರೇನು ಮಾಡಲು ಸಾಧ್ಯ? ಜನ ತಾವಾಗಿಯೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದಿರಲಿ, ಈಗ ಒಮ್ಮೆ ಅಧಿಕಾರವನ್ನು ತಮ್ಮದಾಗಿಸಿಕೊಂಡವರು ಅದನ್ನು ಸುಲಭದಲ್ಲಿ ಬಿಟ್ಟುಕೊಡಲಾರರು.

ಮುಂದಿನ ಚುನಾವಣೆಗಳ ವೇಳೆ ಹೊಸ ಹೊಸ ಆಮಿಷಗಳೊಂದಿಗೆ; ಸರ್ಜಿಕಲ್ ಸ್ಟ್ರೈಕ್, ಫುಲ್ವಾಮಗಳಂಥ ಹೊಸ ಹೊಸ ಗಿಮಿಕ್‌ಗಳೊಂದಿಗೆ ಮತ್ತೆ ಜನರ ಕಣ್ಣಿಗೆ ಮಂಕುಬೂದಿ ಎರಚಲು ಬರುತ್ತಾರೆ ಅಥವಾ ಸರ್ವಾಧಿಕಾರ ಚಲಾಯಿಸಿ ಚುನಾವಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಲೂಬಹುದು. ಏಕೆಂದರೆ ನಾಝಿಗಳ ಹಾಗೆ ತಮ್ಮ ಸಿದ್ಧಾಂತದ ಮೂಲ ಅಜೆಂಡಾವನ್ನು ಕಾರ್ಯಗತಗೊಳಿಸುವ ತಹತಹಿಕೆ ಇಂಥವರ ಕೈಯಲ್ಲಿ ಏನನ್ನೂ ಮಾಡಿಸಬಲ್ಲುದು. ಆಗ ಜನಸಾಮಾನ್ಯರು ಇದನ್ನೆಲ್ಲ ಅಸಹಾಯಕರಾಗಿ ನೋಡುತ್ತಾ, ಸಕಲ ಸಂಕಷ್ಟಗಳನ್ನು ಅನುಭವಿಸುತ್ತಾ, ಕಾಲಿಗೆ ಬೇಡಿಹಾಕಿರುವಂತೆ ಬಾಯ್ಮುಚ್ಚಿಕೊಂಡು ಬಿದ್ದಿರುವ ಸನ್ನಿವೇಶ ನಿರ್ಮಾಣವಾಗಲಿದೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿರುವ ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣತಂತ್ರವನ್ನು ಗಟ್ಟಿಗೊಳಿಸಲು ವಿಫಲಗೊಂಡಿರುವ ಫಲವಾಗಿ ನೈತಿಕಶಕ್ತಿಯನ್ನು ಕಳೆದುಕೊಂಡು ಸಂಪೂರ್ಣ ಬಲಹೀನವಾಗಿರುವ ವಿರೋಧ ಪಕ್ಷಗಳು ಇಂದು ಜನರನ್ನು ಈ ದುರಾಡಳಿತದ ವಿರುದ್ಧ ಒಗ್ಗೂಡಿಸುವ ಸ್ಥಿತಿಯಲ್ಲಿ ಇವೆಯೇ? ಹೀಗಿರುವಾಗ ಜನರ ಮುಂದಿರುವ ಏಕೈಕ ಅಹಿಂಸಾತ್ಮಕ ಮಾರ್ಗವೆಂದರೆ ಗಾಂಧೀಜಿ ಕಲಿಸಿಕೊಟ್ಟಿರುವ ಅಸಹಕಾರ ಚಳವಳಿ.

ಗಾಂಧೀಜಿ ಅಂದಿನ ದುಷ್ಟ, ವಸಾಹತುಶಾಹಿ ಬ್ರಿಟಿಷ್ ದಬ್ಬಾಳಿಕೆಗೆ ಸವಾಲೆಸೆದು ಅದರ ಕಠೋರ ಕಾಯ್ದೆಗಳ ವಿರುದ್ಧ ಅಹಿಂಸಾತ್ಮಕ ಚಳವಳಿ ನಡೆಸಿದ ರೀತಿಯಲ್ಲೇ ಈ ಹೊತ್ತಿನ, ಬ್ರಿಟಿಷರಿಗಿಂತ ಹಲವು ಪಟ್ಟು ದುಷ್ಟ, ಫ್ಯಾಶಿಸ್ಟ್ ಸರಕಾರದ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ), ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಮತ್ತು ಭವಿಷ್ಯದಲ್ಲಿ ಬರಬಹುದಾದ ಇನ್ನಷ್ಟು ಸಂವಿಧಾನವಿರೋಧಿ ಕಾನೂನುಗಳ ವಿರುದ್ಧ ದೇಶವ್ಯಾಪಿ ಅಸಹಕಾರ ಆಂದೋಲನ ನಡೆಸಬೇಕಾಗಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಅಸಹಕಾರ ತೋರಿಸಿದಾಗ ಸರಕಾರ ಇಡೀ ದೇಶವನ್ನೇ ಸೆರೆಮನೆಯಾಗಿಸುವ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲಿದೆ. ಅಂತಹ ಸಂದರ್ಭದಲ್ಲಿ ಹೋರಾಟಗಾರರಿಗೆ ವಿಶ್ವಸಂಸ್ಥೆ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಮುದಾಯಗಳ ಬೆಂಬಲವೂ ದೊರೆಯುವುದರಲ್ಲಿ ಅನುಮಾನವಿಲ್ಲ. ಆದುದರಿಂದ ನಮ್ಮ ವೈವಿಧ್ಯಮಯ ಭಾರತವನ್ನೂ ಅದರ ಸಾಂವಿಧಾನಿಕ ಮೌಲ್ಯಗಳನ್ನೂ ಕಾಪಾಡಿಕೊಳ್ಳುವುದಕ್ಕಾಗಿ ದೊಡ್ಡ ಮಟ್ಟಿನ ಅಸಹಕಾರ ಚಳವಳಿಯೊಂದನ್ನು ಕೈಗೊಳ್ಳುವ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಾಗಿದೆ. 

share
-ಸುರೇಶ್ ಭಟ್, ಬಾಕ್ರಬೈಲ್
-ಸುರೇಶ್ ಭಟ್, ಬಾಕ್ರಬೈಲ್
Next Story
X